tamanvi
ಕರಾವಳಿ

“ಪ್ರಯಾಣಿಕರೇ ಗಮನಿಸಿ…” – ಪುತ್ತೂರಿನಿಂದ ಮಂಗಳೂರಿಗೆ ಬಸ್ ಇಲ್ಲ! ಉಳಿದ ಪ್ರದೇಶಗಳ ಬಸ್ ಸಂಚಾರದ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಹೇಳಿಕೆ ಹೀಗಿದೆ!

ಮಂಗಳೂರಿಗೆ ದಿನನಿತ್ಯ ತೆರಳುತ್ತಿದ್ದ ಪ್ರಯಾಣಿಕರು ಎಂದಿನಂತೆ ಪುತ್ತೂರು ಬಸ್ ನಿಲ್ದಾಣಕ್ಕೆ ಬಂದರೆ, ಬಸ್ ಇಲ್ಲ...!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಂಗಳೂರಿಗೆ ದಿನನಿತ್ಯ ತೆರಳುತ್ತಿದ್ದ ಪ್ರಯಾಣಿಕರು ಎಂದಿನಂತೆ ಪುತ್ತೂರು ಬಸ್ ನಿಲ್ದಾಣಕ್ಕೆ ಬಂದರೆ, ಬಸ್ ಇಲ್ಲ…!

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ದೊಡ್ಡ ಪ್ರಮಾಣದಲ್ಲೇ ಸೇರಿದ್ದರು. ಮಂಗಳೂರಿಗೆ ತೆರಳುವ ಒಂದೇ ಒಂದು ಬಸ್ ಇಲ್ಲ ಎನ್ನುವುದನ್ನು ತಿಳಿದು, ಗೊಂದಲಕ್ಕೆ ಒಳಗಾದರು.

ಇದೇ ವೇಳೆ, ಕೆ.ಎಸ್.ಆರ್.ಟಿ.ಸಿ. ಅನೌನ್ಸ್’ಮೆಂಟ್ ಮಾಡಿದ್ದು – “ಪ್ರಯಾಣಿಕರೇ ಗಮನಿಸಿ, ಮಂಗಳೂರಿಗೆ ಯಾವುದೇ ಬಸ್ ಸಂಚರಿಸುತ್ತಿಲ್ಲ” ಎಂದು ಮೊಳಗಿತು.

ಮಡಿಕೇರಿಯಿಂದ ಬಸ್ ಆಗಮಿಸಿದ್ದು, ಕೆಲವರು ಬಸ್ ಹತ್ತಿದರು. ಜಿಲ್ಲೆಯಲ್ಲಿ ಸಂಚಾರ ಇಲ್ಲದೇ ಇರುವುದರಿಂದ ಬಸ್ ಎಲ್ಲಿವರೆಗೆ ಹೋಗುತ್ತದೆಯೋ, ಅಲ್ಲಿವರೆಗೆ ಮಾತ್ರ ಹೋಗುವುದಾಗಿ ಕಂಡಕ್ಟರ್ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ, “ಮಂಗಳೂರಿಗೆ ಬಸ್ ಬಿಡುತ್ತಿಲ್ಲ. ಉಳಿದ ಪ್ರದೇಶಗಳಿಗೆ ಬಸ್ ಬಿಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಕಾಳುಮೆಣಸು ಬೆಳೆಗಾರರಿಗೆ ಗುಡ್‌ನ್ಯೂಸ್; ವಿವಿಧ ಯೋಜನೆಗಳಡಿ ಆರ್ಥಿಕ ನೆರವು: ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ವಿವಿಧ ಸರ್ಕಾರಿ ಯೋಜನೆಗಳಡಿ ಆರ್ಥಿಕ ನೆರವು…

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…