ಶಿಕ್ಷಣ

ವಿದತ್ ನೂತನ ಶಾಖೆ ನಗರದಲ್ಲಿ ‘ಆರಂಭ’- ಬ್ಯಾಚ್ ಉದ್ಘಾಟನಾ ಸಮಾರಂಭ

Saraswathi

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿದತ್ ಶಿಕ್ಷಣ ಸಂಸ್ಥೆಯ 2ನೇ ಶಾಖೆ ನೆಹರುನಗರದ ಅಶ್ವಿನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದ್ದು, ಜೂನ್ 29ರಂದು ‘ಆರಂಭ’ ಬ್ಯಾಚ್‌ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು.

maithri

ಕಾರ್ಯಕ್ರಮವನ್ನು ನಿವೃತ್ತ ಐ.ಎ.ಎಸ್ ಅಧಿಕಾರಿ ಟಿ.ಕೆ. ಮನೋಜ್ ಕುಮಾರ್ ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೇರಣಾದಾಯಕವಾಗಿ ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಶಿಸ್ತು, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮಹತ್ವವನ್ನು ಅವರು ವಿವರಿಸಿದರು.

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಮಾಜಿ ಪ್ರಾಂಶುಪಾಲ ಹಾಗೂ ಅರಸ್ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ್ ಕೇವಳ ಮತ್ತು ಸರಸ್ವತಿ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ್ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಟಿ.ಕೆ. ಮನೋಜ್ ಕುಮಾರ್ ದಂಪತಿಯನ್ನು ವಿದತ್ ಸಂಸ್ಥೆಯ  ಸಂಸ್ಥಾಪಕ ಶ್ರೀವತ್ಸ್ ಬಿ.ಎಸ್. ಹಾಗೂ ಸಹ ಸಂಸ್ಥಾಪಕಿ ಶುಭಲಕ್ಷ್ಮೀ ಸನ್ಮಾನಿಸಿದರು.

‘ಆರಂಭ’ ಬ್ಯಾಚ್‌ ಉದ್ಘಾಟನೆಯು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಮರ್ಥವಾಗಿ ಸಜ್ಜುಗೊಳಿಸುವ ಮಹತ್ವದ ಪ್ರಯತ್ನವಾಗಿದೆ.

ವಿದತ್ ಸಂಸ್ಥೆಯಲ್ಲಿ ಈ ಕೆಳಗಿನ ವಿಶೇಷ ತರಬೇತಿ ಕಾರ್ಯಕ್ರಮಗಳು ಲಭ್ಯವಿವೆ:

– ಕೆಸಿಇಟಿ (KCET) ತರಬೇತಿ

– ನೀಟ್ (NEET) ತರಬೇತಿ

– ಜೆಇಇ (JEE) ತರಬೇತಿ

– ಎಸ್‌ಎಸ್‌ಎಲ್‌ಸಿ (10ನೇ ತರಗತಿ) ವಿಶೇಷ ಬ್ಯಾಚ್

– 1ರಿಂದ 10ನೇ ತರಗತಿಯವರೆಗೆ ಅಡ್ವಾನ್ಸ್ ಟ್ಯೂಷನ್

– ಒಲಿಂಪಿಯಾಡ್ ತರಬೇತಿ

– ನವೋದಯ ಪ್ರವೇಶ ಪರೀಕ್ಷೆ ತರಬೇತಿ

ಅನುಭವ ಸಂಪನ್ನ ಶಿಕ್ಷಕರ ಮಾರ್ಗದರ್ಶನ, ತಂತ್ರಜ್ಞಾನ ಆಧಾರಿತ ಬೋಧನಾ ವಿಧಾನ, ವೈಯಕ್ತಿಕ ಗಮನ ಹಾಗೂ ವಿದ್ಯಾರ್ಥಿ ಸ್ನೇಹಿ ವಾತಾವರಣವು ವಿದತ್ ಸಂಸ್ಥೆಯ ಪ್ರಮುಖ ವಿಶೇಷತೆಗಳಾಗಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾಳೆ ಶ್ರೀಧರಾಭಿವಂದನ | ಡಾ. ಎಚ್.ಜಿ. ಶ್ರೀಧರ್ ಅವರಿಗೆ ಶಿಷ್ಯವೃಂದ, ಪುತ್ತೂರು ಕಸಾಪದಿಂದ ಸಾರ್ವಜನಿಕ ಸನ್ಮಾನ

ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪರೀಕ್ಷಾಂಗ ಕುಲಸಚಿವ ಡಾ.ಎಚ್‌.ಜಿ. ಶ್ರೀಧರ ಅವರಿಗೆ…