ಪೆರ್ಲದಿಂದ ಪುತ್ತೂರಿಗೆ ಬರುವ ದಾರಿ ಮದ್ಯೆ ಪರ್ಸೊಂದು ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಗೌರವಾದ್ಯಕ್ಷರಾದ ಉದಯ ಅರ್ಜುನಗುಳಿ ಅವರಿಗೆ ಸಿಕ್ಕಿದ್ದು, ಅದನ್ನು ವಾರೀಸುದಾರರಿಗೆ ಮರಳಿಸಲಾಗಿದೆ.
ಇದರಲ್ಲಿ 10,000 ರೂ. ಕ್ಕಿಂತ ಹೆಚ್ಚು ನಗದು, ಎ. ಟಿ. ಎಮ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಇನ್ನಿತರ ಅಗತ್ಯ ವಸ್ತುಗಳು ಇತ್ತು. ಆಧಾರ್ ಕಾರ್ಡ್ ವಿಳಾಸದ ಮೂಲಕ ವಾರೀಸುದಾರರನ್ನು ಸಂಪರ್ಕಿಸಿ, ವಾರಿಸುದಾರರಿಗೆ ಹಿಂತಿರುಗಿಸಲಾಯಿತು.
ಉದಯ ಅರ್ಜುನಗುಳಿ ಅವರ ಮಾನವೀಯತೆಗೆ ಪರ್ಸ್ ವಾರೀಸುದಾರರು ಕೃತಜ್ಞತೆ ಸಲ್ಲಿಸಿದ್ದಾರೆ.
























