ಪುತ್ತೂರು: ಆರ್ಯಾಪು ಗ್ರಾಮದ ಕೊಲ್ಯದಲ್ಲಿ ಭಾರೀ ಮಳೆಗೆ ಭಾನುವಾರ ಬೆಳಿಗ್ಗೆ ಮನೆಯೊಂದು ಕುಸಿದು ಬಿದ್ದಿದೆ.
ಚಿತ್ರಾ ಅವರ ಮನೆ ಇದಾಗಿದ್ದು, ಮನೆ ಕುಸಿತದ ಭೀತಿಯಿಂದ ನಿನ್ನೆಯಷ್ಟೇ ಬೇರೆ ಮನೆಗೆ ತೆರಳಿದ್ದರು. ಇದರ ಬೆನ್ನಿಗೇ ಬರೆ ಜರಿದು, ಮನೆ ಕುಸಿದು ಬಿದ್ದಿದೆ.
ಇತ್ತೀಚೆಗಷ್ಟೇ ಶಾಸಕ ಅಶೋಕ್ ಕುಮಾರ್ ರೈ ಅವರು ಈ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಈ ಅನುದಾನದಲ್ಲಿ ತಡೆಗೋಡೆ ಕಾಮಗಾರಿ ನಡೆದಿದೆ. ಇದರ ನಡುವೆ ಮನೆ ಕುಸಿದು ಬಿದ್ದಿದೆ.
























