tamanvi
ಧಾರ್ಮಿಕ

ಹತ್ತೂರ ಒಡೆಯನ ಪುತ್ತೂರು ಜಾತ್ರೆ ಆರಂಭ

D_shiva_bhat
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗುರುವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗುರುವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.

maithri

ದೇವರ ಬಲಿ‌ ಹೊರಟು ನಡೆ ಮುಂದೆ ಬಂದು ನಿಂತಾಗ ಪ್ರಸಾದ ಸ್ವೀಕರಿಸಿ ಬಳಿಕ ಧ್ವಜ ಕಟ್ಟೆಗೆ ಹತ್ತಲಾಯಿತು. ಮೊದಲಿಗೆ ಬೇತಾಳನನ್ನು ಧ್ವಜ ಕಂಬದ ತುದಿಗೆ ಏರಿಸಿ, ಬಳಿಕ ಫಲವಸ್ತುಗಳನ್ನು ಧ್ವಜ ಕಂಬಕ್ಕೆ ಕಟ್ಟಲಾಯಿತು. 

ಬೆಳಿಗ್ಗೆ 9.25ರ ವೃಷಭ ಲಗ್ನ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿತು.

ರವೀಶ ತಂತ್ರಿಗಳ ನೇತೃತ್ವದಲ್ಲಿ ಏ. 18ರವರೆಗೆ ಜಾತ್ರೋತ್ಸವ ನಡೆದು, ಏ. 19ರಂದು ಧ್ವಜಾವರೋಹಣ ನಡೆಯಲಿದೆ. ಬಳಿಕ ದೈವಗಳ ನೇಮೋತ್ಸವ ಜರುಗಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪೋಳ್ಯ ಮಠದ ಬ್ರಹ್ಮಕಲಶ: ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರ ಪಾರಾಯಣ, ಪ್ರಾರ್ಥನೆ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ…