ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಏ. 28ರಂದು ಬೆಳಿಗ್ಗೆ ದಂಡನಾಯಕ ದೈವದ ವಾಲಸರಿ ನೇಮ ನಡೆಯಿತು.

ಸೋಮವಾರ ಸಂಜೆ ಭಂಡಾರದ ಮನೆಯಿಂದ ದೈವಗಳ ಭಂಡಾರ ಆಗಮಿಸಿತ್ತು. ಮಂಗಳವಾರ ಬೆಳಿಗ್ಗೆ ದೈವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದು, ವಾಲಸರಿ ಗದ್ದೆಗೆ ಭಂಡಾರ ತೆರಳಿತು.

ವಾಲಸರಿ ಗದ್ದೆಯಲ್ಲಿ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆದು, ಬಳಿಕ ದೈವಸ್ಥಾನಕ್ಕೆ ಆಗಮಿಸಲಾಯಿತು.

ಇಂದು ದೈವಸ್ಥಾನದಲ್ಲಿ ದಂಡನಾಯಕ, ಉಳ್ಳಾಲ್ತಿ, ಮಲರಾಯ, ಕಾಳರಾಹು ದೈವಗಳ ನೇಮೋತ್ಸವ ಜರುಗಲಿದೆ. ಮಲ್ಲಿಗೆ ಅರ್ಪಿಸಲು ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು.





















