ಸುಳ್ಯ: ಎ.ಎಚ್.ಆರ್. ಗ್ರೂಪ್ ನೇತೃತ್ವದ ದಿ ರಿದನ್ ಮಂದಿ ಫ್ಯಾಮಿಲಿ ರೆಸ್ಟೋರೆಂಟ್ ಸೋಮವಾರ ಸಂಜೆ ಸುಳ್ಯದಲ್ಲಿ ಉದ್ಘಾಟನೆಗೊಂಡಿತು.
ಸುಳ್ಯ ಪರಿವಾರಕಾನ ಮದರ್ ತೆರೆಸಾ ಚರ್ಚ್ ಧರ್ಮಗುರು ರೆ. ಫಾ. ಜೋಶಿ ನಿರಪ್ಪಾಲ್ ಮಾತನಾಡಿ, ಹೋಟೆಲ್, ರೆಸ್ಟೋರೆಂಟ್ ಗಳು ಉದ್ಯಮವಷ್ಟೇ ಅಲ್ಲ; ಅದು ಜನರ ಹಸಿವು ತಣಿಸುವ ಸೇವಾ ಕ್ಷೇತ್ರವೂ ಹೌದು. ಹಾಗಾಗಿ ದಿ ರಿದನ್ ಮಂದಿ ಗ್ರಾಹಕರ ಸಂತೃಪ್ತಿ ಗಳಿಸಲಿ ಎಂದು ಶುಭಹಾರೈಸಿದರು.

ರೆಡ್ ಕ್ರಾಸಿನ ಸುಧಾಕರ್ ರೈ ಮಾತನಾಡಿ, ಸುಳ್ಯದಲ್ಲಿ ಅನೇಕ ರೆಸ್ಟೋರೆಂಟ್’ಗಳಿದ್ದರೂ, ಮಂದಿ ಬಿರಿಯಾನಿಯ ಕಾನ್ಸೆಪ್ಟ್ ಹೊಸದು. ಉತ್ತಮ ಕಾನ್ಸೆಪ್ಟಲ್ಲಿ ದಿ ರಿದನ್ ಮಂದಿ ರೆಸ್ಟೋರೆಂಟ್ ನಿರ್ಮಿಸಿದ್ದಾರೆ. ಡಿಸೈನ್ ಕೂಡ ಚೆನ್ನಾಗಿದೆ. ಸುಳ್ಯಕ್ಕೆ ಹೊಸದು ಬರುವಾಗ ನಾವು ಸ್ವಾಗತಿಸಬೇಕು. ಇವರು ಸುಳ್ಯಕ್ಕೆ ಹೊಸತನ ನೀಡುತ್ತಾರೆ ಎಂದ ಅವರು, ಅಡಿಕೆಗೆ ದರ ಹೆಚ್ಚಾದರೆ ನಾವೆಲ್ಲಾ ಬಿರಿಯಾನಿ ತಿನ್ನುವವರೇ. ಬಂದವರೆಲ್ಲಾ ಸಂಸ್ಥೆಯ ಜೊತೆ ಉತ್ತಮ ಒಡನಾಟ ಇಟ್ಟುಕೊಳ್ಳಿ ಎಂದು ಹಾರೈಸಿದ ಅವರು ಸುಳ್ಯ ವಾಣಿಜ್ಯ ಸಂಘದ ಸದಸ್ಯರಾಗುವಂತೆ ಮನವಿ ಮಾಡಿಕೊಂಡರು.
ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾತನಾಡಿ, ಉತ್ತಮ ರೆಸ್ಟೋರೆಂಟಿನಲ್ಲಿ ಊಟ ಮಾಡಬೇಕು ಎನ್ನುವುದು ಎಲ್ಲರ ಕನಸು. ರೆಸ್ಟೋರೆಂಟ್ ನೋಡಿದಾಕ್ಷಣ ವಾಹನ ನಿಲ್ಲಿಸುವವರೇ ಹೆಚ್ಚಿದ್ದಾರೆ. ಮೆಲ್ಕಾರ್, ಪುತ್ತೂರಿನ ಸಂಪ್ಯ ಈಗ ಸುಳ್ಯದಲ್ಲಿ ದಿ ರಿದನ್ ಮಂದಿ ಬಂದಿದೆ. ಇದರ ಶಾಖೆಗಳು ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸಿದರು.
ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ ಮಾತನಾಡಿ, ಸುಳ್ಯದ ಇತಿಹಾಸದಲ್ಲಿ ಹೋಟೆಲಿಗೆ ದೊಡ್ಡ ಇತಿಹಾಸವಿದೆ. ಅನೇಕ ರೀತಿಯ ಹೋಟೆಲ್ ಗಳಿತ್ತು. ರಾತ್ರಿ ಹೊತ್ತು ಬಂದ್ರೆ ಜಗಮಗಿಸುತ್ತಿರುವುದನ್ನು ಕಾಣಬಹುದು. ದೇಶದಲ್ಲೇ ಆಹಾರಕ್ಕೆ ದೊಡ್ಡ ವ್ಯವಸ್ಥೆ ಇದೆ. ಈ ದೇಶದಲ್ಲಿ ಶೇ. 70ರಷ್ಟು ಮಾಂಸಾಹಾರಿಗಳಿದ್ದಾರೆ. ಇದರಲ್ಲಿ ಮಂದಿ ಆಹಾರದ ವಿಶೇಷತೆ ಎಂದರೆ, ನಿಧಾನವಾಗಿ ಬೇಯಿಸುವುದು, ನೀರಿನಲ್ಲಿ ಬೇಯಿಸುವುದು ಹೀಗೆ ಅನೇಕ ರೀತಿಯಿವೆ. ಈ ರೆಸ್ಟೋರೆಂಟ್ ಶುಚಿ ರುಚಿಯಾಗಿರಲಿ. ಉತ್ತಮವಾಗಿ ಮೂಡಿಬರಲಿ ಎಂದು ಹಾರೈಸಿದರು.
ಸುಳ್ಯ ಪಟ್ಟಣ ಪಂಚಾಯತ್ ಮಾಜಿ ಸದಸ್ಯ, ಅಡ್ವೊಕೇಟ್ ಎಂ. ವೆಂಕಪ್ಪ ಗೌಡ ಮಾತನಾಡಿ, ಅತ್ಯಂತ ಆಕರ್ಷಕವಾಗಿದೆ ದಿ ರಿದನ್ ಮಂದಿ. ಮಡಿಕೇರಿ ಭಾಗದಿಂದ ಬರುವ ಯಾತ್ರಾರ್ಥಿಗಳು ಶುಚಿ – ರುಚಿಯಾದ ಹಾಗೂ ಪಾರ್ಕಿಂಗ್ ಇರುವ ಹೋಟೆಲ್ ಗಳನ್ನು ಅಪೇಕ್ಷೆ ಪಡ್ತಾರೆ. ಈ ಭಾಗದಲ್ಲಿರುವ ಇನ್ನೆರಡು ರೆಸ್ಟೋರೆಂಟ್ ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಇದೆ. ಅದೇ ರೀತಿ ರಿದನ್ ಮಂದಿಯೂ ಕೂಡ. ಅರೇಬಿಕ್ ಡಿಶ್ ಸುಳ್ಯದಲ್ಲಿ ಹೊಸದು. ಒಳ್ಳೆ ಒಳ್ಳೆಯ ಸಂಸ್ಥೆಗಳು ಸುಳ್ಯಕ್ಕೆ ಬರುತ್ತಿದೆ. ಇದರ ಅರ್ಥ ಸುಳ್ಯ ಬೆಳೆಯುತ್ತಾ ಇದೆ ಎಂದು. ಇಂತಹ ಒಳ್ಳೆಯ ರೆಸ್ಟೋರೆಂಟ್ ಗಳು ಹೆಸರುವಾಸಿಯಾಗಬೇಕು. ಎಲ್ಲಾ ವರ್ಗದವರು ಇಲ್ಲಿಗೆ ಬರಬೇಕು. ಪ್ರೀತಿ – ವಿಶ್ವಾಸದ ಹೋಟೆಲ್ ಇದಾಗಲಿ ಎಂದು ಹಾರೈಸಿದರು.
