ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರನ್ನು ದರ್ಬೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಬಳಿಕ ನಡೆದ ವಾಹನ ಜಾಥಾದಲ್ಲಿ ಕೇಶವ ಅಮೈ ಅವರನ್ನು ತೆರೆದ ವಾಹನದಲ್ಲಿ ಮುಕ್ರುಂಪಾಡಿಯ ಎಸ್.ಆರ್.ಕೆ. ಲ್ಯಾಡರ್ಸ್ ಕಚೇರಿಗೆ ಕರೆದೊಯ್ಯಲಾಯಿತು. ಲ್ಯಾಡರ್ ಗಳನ್ನು ಹೊತ್ತ ಪಿಕಪ್ ಗಳು, ಚೆಂಡೆ ವಾದನದ ವಾಹನ ಜಾಥಾಕ್ಕೆ ಹೊಸ ಮೆರುಗು ನೀಡಿತು.
ಕೇಶವ ಅಮೈ ಅವರ ಪತ್ನಿ ಮಾಲತಿ, ಮಗ ಸೇರಿದಂತೆ ಅಭಿಮಾನಿ ವರ್ಗ ಜೊತೆಗಿದ್ದರು.





















