ಕುತೂಹಲ ಕೆರಳಿಸಿದ್ದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕೊನೆಯಾಗಿದೆ. ಇಂದು ಸಂಜೆ 5 ಗಂಟೆಗೆ ಸಚಿವರ ಪ್ರಮಾಣವಚನಕ್ಕೆ ವೇದಿಕೆ ಸಿದ್ಧವಾಗಿದೆ.
ಇದರಲ್ಲಿ ಮಂಕಾಳ್ ವೈದ್ಯರ ಅವರ ಹೆಸರಿತ್ತಾದರೂ, ಕೊನೆ ಕ್ಷಣದಲ್ಲಿ ಮಂಕಾಳ್ ವೈದ್ಯ ಅವರ ಹೆಸರನ್ನು ಕೈಬಿಟ್ಟು, ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನು ಸೇರಿಸಲಾಗಿದೆ. ತಮಗೆ ಸಚಿವ ಸ್ಥಾನ ಸಿಗದೇ ಹೋದರೆ ಶಾಸಕರಾಗಿರುವ ಪತ್ನಿ, ಸಂಸದನಾಗಿರುವ ಮಗ ಸೇರಿದಂತೆ ಎಲ್ಲರೂ ಪಕ್ಷಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸೀಟು ನೀಡಲಾಗಿದೆ ಎಂದು ಹೇಳಲಾಗಿದೆ. ಇನ್ನೊಂದೆಡೆ, ಮಂಕಾಳ್ ವೈದ್ಯ ಅವರು ಸಿಎಂ ಭೇಟಿಯಾಗಲು ಯತ್ನಿಸಿ, ವಿಫಲವಾಗಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿ
- ಪಿಎಂ ನಾರಾಯಣ ಸ್ವಾಮಿ
- ಶಿವರಾಜ್ ತಂಗಡಗಿ
- ರುದ್ರಪ್ಪ ಲಮಾಣಿ
- ಟಿ. ರಘುಮೂರ್ತಿ
- ಬಿ ನಾಗೇಂದ್ರ
- ಜಮೀರ್
- ರಿಜ್ವಾನ್ ಅರ್ಷದ್
- ಸಂತೋಷ್ ಲಾಡ್
- ಮಧು ಬಂಗಾರಪ್ಪ
- ಪುಟ್ಟರಂಗ ಶೆಟ್ಟಿ
- ಅಜಯ್ ಸಿಂಗ್
- ಚೆಲುವರಾಯಸ್ವಾಮಿ
- ಎಂ ಶಿವಲಿಂಗೇಗೌಡ
- ಹೆಚ್ ಸಿ ಬಾಲಕೃಷ್ಣ
- ಶಾಂತವೀರೇಗೌಡ
- ವಿಜಯಾನಂದ ಕಾಶಪ್ಪನವರ್
- ಲಕ್ಷ್ಮಣ್ ಸವದಿ
- ಬಸವರಾಜ್ ರಾಯರೆಡ್ಡಿ
























