ದೇಶರಾಜ್ಯ ವಾರ್ತೆ

ಅಯ್ಯಪ್ಪ ಭಕ್ತರಿಗೆ ಸವಿಸುದ್ದಿ:  ವಿಮಾನದಲ್ಲಿ  ಇರುಮುಡಿಕಟ್ಟು ಸಹಿತ ಪ್ರಯಾಣಿಸಲು ಅನುಮತಿ!!

GL
ವಿಮಾನದಲ್ಲಿ ಶಬರಿಮಲೆಗೆ ಬರುವ ಅಯ್ಯಪ್ಪಭಕ್ತರಿಗೊಂದು ಸಂತಸದ ಸುದ್ದಿ ಬಂದಿದೆ. ಇನ್ನು ವಿಮಾನದಲ್ಲಿ ತೆಂಗಿನಕಾಯಿ ಹೊಂದಿದ ಇರುಮುಡಿಕಟ್ಟು ಸಹಿತ ಪ್ರಯಾಣಿಸಬಹುದಾಗಿದೆ. 

ಈ ಸುದ್ದಿಯನ್ನು ಶೇರ್ ಮಾಡಿ

ದೆಹಲಿ: ವಿಮಾನದಲ್ಲಿ ಶಬರಿಮಲೆಗೆ ಬರುವ ಅಯ್ಯಪ್ಪಭಕ್ತರಿಗೊಂದು ಸಂತಸದ ಸುದ್ದಿ ಬಂದಿದೆ. ಇನ್ನು ವಿಮಾನದಲ್ಲಿ ತೆಂಗಿನಕಾಯಿ ಹೊಂದಿದ ಇರುಮುಡಿಕಟ್ಟು ಸಹಿತ ಪ್ರಯಾಣಿಸಬಹುದಾಗಿದೆ. ಭಾರತೀಯ ವೋಮಯಾನ ಸಚಿವಾಲಯದಡಿ ಇರುವ ಸಿವಿಲ್‌ ಎವಿಯೇಷನ್‌ ಸೆಕ್ಯೂರಿಟಿ ವಿಭಾಗ ಶಬರಿಮಲೆಯ ಭಕ್ತರಿಗೆಂದೇ ಪ್ರತ್ಯೇಕ ಆದೇಶ ಪ್ರಕಟಿಸಿ ಈ ಸೌಲಭ್ಯ ಒದಗಿಸಿದೆ.

maithri

ದೇಶದಲ್ಲಿ ಎಲ್ಲಿಗೂ ಪ್ರಯಾಣಿಸುವಾಗ ಈ ಹಿಂದೆ ವಿಮಾನದಲ್ಲಿ ತೆಂಗಿನಕಾಯಿ ಕೊಂಡೊಯ್ಯುವಂತಿರಲಿಲ್ಲ. ಇಂಟ‌ರ್ ನೇಷನಲ್ ಏರ್ ಟ್ರಾನ್ಫೋರ್ಟ್ ಅಸೋಸಿಯೇಷನ್ ನಿರ್ಧಾರದಂತೆ ತೆಂಗಿನಕಾಯಿ ಅಪಾಯಕಾರಿ ವಸ್ತುಗಳ ಪಟ್ಟಿಯಲ್ಲಿತ್ತು. ಪ್ರಸ್ತುತ ಶಬರಿಮಲೆಯ ರೀತಿರಿವಾಜು ಗಮನಿಸಿ, ಇರುಮುಡಿ ಕಟ್ಟುಹೊಂದಿ ಬರುವ ವ್ರತಾಧಾರಿ ಭಕ್ತರಿಗೆಂದೇ ಕಾನೂನು ಸಡಿಲಿಕೆ ಮಾಡಲಾಗಿದೆ. ಜನವರಿ 20ರ ತನಕ ಮಾತ್ರವೇ ವಿಮಾನದಲ್ಲಿ ಈ ಸೌಲಭ್ಯ ಸಿಗಲಿದೆ.

ಶಬರಿಮಲೆ ಅಯ್ಯಪ್ಪ ಭಕ್ತರು ತೆಂಗಿನಕಾಯಿ ಕೊಂಡೊಯ್ಯವಂತಿಲ್ಲ ಎಂಬ ಕಾರಣದಿಂದ ಈ ಹಿಂದೆ ವಿಮಾನಯಾನದಿಂದ ವಂಚಿತರಾಗಿದ್ದರು. ಇದೀಗ ಕಾನೂನು ಸಡಿಲಿಕೆ ಮಾಡಿ ಅಯ್ಯಪ್ಪ ಭಕ್ತರಿಗೆ ಸೌಲಭ್ಯ ನೀಡಿರುವುದರಿಂದ ಹೊರರಾಜ್ಯ ಮತ್ತು ವಿದೇಶಗಳಿಂದ ಬರುವವರಿಗೆ ಅನುಕೂಲವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆನ್’ಲೈನ್ ಗೇಮಿಂಗಿಗೆ ಕೇಂದ್ರದ ಅಂಕುಶ!! ಆತ್ಮಹತ್ಯೆ, ಸಾಲಬಾಧೆಯ ಮೊರೆ ಹೋಗುತ್ತಿರುವ ಯುವಕರ ರಕ್ಷಣೆಗೆ ಮುಂದಾದ ಕೇಂದ್ರ!

ದೇಶದ ಯುವಜನತೆ ಆನ್‌ಲೈನ್ ಗೇಮ್‌ಗಳತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ಅದರ…

ಮಧ್ಯಪ್ರಾಚ್ಯ ಉದ್ವಿಗ್ನತೆ : ಸಂಕಷ್ಟದಲ್ಲಿನ ಕನ್ನಡಿಗರ ನೆರವಿಗೆ ಉಡುಪಿ ಜಿಲ್ಲಾಡಳಿತದಿಂದ ತುರ್ತು ಸಹಾಯವಾಣಿ

ಮಂಗಳೂರು: ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ ಹಾಗೂ ಅಂತರಾಷ್ಟ್ರೀಯ…

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರಾಗಿ ಶ್ರೀನಿವಾಸ್‌ ನಾಯಕ್ ಇಂದಾಜೆ ನೇಮಕ

ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್‌ ಪಾಸ್‌ ವಿತರಣೆ ಮಾಡಲು ಸರಕಾರ ರಚಿಸಿರುವ…