ವಿಶೇಷಸ್ಥಳೀಯ

ಹೊಂಡಗಳಿಗೇ ಹಿರಿಯಣ್ಣ!! ಜೀವ ಹೋಗುವ ಮುನ್ನ ಮಣ್ಣಾದರೂ ಹಾಕಿರಣ್ಣ!!

ಪುತ್ತೂರು: ಮುಖ್ಯರಸ್ತೆಯಲ್ಲಿ ಎರಡು ಹೊಂಡಗಳು ಬಾಯ್ದೆರೆದು ಕೂತಿವೆ. ಅಂತಿಂಥ ಹೊಂಡಗಳಲ್ಲ ಅವು. ಇಡೀಯ ಜೀವವನ್ನು ಒಮ್ಮೆಗೆ ಮುಕ್ಕಳಿಸಿ ಬಿಡುವ ಹೊಂಡಗಳವು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮುಖ್ಯರಸ್ತೆಯಲ್ಲಿ ಎರಡು ಹೊಂಡಗಳು ಬಾಯ್ದೆರೆದು ಕೂತಿವೆ. ಅಂತಿಂಥ ಹೊಂಡಗಳಲ್ಲ ಅವು. ಇಡೀಯ ಜೀವವನ್ನು ಒಮ್ಮೆಗೆ ಮುಕ್ಕಳಿಸಿ ಬಿಡುವ ಹೊಂಡಗಳವು.

maithri

ಅರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಇದೇ ಹೊಂಡಕ್ಕೆ ಬಿದ್ದು – ಎದ್ದು ಹೋಗುತ್ತಿದ್ದಾರೆ.

ಒಂದು ಹೊಂಡ ದರ್ಬೆ ವೃತ್ತದ ಬಳಿಯೇ ಇದೆ. ಇನ್ನೊಂದು, ಹರ್ಷ ಮಳಿಗೆಯ ಮುಂದಿದೆ. ಈ ಹೊಂಡಗಳನ್ನು ಭರ್ತಿ ಮಾಡಿದಷ್ಟೂ ಮತ್ತೆ ಮತ್ತೆ ಬಾಯ್ದೆರೆದು ಕುಳಿತುಕೊಳ್ಳುತ್ತವೆ. ಕಾರಣ, ಆ ದೇವರೇ ಬಲ್ಲ.

ಪುತ್ತೂರು ಪೇಟೆಯಲ್ಲಿ ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ನಗರೋತ್ಥಾನದಡಿ ಮತ್ತೊಮ್ಮೆ ಡಾಮರು ಹಾಕಿ ಹಾಳುಗೆಡವಲಾಗಿದೆ. ಅದ್ಹೇಗೋ ಸಾಧಾರಣ ಸುಸ್ಥಿತಿಯಲ್ಲಿದ್ದ ರಸ್ತೆಗಳು, ಇದೀಗ ಕುಲಗೆಟ್ಟು ಹೋಗಿವೆ. ಅಲ್ಲಿ ಬಿದ್ದಿರುವ, ಇತರ ಕಡೆಗಳಲ್ಲಿ ಎದ್ದಿರುವ ರಸ್ತೆಯ ಹೊಂಡಗಳಿಗೆ ಈ ಎರಡು ಹೊಂಡಗಳು ಹಿರಿಯಣ್ಣನಂತಿವೆ.

ಜನಪ್ರತಿನಿಧಿಗಳು, ಅಧಿಕಾರಿಗಳೇ – ಜನಸಾಮಾನ್ಯರು ಮನವಿ ನೀಡುವವರೆಗೆ ಅಥವಾ ಹಿಡಿಶಾಪ ಹಾಕುವವರೆಗೆ ಕಾಯುವ ಅವಶ್ಯಕತೆ ಇದೆಯೇ? ಆದಷ್ಟು ಶೀಘ್ರ ರಸ್ತೆಯ ಹೊಂಡಗಳಿಗೆ ಮುಕ್ತಿ ನೀಡಬಹುದಲ್ಲವೇ? ವೃಥಾ ಅನೇಕ ಜೀವಗಳು ನೋವುಣ್ಣುವ ಬದಲು ಅಥವಾ ಪ್ರಾಣ ಹಾನಿ ಸಂಭವಿಸುವ ಮೊದಲು ಎಚ್ಚೆತ್ತುಕೊಂಡರೆ ಒಳಿತಲ್ಲವೇ?


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಿಂದಲೇ ಕಾಮಗಾರಿ ಉದ್ಘಾಟಿಸಿದ ಶಾಸಕ!

ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ…

ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಧರ್ಮಸ್ಥಳ!! ಕಾಣೆಯಾದ ಸತೀಶ್ 26 ವರ್ಷಗಳ ಬಳಿಕ ಸಲೀಂ ಆಗಿ ತಾಯಿ ಮಡಿಲಿಗೆ!

ಬೆಳ್ತಂಗಡಿ: ಧರ್ಮಸ್ಥಳ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಧರ್ಮಸ್ಥಳದಲ್ಲಿಯೇ 26 ವರ್ಷದ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

1 of 130