ಮೈಸೂರಿನಲ್ಲೊಂದು ಕಾಂಪೌಂಡ್ ಇನ್ನೇನು ಬಿದ್ದು ಹೋಗುವುದರಲ್ಲಿತ್ತು. ಕಾರಣ, ಮೂತ್ರ ವಿಸರ್ಜನೆ.
ಸಾರ್ವಜನಿಕರು ಈ ಕಾಂಪೌಂಡಿಗೆ ಬಂದು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ತಡೆಯಲು ಬೇರೆ ಬೇರೆ ರೀತಿಯ ಉಪಾಯ ಮಾಡಿದರೂ ಫಲ ಕೊಡಲಿಲ್ಲ. ಕೊನೆಗೆ ದಂಡ ವಿಧಿಸಲಾಗುವುದು ಎಂಬ ಬೋರ್ಡನ್ನು ನೇತು ಹಾಕಿದರು. ಇದಕ್ಕೂ ಕ್ಯಾರೇ ಅನ್ನಲಿಲ್ಲ.
ಕೊನೆಗೊಬ್ಬರಿಗೆ ಒಂದು ಉಪಾಯ ಹೊಳೆದೇ ಬಿಟ್ಟಿತು. ಅದನ್ನು ಕಾರ್ಯಗತ ಮಾಡಿಯೂ ಬಿಟ್ಟರು. ಇಡೀಯ ಕಾಂಪೌಂಡಿಗೆ ಗ್ಲಾಸ್ ಗಳನ್ನು ಅಳವಡಿಸಿದರು. ಮೂತ್ರ ವಿಸರ್ಜನೆಗೆ ಬಂದು ಮಿರರ್ ಗೋಡೆ ಮುಂದೆ ನಿಂತರೆ, ಇಡೀಯ ರಸ್ತೆಗೆ ತಮ್ಮ ಮಾನ ಹರಾಜಾಗುವುದು ಗ್ಯಾರೆಂಟಿ. ಅಂದಹಾಗೇ, ಇದೀಗ ಈ ಗೋಡೆಗೆ ಮೂತ್ರ ವಿಸರ್ಜನೆ ಮಾಡುವವರೇ ಇಲ್ಲವಂತೆ.






















