ಪುತ್ತೂರು: ಪುತ್ತೂರು ತಾಲೂಕು ಪಂಚಾಯತ್ ನ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ & ಅಜೀವಿಕ ಮಿಷನ್ ಗ್ರಾಮೀಣ (ವಿ ಬಿ ಜಿ ರಾಮ್ ಜಿ ಯೋಜನೆ) ಯೋಜನೆಯ (ಗ್ರಾಮೀಣ ಉದ್ಯೋಗ) ಸಹಾಯಕ ನಿರ್ದೇಶಕರಾಗಿ ಸುಭಾಶ್ಚಂದ್ರ ಪಿ.ಜೆ ಅಧಿಕಾರ ವಹಿಸಿಕೊಂಡಿದ್ದಾರೆ.
ಕಬಕ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಅವರು, ಹೆಚ್ಚುವರಿಯಾಗಿ ತಾಲೂಕು ಪಂಚಾಯತ್ ನಲ್ಲಿ (ಗ್ರಾಮೀಣ ಉದ್ಯೋಗ) ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಅವರು ಆ. ೧ರಂದು ಈ ಆದೇಶ ಹೊರಡಿಸಿದ್ದಾರೆ.























