tamanvi
ಸ್ಥಳೀಯ

ಗುಂಡಿಗದ್ದೆ: ಹದಗೆಟ್ಟ ರಸ್ತೆಯ ಕಾಮಗಾರಿ

ಸಂಟ್ಯಾರ್ - ಗುಂಡಿಗದ್ದೆ - ಮರಿಕೆ - ಮಿತ್ತಡ್ಕ ರಸ್ತೆಯ ಗುಂಡಿಗದ್ದೆ ಎಂಬಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಅವರ ನೇತೃತ್ವದಲ್ಲಿ ದುರಸ್ತಿ ಪಡಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಟ್ಯಾರ್ – ಗುಂಡಿಗದ್ದೆ – ಮರಿಕೆ – ಮಿತ್ತಡ್ಕ ರಸ್ತೆಯ ಗುಂಡಿಗದ್ದೆ ಎಂಬಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಅವರ ನೇತೃತ್ವದಲ್ಲಿ ದುರಸ್ತಿ ಪಡಿಸಲಾಯಿತು.

ಗ್ರಾಮ ಪಂಚಾಯತ್ ವಿಶೇಷ ಅನುದಾನದಲ್ಲಿ ಜೆಸಿಬಿ ಮತ್ತು ಟಿಪ್ಪರ್ ಬಳಸಿಕೊಂಡು ಮಳೆಯಿಂದ ಹಾನಿಯಾದ ರಸ್ತೆಗೆ ವೇಸ್ಟ್ ಡಾಂಬರ್ ಮತ್ತು ಜಲ್ಲಿಕಲ್ಲು ಹಾಕಿ, ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿಕೊಡಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಪಿ ಡಿ ಓ ನಾಗೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ಅವರು ವಿಶೇಷ ಅನುದಾನ ತರಿಸಿಕೊಂಡಿದ್ದು, ಕಾಮಗಾರಿ ನಡೆಸಲಾಯಿತು.

ಸ್ಥಳೀಯರಾದ ಶಶಿಧರ ಗೌಡ ಮರಿಕೆ, ಕಿಶೋರ್ ಗೌಡ ಮರಿಕೆ, ಮಹೇಶ್ ಗೌಡ ಮರಿಕೆ, ವಿಶ್ವೇಶ ಮರಿಕೆ ಮಿತ್ತಡ್ಕ, ರಾಜೇಶ್ ಕರ್ಕೇರ ಮರಿಕೆ, ಸದಾಶಿವ ಗುಂಡಿಗದ್ದೆ, ಸುಬ್ರಮಣ್ಯ ನಾಯಕ್ ಮರಿಕೆ ಮೊದಲಾದವರು ಇದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…

1 of 134