ಸ್ಥಳೀಯ

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ‌ಮುಚ್ಚಲು ಗಡು: ಕಮಿಷನರ್ ಗೆ ಶಾಸಕರಿಂದ ತರಾಟೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರುನಗರಸಭಾ ವ್ಯಾಪ್ತಿಯಲ್ಲಿ‌ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಹೊಂಡಗಳ ಸೃಷ್ಟಿಯಾಗಿದ್ದು ಅವುಗಳನ್ನು‌ಮುಚ್ಚುವಂತೆ ಕಳೆದ ಒಂದು ವಾರದ ಹಿಂದೆ ಶಾಸಕ ಅಶೋಕ್ ರೈ ಅವರು ನಗರಸಭಾ ಕಮಿಷನರ್ ಗೆ ಸೂಚನೆ ನೀಡಿದ್ದರು. ವಾರ ಕಳೆದರೂ ಇನ್ನೂ ಗುಂಡಿ‌ಮುಚ್ಚದೇ ಇರುವುದನ್ನು ಕಂಡು‌ಆಕ್ರೋಶಗೊಂಡ ಶಾಸಕರು‌ಕಮಿಷನರ್‌ಅವರನ್ನು ತರಾಟೆಗೆ ಎತ್ತಿಕೊಂಡಿದ್ದಾರೆ.

chennai-shopping
maithri

ಪುತ್ತೂರು‌ನಗರದ ದರ್ಬೆ,ಕಲ್ಲಾರೆ, ಬೊಳುವಾರು,ಪರ್ಲಡ್ಕ ಸೇರಿದಂತೆ ಕೆಲವು ಕಡೆಗಳಲ್ಲಿ‌ ರಸ್ತೆ ಹೊಂಡ ಬಿದ್ದಿದ್ದವು. ಮಳೆ ಇರುವ ಕಾರಣ ಪ್ಯಾಚ್ ವರ್ಕ್‌ಕಾಮಗಾರಿ ನಡೆಸಲು‌ಸಾಧ್ಯವಾಗಿರಲಿಲ್ಲ.‌ ಮಳೆ ಮುಗಿದ ತಕ್ಷಣ ಹೊಂಡ ಮುಚ್ಚುವಂತೆ ಶಾಸಕರು ಸೂಚನೆಯನ್ನು ನೀಡಿದ್ದರು. ಕಳೆದ‌ಒಂದು ವಾರದ ಹಿಂದೆ ಗಡುವನ್ನು ನೀಡಿದ್ದರು. ಆದರೆ ಕಮಿಷನರ್‌ಅವರು ಶಾಸಕರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದನ್ನು ನೋಡಿ‌ಸಿಟ್ಟಾದ ಶಾಸಕರು ತರಾಟೆಗೆ ಎತ್ತಿಕೊಂಡರು.

ನಾಳೆ ಕೊನೆ ಗಡು...!!
ಡಿ.1 ಸೋಮವಾರ ಹೊಂಡ ಮುಚ್ಚುವ ಕೆಲಸ ಆರಂಭ‌ಮಾಡಬೇಕು.‌ಇನ್ನು ಹೇಳುವುದಿಲ್ಲ ,ಏನು‌ಮಾಡ ಬೇಕೆಂದು ನನಗೆ ಗೊತ್ತಿದೆ ಎಂದು ಆಕ್ರೋಶದಿಂದ ಮಾತನಾಡಿದ ಶಾಸಕರು ನಾಳೆ ಯ ಗಡುವು ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರೋಟರಿ ಯುವದಿಂದ ರಾಮಕೃಷ್ಣ ಆಶ್ರಮದಲ್ಲಿ ಚಿತ್ರಕಲಾ ಶಿಬಿರ | ಯುವ ಕಲಾವಿದ ಯುಧಿಷ್ಠಿರ್ ಗೌಡ ಅವರಿಂದ ಕಲಾ ತರಬೇತಿ

ಪುತ್ತೂರು: ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ…

ಇ-ಖಾತಾ, ಇ-ಸ್ವತ್ತು ವಿತರಣೆಗೆ ವೇಗ: ದಕ್ಷಿಣ ಕನ್ನಡದಲ್ಲಿ ಸಚಿವ ದಿನೇಶ್ ಗುಂಡೂರಾವ್ ಕಟ್ಟುನಿಟ್ಟಿನ ಸೂಚನೆ

ಮಂಗಳೂರು:ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಇ-ಖಾತಾ ಮತ್ತು ಇ-ಸ್ವತ್ತುಗಳನ್ನು…

1 of 122