tamanvi
ಕರಾವಳಿಸ್ಥಳೀಯ

ಲಾರಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಚಾಲಕನ  ಶವ ಪತ್ತೆ!

D_shiva_bhat
ಮರವಂತೆ ಬೀಚ್ ಬದಿಯ ವರಾಹ ಸ್ವಾಮಿ ದೇವಸ್ಥಾನದ ಎದುರಿನ ಹೆದ್ದಾರಿಯಲ್ಲಿ ತಾಂತ್ರಿಕ ದೋಷದ ಕಾರಣ 6 ದಿನಗಳಿಂದ ನಿಂತಿದ್ದ ಲಾರಿಯೊಂದರಲ್ಲಿ ಚಾಲಕನ ಶವ ಮಲಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆ.

ಈ ಸುದ್ದಿಯನ್ನು ಶೇರ್ ಮಾಡಿ

ತ್ರಾಸಿ ಮರವಂತೆ ಬೀಚ್ ಬದಿಯ ವರಾಹ ಸ್ವಾಮಿ ದೇವಸ್ಥಾನದ ಎದುರಿನ ಹೆದ್ದಾರಿಯಲ್ಲಿ ತಾಂತ್ರಿಕ ದೋಷದ ಕಾರಣ 6 ದಿನಗಳಿಂದ ನಿಂತಿದ್ದ ಲಾರಿಯೊಂದರಲ್ಲಿ ಚಾಲಕನ ಶವ ಮಲಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಕುಂದಾಪುರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಲಾರಿ ಚಾಲಕ ಬುಧವಾರ ಬೆಳಗ್ಗೆ ಮೃತಪಟ್ಟಿರುವ ಶಂಕೆ ಇದೆ. ಸ್ಥಳಕ್ಕೆ ಗಂಗೊಳ್ಳಿ ಠಾಣಾ ಧಿಕಾರಿ ಬಸವ ಕನಶೆಟ್ಟಿ, ಸಹಾಯಕ ಠಾಣಾಧಿಕಾರಿ ಅಮೃತೇಶ್‌, ಸಿಬ್ಬಂದಿಗಳಾದ ನಾಗರಾಜ್ ಶೇರಿರ್ಗಾ, ರಿತೇಶ್ ಮುನಿಯಾಲ್ ರಾಘವೇಂದ್ರ ಮುಖ್ಯ ಪೇದೆ ನಾಗರಾಜ್ ನಾಯಕವಾಡಿ, ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮಿದಲಾದವರು ಭೇಟಿ ನೀಡಿ ಶವ ಸಾಗಾಟಕ್ಕೆ ಸಹಕರಿಸಿದರು. ಸದ್ಯ ಶವವನ್ನು ಮಣಿಪಾಲ ಆಸ್ಪತ್ರೆಯ ಶವ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ. ಮೃತ ಚಾಲಕನ ಹೆಸರು ಆಂಧ್ರಪ್ರದೇಶ ಮೂಲದ ಬಾಬು ರಾಯ್ ಎಂದು ಜತೆಯಲ್ಲಿದ್ದ ಕ್ಲೀನರ್ ಶಿವಾಸ್ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

1 of 178