ಸ್ಥಳೀಯ

ಕುಂಬ್ರ: ಶ್ರೀ ಲಕ್ಷ್ಮೀ ಎಣ್ಣೆ ಮಿಲ್ ಮತ್ತು ಹಿಟ್ಟಿನ ಗಿರಣಿ ಶುಭಾರಂಭ

ಪುತ್ತೂರು: ಪುತ್ತೂರಿನ ಕುಂಬ್ರದ ಚಂದನ ಕಾಂಪ್ಲೆಕ್ಸ್ ಹಿಂಭಾಗದ ಅಮೋಘ ಕಾಂಪ್ಲೆಕ್ಸ್ ನಲ್ಲಿ ಕೃಷ್ಣಪ್ರಸಾದ್ ಕೆ.ಎಸ್ ಮಾಲಕತ್ವದ ಶ್ರೀ ಲಕ್ಸ್ಮಿ ಎಣ್ಣೆ ಮಿಲ್ ಮತ್ತು ಹಿಟ್ಟಿನ ಗಿರಣಿ ನ. 8ರಂದು ಶುಭಾರಂಭಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿನ ಕುಂಬ್ರದ ಚಂದನ ಕಾಂಪ್ಲೆಕ್ಸ್ ಹಿಂಭಾಗದ ಅಮೋಘ ಕಾಂಪ್ಲೆಕ್ಸ್ ನಲ್ಲಿ ಕೃಷ್ಣಪ್ರಸಾದ್ ಕೆ.ಎಸ್ ಮಾಲಕತ್ವದ ಶ್ರೀ ಲಕ್ಸ್ಮಿ ಎಣ್ಣೆ ಮಿಲ್ ಮತ್ತು ಹಿಟ್ಟಿನ ಗಿರಣಿ ನ. 8ರಂದು ಶುಭಾರಂಭಗೊಂಡಿತು.

maithri

ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ರಾಮ ಮುಗ್ರೋಡಿ ಉದ್ಘಾಟನೆ ನೆರವೇರಿಸಿದರು, ಚೋರ್ಲ ವಾಣಿಯರ ತರವಾಡು ಕರೋಪಾಡಿ ಇದರ ಸಂಚಾಲಕ ರಾಮಕೃಷ್ಣ ಮಾಂಬಾಡಿ ಅವರು ಯಂತ್ರಕ್ಕೆ ಚಾಲನೆ ನೀಡಿದರು.

ಚಂದನಾ ಕಾಂಪ್ಲೆಕ್ಸ್‌ ಮಾಲಕ ರಾಮ್ ಮೋಹನ್ ಉಪಸ್ಥಿತರಿದ್ದರು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಾಂದೀಪನಿ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್, ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ವಿಷ್ಣು ಪ್ರಸಾದ್, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಮುಂತಾದ ಗಣ್ಯರು ಭಾಗವಹಿಸಿ ಶುಭಹಾರೈಸಿದರು

ಶ್ರೀ ಲಕ್ಸ್ಮಿ ಎಣ್ಣೆ ಮಿಲ್ ಮತ್ತು ಹಿಟ್ಟಿನ ಗಿರಣಿಯಲ್ಲಿ ಎಲ್ಲಾ ತರಹದ ಮೆಣಸು ಮತ್ತು ಧಾನ್ಯಗಳನ್ನು ಹುಡಿ ಮಾಡಿ ಕೊಡಲಾಗುವುದು. ಕೃಷಿಕರಿಂದಲೇ ಖರೀದಿಸಿದ ತೆಂಗಿನ ಕಾಯಿಯಿಂದ ಸ್ವತಃ ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆಯನ್ನು ನೀಡಲಾಗುವುದು ಎಂದು ಮಾಲಕ ಕೃಷ್ಣಪ್ರಸಾದ್ ಕೆ.ಎಸ್ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಿಂದಲೇ ಕಾಮಗಾರಿ ಉದ್ಘಾಟಿಸಿದ ಶಾಸಕ!

ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 124