tamanvi
ಧಾರ್ಮಿಕ

ಪರ್ಪುಂಜ: ರಾಮಜಾಲು ಗರಡಿ ಜಾತ್ರೆ ಆರಂಭ;ಸಂಜೆ ಭಂಡಾರ ಆಗಮಿಸಿ, ಬ್ರಹ್ಮಬೈದರ್ಕಳ ನೇಮೋತ್ಸವ

D_shiva_bhat
ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸಪ್ತದಶ ಸಂಭ್ರಮ ಶನಿವಾರ ಬೆಳಗ್ಗಿನಿಂದಲೇ ಆರಂಭಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸಪ್ತದಶ ಸಂಭ್ರಮ ಶನಿವಾರ ಬೆಳಗ್ಗಿನಿಂದಲೇ ಆರಂಭಗೊಂಡಿತು.

ಸಂಜೆ 4 ಗಂಟೆಗೆ ಕೂರೇಲು ತರವಾಡು ಮನೆಯಿಂದ ಭಂಡಾರ ಆಗಮನವಾಗಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ ಜರಗಲಿದೆ. ಬಳಿಕ ಬೈದೇರುಗಳು ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಬೈದೇರುಗಳ ಮೀಸೆ ಧರಿಸುವುದು, ಮಾಯಂದಾಲೆ ಗರಡಿ ಇಳಿಯುವುದು, ಬಳಿಕ ಚಾ ಪರ್ಕ ಕಲಾವಿದರಿಂದ ‘ಏರ್ಲಾ ಗ್ಯಾರೆಂಟಿ ಅತ್ತ್’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಬೆಳಿಗ್ಗೆ ಗಣಹೋಮ, ನಾಗದೇವರ ತಂಬಿಲ, ಬ್ರಹ್ಮೆರೆ ಗುಂಡದಲ್ಲಿ ಬ್ರಹ್ಮೆರೆ ಪೂಜೆ, ತಂಬಿಲ, ಕೋಟಿ – ಚೆನ್ನಯರಿಗೆ ನವಕ ಕಲಶ ಪೂಜೆ, ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಬಳಿಕ ಅನ್ನಸಂತರ್ಪಣೆ ಆರಂಭಗೊಂಡಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪೋಳ್ಯ ಮಠದ ಬ್ರಹ್ಮಕಲಶ: ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರ ಪಾರಾಯಣ, ಪ್ರಾರ್ಥನೆ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ…