ಪುತ್ತೂರು: 75 ಪೂರೈಸಿದ ಸಂಭ್ರಮದಲ್ಲಿರುವ ವರ್ಷಗಳ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯನ್ನು ಮುನ್ನಡೆಸುವ ನೇತೃತ್ವವನ್ನು ಪುತ್ತೂರು ದ್ವಾರಕಾ ಪ್ರತಿಷ್ಠಾನ ವಹಿಸಿಕೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮವನ್ನೂ ಆರಂಭ ಮಾಡಲಿದ್ದೆವೆ ಎಂದು ದ್ವಾರಕಾ ಪ್ರತಿಷ್ಠಾನ ಮತ್ತು ಶ್ರೀಕೃಷ್ಣ ವಿದ್ಯಾಸಂಸ್ಥೆ ಪಟ್ಟೆ ಇದರ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಟ್ಟೆ ನರಸಿಂಹ ಭಟ್ ಮತ್ತು ಬಾಲಕೃಷ್ಣ ಭಟ್ ಎಂಬವರ ನೇತೃತ್ವದಲ್ಲಿ ಮುನ್ನಡೆದುಕೊಂಡು ಬಂದಿರುವ ಶ್ರೀಕೃಷ್ಣ ವಿದ್ಯಾಸಂಸ್ಥೆಯು, ಸ್ಥಳೀಯ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದೀಗ ದ್ವಾರಕಾ ಪ್ರತಿಷ್ಠಾನವು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳನ್ನು ನಡೆಸಲು ಮುಂದಾಗಿದ್ದು, ಸುಸಂಸ್ಕೃತ ಸಮಾಜ ಕಟ್ಟುವ ನಿಟ್ಟಿನಲ್ಲಿ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಕೇವಲ ಸರ್ಟಿಫಿಕೇಟ್ ಪಡೆಯುವುದು ಶಿಕ್ಷಣವಲ್ಲ. ಶಿಕ್ಷಣದ ಮೂಲಕ ಮಕ್ಕಳು ಸಮಾಜಕ್ಕೆ ಆಸ್ತಿಯಾಗಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಕೊಡಬೇಕೆನ್ನುವ ಕನಸಿನೊಂದಿಗೆ ಈಗಿನ ಹೊಸ ಆಡಳಿತದೊಂದಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡಲಿದ್ದೇವೆ. ಮುಂದಿನ ದಿನಗಳಲ್ಲಿ ಹಲವು ಯೋಜನೆ ಇಟ್ಟುಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ಕೆ.ಜಿ. ಶಿಕ್ಷಣದಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲಿದ್ದೇವೆ. ಹಾಲಿ ವಿದ್ಯಾಸಂಸ್ಥೆಯಲ್ಲಿ 274 ವಿದ್ಯಾರ್ಥಿಗಳಿದ್ದು, ಇದೀಗ ಈ ಶೈಕ್ಷಣಿಕ ವರ್ಷದಲ್ಲಿ 50 ರಿಂದ 100 ವಿದ್ಯಾರ್ಥಿಗಳು ಹೆಚ್ಚು ಸೇರ್ಪಡೆಗೊಂಡಿದ್ದಾರೆ. 75 ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯಲ್ಲಿ ವರ್ಷವಿಡೀ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ ಎಂದರು.
ಸದ್ಯಕ್ಕೆ ನಿಂತಿರುವ ಪಿಯು ಶಿಕ್ಷಣವನ್ನು ಮುಂದಿನ ಎರಡು ವರ್ಷಗಳಲ್ಲಿ ಪುನರಾರಂಭಿಸಲಿದ್ದೇವೆ. ಮುಂದಿನ ಮಳೆಗಾಲದ ಸಂದರ್ಭದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಗೋಪಾಲಕೃಷ್ಣ ಭಟ್ ಹೇಳಿದರು.
ಶ್ರೀಕೃಷ್ಣ ವಿದ್ಯಾಸಂಸ್ಥೆಯ ಸಂಚಾಲಕ ವಿಘ್ನೇಶ್ ಮಾತನಾಡಿ, ಸುಸಂಸ್ಕೃತ, ಸಮಾಜದ ಜವಾಬ್ದಾರಿಯ ವಿದ್ಯಾರ್ಥಿಗಳನ್ನು ಅಲ್ಲಿ ಬೆಳೆಸಬೇಕೆಂಬ ಮುಖ್ಯ ಉದ್ದೇಶದಿಂದ ದ್ವಾರಕಾ ಪ್ರತಿಷ್ಠಾನವು ಈ ಸಂಸ್ಥೆಯ ನೇತೃತ್ವವನ್ನು ವಹಿಸಿಕೊಂಡಿದೆ. ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣದ ಜೊತೆಯಲ್ಲಿ ಸಾಂಸ್ಕೃತಿಕ, ಮೌಲ್ಯವರ್ಧನ ಶಿಕ್ಷಣ ಮತ್ತು ಸಾಂಪ್ರಾದಾಯಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕಬೇಕೆನ್ನುವುದು ನಮ್ಮ ಮಹದಾಸೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಳಿಗೆ ಗುರುಕುಲ ಮಾದರಿಯ ಶಿಕ್ಷಣ, ಕೃಷಿಗೆ ಸಂಬಂಧಿಸಿದ ಚಟುವಟಿಕೆ ಸಹಿತ ವಿದ್ಯಾರ್ಥಿಗಳ ಜೀವನ ಶೈಲಿಯ ಬದಲಾವಣೆಯ ಶಿಕ್ಷಣ ನೀಡಲಿದ್ದೇವೆ ಎಂದರು.
ದ್ವಾರಕಾ ಪ್ರತಿಷ್ಠಾನ ಮತ್ತು ಶ್ರೀಕೃಷ್ಣ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಅಮೃತಕೃಷ್ಣ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.
ದ್ವಾರಕಾ ಕಾರ್ಪೋರೇಶನ್ ಪ್ರೈ.ಲಿ. ಇದರ ಕಾರ್ಪೋರೇಶನ್ ವಿಭಾಗದ ಮುಖ್ಯಸ್ಥ ದುರ್ಗಾ ಗಣೇಶ್ ಉಪಸ್ಥಿತರಿದ್ದರು.
ಶ್ರೀಕೃಷ್ಣ ವಿದ್ಯಾಸಂಸ್ಥೆಯ ನೇತೃತ್ವ ವಹಿಸಿಕೊಂಡ ದ್ವಾರಕಾ ಪ್ರತಿಷ್ಠಾನ | 75ರ ಸಂಭ್ರಮಕ್ಕೆ ವರ್ಷವಿಡೀ ಕಾರ್ಯಕ್ರಮ, ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮವೂ ಆರಂಭ
What's your reaction?
- 794c
- 794cc
- 7ai technology
- 7ajjavara
- 7alwas
- 7apology
- 7artificial intelegence
- 6avg
- 6bihar minister
- 6bjp
- 6bjp leader
- 6bjp national president
- 6bt ranjan
- 6co-operative
- 6coastal
- 6crime
- 6crime news
- 5cyclothon
- 5darmasthala
- 5death news
- 5dust bin
- 5education
- 5fraud
- 5gl
- 5gods own country
- 5gold
- 4google for education
- 4independence
- 4jewel
- 4jewellers
- 4jnana vikasa
- 4karnataka state
- 4kerala village
- 4kukke - kollur temple
- 4lokayuktha
- 3lokayuktha raid
- 3manipal
- 3minister krishna bairegowda
- 3mla ashok rai
- 3mohan alwa
- 3mudubidre
- 3nidana news
- 3nirvathu mukku
- 3nitin nabin
- 2police
- 2ptr tahasildar
- 2puttur
- 2puttur news
- 2puttur tahasildar
- 2republic
- 2revenue
- 2revenue department
- 2revenue minister
- 1school
- 1senior citizen
- 1silver
- 1society
- 1sowmya
- 1students
- 1tahasildar
- 1tahasildar absconded
- 1teachers
- 0tour
- 0trending
- 0udupi
- 0wastage
Related Posts
ಜು. 30 (ನಾಳೆ): ಪುತ್ತೂರು, ಕಡಬ, ಸುಬ್ರಹ್ಮಣ್ಯ ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯ – ಡೀಟೈಲ್ ಇಲ್ಲಿದೆ
ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 30ರಂದು ಪುತ್ತೂರು, ಕಡಬ,…
ಅಪಾಯಕಾರಿ ಸ್ಥಿತಿಯಲ್ಲಿದ್ದ ರಸ್ತೆ ಬದಿಯ ಮರ: ತಹಸೀಲ್ದಾರ್ ಭೇಟಿ ಬಳಿಕ ತೆರವು
ಪುತ್ತೂರು: ಸಂಪ್ಯದಿಂದ ದೇವಸ್ಯ ಸಂಪರ್ಕಿಸುವ ಮೇರ್ಲ ರಸ್ತೆ ಬದಿಯ ಮರವೊಂದು ಅಪಾಯಕಾರಿ…
ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ | ಪುತ್ತೂರು ಗೃಹಲಕ್ಷ್ಮೀ ಸಂಭ್ರಮಾಚರಣೆಯಲ್ಲಿ ಉಮಾನಾಥ ಶೆಟ್ಟಿ ಪೆರ್ನೆ
ಪುತ್ತೂರು: ಗೃಹ ಲಕ್ಷ್ಮೀ ಸೇರಿದಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಮಂದಿ ಬದುಕು…
ಸಂಕಷ್ಟದಲ್ಲಿದ್ದ ಮಹಿಳೆಗೆ ಪುತ್ತೂರು ಬಿಲ್ಲವ ಬ್ರಿಗೇಡ್’ನಿಂದ ಧನಸಹಾಯ
ದಾರಂದಕುಕ್ಕು ನಿವಾಸಿ ಜಯಂತಿ (ದಿ. ಶೀನಪ್ಪ ಪೂಜಾರಿ ಅವರ ಪತ್ನಿ) ಅವರ ಸಂಕಷ್ಟದ…
ಜುಲೈ 30: ಪುರುಷರಕಟ್ಟೆ ರಸ್ತೆ ದುರಸ್ತಿಗೆ ಆಗ್ರಹಿಸಿ ಪುತ್ತಿಲ ಪರಿವಾರ ಪ್ರತಿಭಟನೆ
ಪುತ್ತೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ನೀಡಿದ ಮನವಿಗೆ ಸ್ಪಂದಿಸಿ ನೀಡಿದ ಭರವಸೆಯನ್ನು…
ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ
ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…
ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 17ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು ಮಾಡಲು…
ಕಾಂಗ್ರೆಸ್ ಪಕ್ಷಕ್ಕಾಗಿ ತಾನು, ತನ್ನ ತಂದೆ ದುಡಿದಿದ್ದೇವೆ; ಇದೀಗ ಶಾಸಕರಿಂದ ತನ್ನ ಬಗ್ಗೆಯೇ ಹಣ ತೆಗೆದುಕೊಂಡಿದ್ದಾನೆಂದು ಊಹಾಪೋಹ ಸೃಷ್ಟಿ – ಗಿರಿಧರ್ ನಾಯ್ಕ್
ಪುತ್ತೂರು: 94ಸಿ ಹಕ್ಕುಪತ್ರಕ್ಕಾಗಿ ಪುಣಚ ಗ್ರಾಮದ ಮೂವರು ಫಲಾನುಭವಿಗಳ ಪರವಾಗಿ ಪ್ರತಿಭಟನೆ…
ಸೋರುವ ಸೂರಿಗೆ ಟಾರ್ಪಲ್ ಹೊದಿಕೆ! ಬಿಜೆಪಿಯ 112ನೇ ಬೂತ್’ನಿಂದ ಜನಮೆಚ್ಚುವ ಕಾರ್ಯ!
ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರಿನ ಮುದರ ಅವರ ಮನೆ ಛಾವಣಿಗೆ ಬಿಜೆಪಿ 112ನೇ ಬೂತ್…
ಬಾಲಿವುಡ್ ನಟರು, ಕ್ರಿಕೆಟ್ ತಾರೆಯರು ಚುನಾವಣಾ ಆಖಾಡಕ್ಕೆ!! | ನಡುರಾತ್ರಿಯ ಬಿಜೆಪಿ ಸಭೆ ನಿರ್ಣಯಿಸಿದ ಆ ಸೆಲಬ್ರಿಟಿಗಳು ಯಾರು?
ನವದೆಹಲಿ: ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್…






















