ಬೀದಿ ನಾಯಿಗಳ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಪಟ್ಟಣದ ಚೋಳಿನವರ ಓಣಿಯ ನಿವಾಸಿ ಪ್ರೇಮಾ ಶರಣಪ್ಪ ಚೋಳಿನ (53) ಮೃತ ಮಹಿಳೆ.
ಪ್ರೇಮಾ ಚೋಳಿನ ಭಾನುವಾರ ಬೆಳಗಿನ ಜಾವ ಮನೆ ಹತ್ತಿರ ಹೂ ಕೀಳುತ್ತಿದ್ದಾಗ ಬೀದಿ ನಾಯಿಗಳು ಸಾಮೂಹಿಕವಾಗಿ ದಾಳಿ ಮಾಡಿ, ನೆಲಕ್ಕೆ ಬೀಳಿಸಿ ಕಚ್ಚಿವೆ.
ಬೀದಿ ನಾಯಿಗಳ ದಾಳಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪ್ರೇಮಾ ಚೋಳಿನ ಅವರನ್ನು ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರೇಮಾ ಹೂವುಗಳನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದರು ಎಂದು ಅವರ ಕೆಲವು ಸಂಬಂಧಿಕರು ಹೇಳಿದರೆ, ಘಟನೆ ನಡೆದಾಗ ಅವರು ಮನೆಯ ಮುಂದೆ ಹೂವುಗಳನ್ನು ಕೀಳುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ.
ಪ್ರೇಮಾ ಅವರ ಸಂಬಂಧಿಕರು ಮತ್ತು ಚೋಳಿನ್ ಕಾಲೋನಿಯ ನಿವಾಸಿಗಳು ಗಜೇಂದ್ರಗಡದ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ಸ್ಥಳೀಯ ಆಡಳಿತದ ನಿರಾಸಕ್ತಿಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿದರು. ಆಸ್ಪತ್ರೆ ಮುಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹವನ್ನು ಇಟ್ಟು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸ್ಥಳೀಯ ಪುರಸಭೆ ವಿರುದ್ದ ಆಕ್ರೋಶ ಹೊರ ಹಾಕಿದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ (ಯು.ಡಿ) ಪ್ರಕರಣ ದಾಖಲಾಗಿದೆ.
ಈ ಸಂಬಂಧ ನಾವು ಹಲವಾರು ದೂರುಗಳನ್ನು ಸಲ್ಲಿಸಿದ್ದೇವೆ ಮತ್ತು ಅನೇಕ ಅಧಿಕಾರಿಗಳು ಮತ್ತು ಸ್ಥಳೀಯ ನಾಯಕರಿಗೆ ಹಲವು ಬಾರಿ ವಿನಂತಿಸಿದ್ದೇವೆ. ಅವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು, ಆದರೆ ಯಾವ ಕ್ರಮ ಕೂಡ ಕೈಗೊಂಡಿಲ್ಲ, ಸ್ಥಳೀಯ ನಾಯಕರು ಅಥವಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಒಂದು ಜೀವವನ್ನು ಉಳಿಸಬಹುದಿತ್ತು, ”ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚೋಳಿನ್ ಕಾಲೋನಿಯ ನಿವಾಸಿಯೊಬ್ಬರು ಹೇಳಿದರು.
ಗಜೇಂದ್ರಗಡ ಪಟ್ಟಣ ಪುರಸಭೆ (ಟಿಎಂಸಿ) ಅಧ್ಯಕ್ಷ ಸುಭಾಷ್ ಮೈಗೇರಿ ಮಾತನಾಡಿ, “ನಮ್ಮ ಅಧಿಕಾರಿಗಳಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸೂಚನೆ ನೀಡಿದ್ದೇವೆ. ಸಂತ್ರಸ್ತರ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ನೀಡಲಿದೆ ಮತ್ತು ಶಾಸಕರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ” ಎಂದು ಹೇಳಿದರು.
ಬೀದಿ ನಾಯಿಗಳ ದಾಳಿಗೆ ಮಹಿಳೆ ಬಲಿ!
What's your reaction?
- 2894c
- 2894cc
- 27ai technology
- 27ajjavara
- 27alwas
- 26apology
- 26artificial intelegence
- 25avg
- 25belthangady-provocative-speech-case-conviction
- 25bihar minister
- 24bjp
- 24bjp leader
- 23bjp national president
- 23bt ranjan
- 23co-operative
- 22coastal
- 22Court convicts accused in provocative speech case
- 21crime
- 21crime news
- 21cyclothon
- 20darmasthala
- 20death news
- 19dust bin
- 19education
- 18fraud
- 18gl
- 18gods own country
- 17gold
- 17google for education
- 16independence
- 16jewel
- 16jewellers
- 15jnana vikasa
- 15karnataka state
- 14kerala village
- 14kukke - kollur temple
- 14lokayuktha
- 13lokayuktha raid
- 13Mangalore
- 12manipal
- 12minister krishna bairegowda
- 11mla ashok rai
- 11mohan alwa
- 11mudubidre
- 10nidana news
- 10nirvathu mukku
- 9nitin nabin
- 9police
- 9ptr tahasildar
- 8puttur
- 8puttur news
- 7puttur tahasildar
- 7republic
- 7revenue
- 6revenue department
- 6revenue minister
- 5school
- 5senior citizen
- 5silver
- 4society
- 4sowmya
- 3students
- 3tahasildar
- 2tahasildar absconded
- 2teachers
- 2tour
- 1trending
- 1udupi
- 0wastage
Related Posts
ಬೆಟ್ಟಂಪಾಡಿ ದೇವಸ್ಥಾನ ಕಾಣಿಕೆ ಡಬ್ಬಿ ಕಳ್ಳತನ: ಕೇರಳದಲ್ಲಿ ಆರೋಪಿ ಬಂಧನ
ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ…
ಪಡುಬಿದ್ರಿ: ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ – ಯುವಕ ದುರ್ಮರಣ
ಉಡುಪಿ: ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕ ಅಥವಾ ಪಾರ್ಕಿಂಗ್ ಲೈಟ್ ಅಳವಡಿಸದೆ…
ನೆಲ್ಯಾಡಿ: ಟ್ಯಾಂಕರ್ಗಳಿಂದ ಡೀಸೆಲ್ ಕಳವು ಯತ್ನ – ಇಬ್ಬರು ಆರೋಪಿಗಳ ಬಂಧನ
ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ…
ಗುಂಡ್ಯ: ಕಾರು ಅಪಘಾತ: ಎಲಿಮಲೆಯ ಯುವಕ ಚಿಕಿತ್ಸೆ ಫಲಿಸದೇ ಸಾವು
ಸುಳ್ಯ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ…
ಮನೆಗೆ ಬಿಡುವುದಾಗಿ ಬೈಕ್ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು
ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…
ನೆಲ್ಯಾಡಿ: ವಿಷ ಸೇವಿಸಿದ ಜೋಡಿ ಆಸ್ಪತ್ರೆಗೆ – ಗಂಭೀರ!!
ನೆಲ್ಯಾಡಿ ಬಳಿ ವಿಷ ಸೇವಿಸಿ ಒದ್ದಾಡುತ್ತಿದ್ದ ಅವರನ್ನು ಗಮನಿಸಿದ ಸ್ಥಳೀಯರು ಅವರನ್ನು ಪುತ್ತೂರು…
ಪುತ್ತೂರು: ಅಕ್ರಮ ಜಾನುವಾರು ಸಾಗಾಟ ಪತ್ತೆ: ಮೂರು ಜಾನುವಾರುಗಳ ರಕ್ಷಣೆ, ಓರ್ವ ವಶಕ್ಕೆ!!
ಪುತ್ತೂರು: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕ್ಅಪ್ ವಾಹನವನ್ನು ಪುತ್ತೂರು…
ಕಾವುನಿಂದ ಕದ್ದ ಆಮ್ನಿ, ತಮಿಳುನಾಡಿನಲ್ಲಿ ಆ್ಯಂಬುಲೆನ್ಸ್!! ಆಮ್ನಿ ವಶ, ಆರೋಪಿಗಳು ಸೆರೆ: ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ ಕಾರ್ಯಾಚರಣೆ!
ಪುತ್ತೂರು: ಮಾಡ್ನೂರು ಗ್ರಾಮದ ಕಾವು ಎಂಬಲ್ಲಿಂದ ಕಳ್ಳತನ ಮಾಡಿದ ಆಮ್ನಿ ಕಾರನ್ನು…
ತಲವಾರು ಹಿಡಿದು ಸಾರ್ವಜನಿಕರಿಗೆ ಬೆದರಿಕೆ; ಇಬ್ಬರ ಬಂಧನ
ಮಂಗಳೂರು: ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿ ಜನರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ…
ಕಾರು-ಸ್ಕೂಟರ್ ಡಿಕ್ಕಿ: 32ರ ಹರೆಯದ ಯುವಕ ದಾರುಣ ಅಂತ್ಯ
ಪುತ್ತೂರು: ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ…


















