tamanvi
ಸ್ಥಳೀಯ

ನೆಲ ಜಲ ಸಂರಕ್ಷಣೆ ಉಪನ್ಯಾಸ;  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಜೂರುಪಂಜ ಒಕ್ಕೂಟ ಆಯೋಜನೆ

ನೆಲ ಜಲ ಸಂರಕ್ಷಣೆ ಉಪನ್ಯಾಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಜೂರುಪಂಜ ಒಕ್ಕೂಟ ಆಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪುತ್ತೂರು ತಾಲೂಕಿನ ಕುಂಜೂರುಪಂಜ ಒಕ್ಕೂಟದ ಆಶ್ರಯದಲ್ಲಿ ದೇವಸ್ಯ ಶ್ರೀ ಮಂಜುನಾಥ ಸಬಾಭವನದಲ್ಲಿ ನೆಲ ಜಲ ಸಂರಕ್ಷಣೆ ಕುರಿತಾಗಿ ಕಾರ್ಯಕ್ರಮ ನಡೆಯಿತು.

ಮಹಾಲಿಂಗೇಶ್ವರ ಐ ಟಿ ಐ ಕಾಲೇಜಿನ ಉಪನ್ಯಾಸಕ ನಾರಾಯಣ ಮಾತನಾಡಿ, ಮುಂದಿನ ಪೀಳಿಗೆಗೆ ನೀರು ಉಳಿಸುವುದು ಅನಿವಾರ್ಯ ವಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಲಿಂಗ ನಾಯ್ಕ ವಹಿಸಿದ್ದರು.

ಬಳಿಕ ಕುಂಜೂರುಪಂಜ ಒಕ್ಕೂಟದ 3 ಸಂಘಗಳಿಗೆ ಲಾಭoಶ ವಿತರಣೆ ಮಾಡಲಾಯಿತು. ಮೇಲ್ವಿಚಾರಕ ಪ್ರಶಾಂತ್, ಒಕ್ಕೂಟ ಕೋಶಾಧಿಕಾರಿ ಜಗದೀಶ್, ಕೃಷಿ ಮೇಲ್ವಿಚಾರಕ ಶಿವರಂಜನ್ ಉಪಸ್ಥಿತರಿದ್ದರು.

ವೀಣಾ ಪ್ರಾರ್ಥಿಸಿದರು. ಕುಂಜೂರುಪಂಜ ಸೇವಾಪ್ರತಿನಿಧಿ ಆಶಾ ಸ್ವಾಗತಿಸಿ, ಅಂಬಿಕಾ ಸಂಘದ ಲಲಿತ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಆ.29ರಂದು ಸರ್ಕಾರಿ ನೌಕರರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ವತಿಯಿಂದ…

1 of 135