tamanvi
ಸ್ಥಳೀಯ

ಅಶಕ್ತರಿಗೆ ನೆರವಾಗುವ ಶ್ರೀನಿಧಿ ಸೇವಾ ಟ್ರಸ್ಟ್ನ ಕಾರ್ಯ ಅಭಿನಂದನಾರ್ಹ : ನಿರ್ಮಲ್ ಕುಮಾರ್ ಜೈನ್

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜನಸೇವೆಯೇ ಜನಾರ್ಧನ ಸೇವೆಯಾಗಿದ್ದು, ನಿಸ್ವಾರ್ಥ ಸೇವೆಯ ರೂಪದಲ್ಲಿ ಭಗವಂತನನ್ನು ಕಾಣಬಹುದು. ಅಶಕ್ತರಿಗೆ ನೆರವಾಗುತ್ತಿರುವ ಶ್ರೀನಿಧಿ ಸೇವಾ ಟ್ರಸ್ಟಿನ ಕಾರ್ಯ ಅಭಿನಂದನಾರ್ಹವಾಗಿದೆ ಎಂದು ವಕೀಲ ನಿರ್ಮಲ್ ಕುಮಾರ್ ಜೈನ್ ಹೇಳಿದರು.
ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪುತ್ತೂರಿನ ಶ್ರೀನಿಧಿ ಸೇವಾ ಟ್ರಸ್ಟ್ (ರಿ.) ನಡೆಸಿಕೊಂಡು ಬರುತ್ತಿರುವ ಅಶಕ್ತರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪದ್ಮಲತಾ ಮಾತನಾಡಿ ಟ್ರಸ್ಟಿನ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿ, ಟ್ರಸ್ಟಿನ ಸಹಾಯಾರ್ಥವನ್ನು ಸದುಪಯೋಗ ಮಾಡಿಕೊಳ್ಳುವಂತೆ ಫಲಾನುಭವಿಗಳಿಗೆ ತಿಳಿಸಿದರು.
ಟ್ರಸ್ಟ್ನ ಅಧ್ಯಕ್ಷೆ ಉಷಾ ಕಾವು ಮಾತನಾಡಿ ಪರಸ್ಪರ ಸಹಾಯವೇ ಟ್ರಸ್ಟಿನ ಉದ್ದೇಶವಾಗಿದೆ. ಮಾನವೀಯತೆ ಇದ್ದಾಗ ಸೇವಾ ಮನೋಭಾವನೆ ಮೂಡಲು ಸಾಧ್ಯವಿದೆ. ಅಶಕ್ತರ ಸೇವೆಯಲ್ಲಿ ದೇವರನ್ನು ಕಾಣಬಹುದು ಎಂಬ ನಿಟ್ಟಿನಲ್ಲಿ ಟ್ರಸ್ಟ್ ಈ ಸೇವಾ ಕಾರ್ಯ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಳಿಕ ೧೮ ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ಫಲಾನುಭವಿಗಳಾದ ಸಾಧು ನಾಯ್ಕ ಹಾಗೂ ರಮ್ಯಾ ಅನಿಸಿಕೆ ವ್ಯಕ್ತಪಡಿಸಿದರು.
ಸೌಜನ್ಯ ಬಿ.ಎಂ ಕೆಯ್ಯೂರು ಸ್ವಾಗತಿಸಿದರು. ಲಕ್ಷ್ಮಣ ವಂದಿಸಿದರು. ರಂಗಕರ್ಮಿ ಕೃಷ್ಣಪ್ಪ ಬಂಬಿಲ ಕಾರ್ಯಕ್ರಮ ನಿರ್ವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಕ್ಷೇತ್ರದ ಪರಿಶಿಷ್ಟ ಜಾತಿ ಕಾಲನಿಗಳ ಅಭಿವೃದ್ಧಿಗೆ ₹3 ಕೋಟಿ ಅನುದಾನ ಬಿಡುಗಡೆ: ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕುಗಳ…

1 of 130