tamanvi
ಧಾರ್ಮಿಕ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ವೈಭವದ ಕಿರುಷಷ್ಠಿ ಜಾತ್ರೆ

ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಕಿರುಷಷ್ಠಿ ಜಾತ್ರೆ ವೈಭವದಿಂದ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಕಿರುಷಷ್ಠಿ ಜಾತ್ರೆ ವೈಭವದಿಂದ ನಡೆಯಿತು.
ದೊಡ್ಡ ರಂಗಪೂಜೆಯೊಂದಿಗೆ ಸಮಾಪನಗೊಂಡ ಒಂದು ಮಂಡಲ ರಂಗಪೂಜೆಯ ಬಳಿಕ ವರ್ಷಾವಧಿ ಜಾತ್ರೆ ಆರಂಭಗೊಂಡಿತು.
ಜ. 5ರಂದು ರಾತ್ರಿ ಶ್ರೀ ದೇವರ ಉತ್ಸವ ನಡೆದು, ಕಟ್ಟೆಪೂಜೆ, ಸಂಪ್ಯ ಸವಾರಿ ನಡೆಯಿತು. ಇದೇ ಸಂದರ್ಭ ಆಕರ್ಷಕ ಸುಡುಮದ್ದು ಪ್ರದರ್ಶನ ಜನಾಕರ್ಷಣೀಯವಾಗಿತ್ತು.

ಜ. 6ರಂದು ಶ್ರೀ ದೇವರ ಬಲಿ ಹೊರಟು, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts