tamanvi
ಟ್ರೆಂಡಿಂಗ್ ನ್ಯೂಸ್

ಮಕ್ಕಳಿಲ್ಲದೇ ಕಾರ್ಮೋಡ ಕವಿದವರ ಬದುಕಿನಲ್ಲಿ ಬೆಳ್ಳಿರೇಖೆ ಮೂಡಿಸುವ ಶಿಬಿರ | ರೋಟರಿ ಪುತ್ತೂರು ಸಿಟಿ ನೇತೃತ್ವದಲ್ಲಿ ಸಂತಾನಹೀನತೆಯ ಉಚಿತ ಮಾಹಿತಿ, ತಪಾಸಣಾ ಶಿಬಿರ ಉದ್ಘಾಟಿಸಿ ಡಾ. ರಾಜಾರಾಮ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೋವಾ ಐವಿಎಫ್ ಫರ್ಟಿಲಿಟಿ, ರೋಟರಿ ಕ್ಲಬ್ ಪುತ್ತೂರು ಸಿಟಿ, ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸಂತಾನ ಹೀನತೆ ಬಗ್ಗೆ ಉಚಿತ ಮಾಹಿತಿ ಮತ್ತು ತಪಾಸಣಾ ಶಿಬಿರ ಮಂಗಳವಾರ ರೋಟರಿ ಮನಿಷಾ ಹಾಲ್’ನಲ್ಲಿ ನಡೆಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ರೋಟರಿ 3181 ಜಿಲ್ಲೆಯ ಝೋನ್ 4ರ ಅಸಿಸ್ಟೆಂಟ್ ಗವರ್ನರ್ ಡಾ. ರಾಜಾರಾಮ್ ಕೆ.ಬಿ., ಬಂಜರು ಭೂಮಿ ಹಾಗೂ ಬಂಜೆತನ ಒಂದೇ ಎಂದು ಹಲವರು ಹೇಳಿರುವುದನ್ನು ಕೇಳುತ್ತೇವೆ. ಇದು ಋಣಾತ್ಮಕ ಅಭಿಪ್ರಾಯದ ಪದಗಳು. ಬಂಜರು ಭೂಮಿಯನ್ನು ಸಮೃದ್ಧ ಫಸಲು ಭೂಮಿಯಾಗಿ ಪರಿವರ್ತಿಸಬಹುದು ಎನ್ನುವುದಕ್ಕೆ ಇಂದು ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಅದೇ ರೀತಿ ಬಂಜೆತನ ಅಥವಾ ಸಂತಾನ ಹೀನತೆಗೆ ಆಧುನಿಕ ಪದ್ಧತಿಯ ಸೂಕ್ತ ಚಿಕಿತ್ಸೆಗಳನ್ನು ಅಥವಾ ಸಲಹೆ ಪಡೆದುಕೊಂಡು ಮುಂದುವರಿದರೆ, ಮಕ್ಕಳನ್ನು ಪಡೆಯಲು ಸಾಧ್ಯ ಎಂದರು.

ಪತ್ನಿಯ ದೋಷದಿಂದ ಮಾತ್ರ ಬಂಜೆತನ ಬರುತ್ತದೆ ಎಂದು ಭಾವಿಸುವುದು ತಪ್ಪು. ಪುರುಷರಲ್ಲಿರುವ ದೋಷಗಳಿಂದಲೂ ಸಂತಾನ ಹೀನತೆ ಕಂಡುಬಂದಿರುವುದು ಇದೆ. ಹಾಗೆಂದು ಇದರ ಬಗ್ಗೆ ಕೀಳರಿಮೆ ಬೇಡ. ಸೂಕ್ತ ವೈದ್ಯರನ್ನು ಭೇಟಿಯಾಗಿ. ಅವರು ನೀಡುವ ಸಲಹೆಯನ್ನು ಪಾಲಿಸಿ. ಕಾರ್ಮೋಡ ಕವಿದಿರುವ ಬದುಕಿಗೆ ಬೆಳ್ಳಿರೇಖೆ ಮೂಡುವುದು ಖಂಡಿತಾ ಎಂದರು.

ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನೋವಾ ಐವಿಎಫ್ ಇದರ ಹಿರಿಯ ಕನ್ಸಲ್ಟೆಂಟ್ ಶಾವೀಝ್ ಫೈಝಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ಪುತ್ತೂರು ಸಿಡಿಪಿಓ ಹರೀಶ್ ಕೆ., ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ರೂಪಲೇಖ ಪಾಣಾಜೆ, ನೋವಾ ಐವಿಎಫ್ ಫರ್ಟಿಲಿಟಿಯ ಆಪರೇಷನಲ್ ಮ್ಯಾನೇಜರ್ ಡಾ. ವೀಣಾ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಡಾ. ಶವೀಝ್ ಫೈಝಿ ನೇತೃತ್ವದಲ್ಲಿ ಹರ್ಷ, ಗೌತಮ್, ಆದರ್ಶ್, ಡಾ. ವೀಣಾ ಉಚ್ಚಿಲ್ ಸಹಕಾರದಲ್ಲಿ ಶಿಬಿರ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಾಯುಪಡೆ ಬಳಿಕ ವಾಣಿಜ್ಯ ವಿಮಾನಯಾನಕ್ಕೆ ಅಭಿನಂದನ್ ವರ್ಧಮಾನ್; FLY91ಗೆ ಪೈಲಟ್ ಆಗಿ ಸೇರ್ಪಡೆ..!!

ನವದೆಹಲಿ: ಪಾಕಿಸ್ತಾನದ ವಿರುದ್ಧದ ಬಾಲಾಕೋಟ್ ಕಾರ್ಯಾಚರಣೆಯ ಬಳಿಕ ದೇಶಾದ್ಯಂತ ಸಂಚಲನ ಮೂಡಿಸಿದ್ದ…

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…