ಸುಳ್ಯ ಪಪಂ ಸದಸ್ಯ ಶರೀಫ್ ಕಂಠಿ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಕೆಲಸ ನಡೆಯುತ್ತಿರುವುದನ್ನು ಕಂಡಿದ್ದೇವೆ. ಸುಳ್ಯದಲ್ಲಿ ಇಂತಹದ್ದೊಂದು ಸಂಸ್ಥೆ ಬಂದಿರುವುದು ಖುಷಿ ತಂದಿದೆ. ಈ ಉದ್ದಿಮೆ ಯಶಸ್ವಿಯಾಗಲಿ. ಈ ಗಾಂಧಿನಗರಕ್ಕೆ ಆಹಾರ ನಗರಿ ಎಂದು ಹೆಸರಿಸಬಹುದು. ಯಾಕೆಂದರೆ ಇಲ್ಲಿರುವಷ್ಟು ರೆಸ್ಟೋರೆಂಟ್ ಬೇರೆಲ್ಲಿಯೂ ಇಲ್ಲ ಎಂದರು.
ಕೃಷ್ಣ ಪ್ರಶಾಂತ್ ಮಾತನಾಡಿ, ಯಾತ್ರಾರ್ಥಿಗಳಿಗೆ ಉತ್ತಮವಾದ ರೆಸ್ಟೋರೆಂಟ್ ಇದು. ಸುಳ್ಯದ ಈ ಭಾಗ ಬಹಳಷ್ಟು ಬೆಳೆದಿದೆ. ರಿದನ್ ಮಂದಿ ಇನ್ನಷ್ಟು ಮೆರುಗನ್ನು ಸುಳ್ಯಕ್ಕೆ ನೀಡಿದೆ. ಈ ಉದ್ದಿಮೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭಹಾರೈಸಿದರು.
ಸುಳ್ಯ ತಾಲೂಕು ಸುಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ ಮಾತನಾಡಿ, ಸುಳ್ಯದ ಜನತೆಗೆ ಆದರ್ಶಪ್ರಾಯವಾದ, ಅಪೇಕ್ಷಿತವಾದ ಹೋಟೆಲ್ ದಿ ರಿದನ್ ಮಂದಿ. ಉದ್ಯಮ ಕೇವಲ ಉದ್ಯಮವಲ್ಲ. ಅದು ಸಮಾಜಕ್ಕಾಗಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಮುಖ್ಯ. ಇಂತಹ ಉತ್ತಮ ಉದ್ಯಮಗಳು ನಮ್ಮೂರಿಗೆ ಬರಬೇಕಾದರೆ ಎದುರಾಗುವ ಅಡೆತಡೆಗಳನ್ನು ಪರಿಹರಿಸಿಕೊಡುವ ಕೆಲಸವೂ ಆಗಬೇಕು ಎಂದ ಅವರು, ಜನರು ರುಚಿಕರ, ಸ್ವಾದಿಷ್ಟವಾದ ಆಹಾರವನ್ನು ಹುಡುಕುತ್ತಾರೆ. ರಿದನ್ ಮಂದಿಯ ಜೊತೆಗೆ ಕುನಾಫಾ ಎಂಬ ಶುದ್ಧ ಸಸ್ಯಾಹಾರಿ ಆಹಾರ ಇದು. ಸಸ್ಯಾಹಾರಿಗಳು ಇದರ ಸವಿಯನ್ನು ಇಲ್ಲಿ ಸವಿಯಬಹುದು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದಂತೆ, ಮೂಲ ಔಷಧಿ ಎಂದರೆ ಆಹಾರ. ಅದನ್ನು ಹೈಜಿನಿಕ್ ಆಗಿ ಸೇವಿಸಬೇಕು ಅನ್ತಾರೆ. ಇದನ್ನು ನಾವು ಪಾಲಿಸಬೇಕು ಎಂದ ಅವರು, ರಾತ್ರಿ ಹೊತ್ತು ಉದ್ಯಮಕ್ಕೆ ನಿರ್ಬಂಧ ಇದೆ. ಆದರೆ ಫುಡ್ ಡೆಲಿವರಿ ವ್ಯವಸ್ಥೆಗೆ ಅನುವು ಮಾಡಿ ಕೊಡುವಂತೆ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಮಾಡಿದರು.
ಇಸ್ಮಾಯಿಲ್ ಮಾತನಾಡಿ, ಸಾಂಪ್ರದಾಯಿಕ ಆಹಾರ ನೀಡುತ್ತಾ ಜನಮೆಚ್ಚುಗೆ ಗಳಿಸಿರುವ ದಿ ರಿದನ್ ಮಂದಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಆಗಲಿ ಎಂದು ಹಾರೈಸಿದರು.
ಉದ್ಯಮಿ ಎನ್.ಆರ್. ರಂಜಿತ್ ಮಾತನಾಡಿ, ಹೊಸ ಆಂಬಿಯೆನ್ಸಲ್ಲಿ ರೆಸ್ಟೋರೆಂಟ್ ಆರಂಭಗೊಂಡಿದೆ. ಸುಳ್ಯಕ್ಕೆ ಅತ್ಯಾಧುನಿಕ ಟಚ್ ನೀಡಲಾಗಿದೆ. ಖಂಡಿತವಾಗಿಯೂ ಇದು ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಳ್ಯ ರೋಟರಿ ಕ್ಲಬ್ ಬುಲೆಟಿನ್ ಎಡಿಟರ್ ಅಬ್ದುಲ್ ಕಲಾಂ ಶುಭಹಾರೈಸಿದರು.
ಇದೇ ಸಂದರ್ಭ ವೆಲ್ಡಿಂಗಿನಲ್ಲಿ ಸಹಕರಿಸಿದ ಜಯರಾಮ್, ಟೈಲ್ಸ್ ಕೆಲಸದಲ್ಲಿ ಸಹಕರಿಸಿದ ಇನಾಸ್ ಜಟ್ಟಿಪಳ್ಳ, ಇಂಟೀರಿಯರ್ ನಲ್ಲಿ ಸಹಕರಿಸಿದ ಮಹಮ್ಮದ್ ರವೀಸ್, ಇಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗಿನಲ್ಲಿ ಇಕ್ಬಾಲ್, ಸಿವಿಲ್ ಇಂಜೀನಿಯರ್ ಮಹಮ್ಮದ್ ಅನಾಸ್, ಇಂಟೀರಿಯರ್ ಹಾಗೂ ಡಿಸೈನ್ ನಲ್ಲಿ ಸಹಕರಿಸಿದ ರಾಹುಲ್ ಕುಮಾರ್, ಬ್ರಾಂಡಿಂಗ್ ಹಾಗೂ ಪ್ರಮೋಷನಿನಲ್ಲಿ ಆರ್ವಿ ಇಂಟರ್ ಗ್ರಾಫಿಕ್ಸಿನ ಜ್ಞಾನೇಶ್ ವಿಶ್ವಕರ್ಮ ಹಾಗೂ ಸಂಸ್ಥೆಗೆ ಸಹಕರಿಸಿದ ಇಸ್ಮಾಯಿಲ್ ಸಂಪ್ಯ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶೆರೀಫ್ ಜಟ್ಟಿಪಳ್ಳ, ಹರ್ಷಿತ್ ಮರ್ಕಂಜ ಅವರನ್ನು ಗೌರವಿಸಲಾಯಿತು.
ಸುಳ್ಯ ಪ.ಪಂ. ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಎಂ. ಅಬ್ದುಲ್ ಹಮೀದ್ ಜನತಾ, ಸುಳ್ಯ ರೋಟರಿ ಕ್ಲಬ್ ಕಾರ್ಯದರ್ಶಿ ಹರಿರಾಯ ಕಾಮತ್, ಸುಳ್ಯ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ, ಎಪಿಎಂಸಿ ಮಾಜಿ ನಿರ್ದೇಶಕ ಅದಾಂ ಹಾಜಿ ಕಮ್ಮಾಡಿ, ಕೆವಿಜಿ ಇಂಜಿನಿಯರಿಂಗ್ ಕಾಲೇಜು ನಿವೃತ್ತ ಪ್ರಾಂಶುಪಾಲ ಜ್ಞಾನೇಶ್, ಕಟ್ಟಡದ ಮಾಲಕ ಹಾಜಿ ಇಬ್ರಾಹಿಂ ಕುಂಬ್ಳೆ, ಅನ್ವರ್ ಡೈಮಂಡ್, ಸರ್ಫುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ಮೊಹಮ್ಮದ್ ಶರೀಫ್ (ಆಶೀಫ್), ಅಬ್ದುಲ್ ರಶೀದ್, ಅಬ್ದುಲ್ ಹಮೀದ್ ವಿಟ್ಲ ಅತಿಥಿಗಳನ್ನು ಗೌರವಿಸಿದರು.
ಶೆರೀಫ್ ಜಟ್ಟಿಪಳ್ಳ ಸ್ವಾಗತಿಸಿದರು. ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು



















