ಪುತ್ತೂರು: ನೆಹರುನಗರದ ರೋಹಿಣಿ ಹೊಲಿಗೆ & ಆರ್ಟ್ಸ್ & ಕ್ರಾಫ್ಟ್ ತರಬೇತಿ ಕೇಂದ್ರದ ವ್ಯವಸ್ಥಾಪಕಿ ರೋಹಿಣಿ ಆಚಾರ್ಯ ಅವರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ನೀಡುವ ಕಲಾರತ್ನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನವೆಂಬರ್ 30ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು.
ರೋಹಿಣಿ ಆಚಾರ್ಯ ಅವರ ಕಲಾ ಕ್ಷೇತ್ರದ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಸಮಾರಂಭದಲ್ಲಿ ಕಾದಂಬರಿಕಾರ ಕೌಂಡಿನ್ಯ, ಲೇಖಕ ರಾಗಂ, ಸಿನಿಮಾ ನಿರ್ದೇಶಕ ಸಾಯಿಪ್ರಕಾಶ್, ರಾಜ್ಯ ವಿಶ್ವಕರ್ಮ ಮಹಾಮಂಡಲ ರಾಜ್ಯಾಧ್ಯಕ್ಷ ಎಲ್. ನಾಗರಾಜಚಾರ್, ನಟಿ ಅಕ್ಷತಾ ಪಾಂಡವಪುರ, ಸಂದೀಪ್ ನೀನಾಸಂ ಮೊದಲಾದವರು ಉಪಸ್ಥಿತರಿದ್ದರು.
























