ಧಾರ್ಮಿಕ

ಹನುಮನ ಸಮರ್ಪಣಾ ಭಾವ ಪ್ರೇರಣಾದಾಯಕ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ | ಬ್ರಹ್ಮಕಲಶದ ಸಂಭ್ರಮದಲ್ಲಿ ರಾಜ್ಯಪಾಲರಿಂದ ಹನುಮಗಿರಿ ಕ್ಷೇತ್ರದ ಮುಖ್ಯ ಗೋಪುರ, ಉದ್ಯಾನವನ ಲೋಕಾರ್ಪಣೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಹನುಮಂತನಂತೆ ಸೇವೆ. ಕರ್ತವ್ಯ ಮತ್ತು ಸಮರ್ಪಣಾ ಮನೋಭಾವವೇ ಜೀವನದ ನಿಜವಾದ ಮಾರ್ಗವಾಗಿದ್ದು, ಕಷ್ಟ ಕಾಲಕ್ಕೆ ನಿತ್ಯ ಪ್ರೇರಣೆಯಾಗಿದೆ. ಶ್ರೀರಾಮನಂತೆ ಕಠಿಣ ಸಂದರ್ಭದಲ್ಲೂ ಸತ್ಯ, ಧರ್ಮ ಮತ್ತು ಮಾರ್ಯಾದೆ ಪಾಲನೆ ಮಾಡಬೇಕಿದೆ. ಧರ್ಮ ಸಂಸ್ಕೃತಿ ಮತ್ತಷ್ಟು ಬಲಪಡಿಸಲು ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡಲು ಎಲ್ಲರೂ ಸಂಘಟಿತರಾಗಬೇಕಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದ್ದಾರೆ.

maithri

ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಶುಕ್ರವಾರ, ಕ್ಷೇತ್ರದ ಮುಖ್ಯ ನೂತನ ಗೋಪುರ ಹಾಗೂ ನವೀಕೃತ ಉದ್ಯಾನವನ ಲೋಕಾರ್ಪಣೆ ಮಾಡಿ ಮಾತನಾಡಿದರು.

ಹನುಮಗಿರಿ ಕ್ಷೇತ್ರವು ಆಧ್ಯಾತ್ಮ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರೇರಣೆಯ ಕೇಂದ್ರವಾಗಿದೆ. ಸಮಾಜಕ್ಕೆ ನೈತಿಕ ಮೌಲ್ಯ, ಏಕತೆ ಮತ್ತು ಸದ್ಭಾವನೆಯ ಸಂದೇಶ ಸಾರುವ ಕೆಲಸ ಇಲ್ಲಿ ಆಗುತ್ತಿದೆ ಎಂದ ಅವರು. ನಮ್ಮ ಸಂಸ್ಕೃತಿಯು ವಿಶ್ವಭ್ರಾತೃತ್ವ, ವಿಶ್ವಕಲ್ಯಾಣ. ವಿಶ್ವ ಶಾಂತಿ ಮತ್ತು ಸಮಾನತೆಯ ಪ್ರೇರಣೆಯನ್ನು ನೀಡುತ್ತಿದೆ ಎಂದರು.

ಆಶೀರ್ವಚನ ನೀಡಿದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ಧರ್ಮದ ಮೇಲಿನ ಭಕ್ತಿ ಮತ್ತು ದೇಶದ ಮೇಲಿನ ಭಕ್ತಿ ಎರಡೂ ಅನುಭವವೂ ಹನುಮಗಿರಿಯಲ್ಲಿದೆ. ದೈವ ಭಕ್ತಿ ಮತ್ತು ದೇಶ ಭಕ್ತಿ ಪ್ರತ್ಯಕ್ಷವಾಗಿ ಕಾಣಬಹುದಾದ ಹನುಮಗಿರಿ ನಿಜಕ್ಕೂ ಅದ್ಭುತ ಕ್ಷೇತ್ರವಾಗಿದೆ. ಇಲ್ಲಿ ಸಂಘದ ಪ್ರೇರಣೆಯೂ ಇದೆ. ಸಂತರ ಆಶೀರ್ವಾದವೂ ಇದೆ ಎಂದರು. ದೇವ ಭಕ್ತಿ, ದೇಶ ಭಕ್ತಿ ಎರಡೂ ಹನುಮಗಿರಿ ಕ್ಷೇತ್ರದಲ್ಲಿ ಮೇಳೈಸಿದೆ. ಕಾರ್ಯ ಶಾಶ್ವತವಾದರೆ, ಕಾರ್ಯಕ್ರಮ ಅರ್ಥಪೂರ್ಣವೆನ್ನುವಂತೆ ಬ್ರಹ್ಮಕಲಶ ಉತ್ಸವವನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಇಲ್ಲಿ ಸಂಯೋಜಿಸಲಾಗಿದೆ. ರಾಮ, ಹನುಮ ಅದೈಕ ಜ್ಯೋತಿ ಇಲ್ಲಿಗೆ ಬಂದಿದೆ ಎಂದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಪುತ್ತೂರು ಶಾಸಕ ಅಶೋಕ್ ಕುಮಾರ್‌ರೈ ಅವರು ವೇದಿಕೆಯಲ್ಲಿ ರಾಜ್ಯಪಾಲರನ್ನು ಗೌರವಿಸಿದರು.

ಬ್ರಹ್ಮಕಲಶೋತ್ಸವ ಸಮಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸ್ವಾಗತಿಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ನ ಅಚ್ಚುತ ಮೂಡೆತ್ತಾಯ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ ವೃತ್ತದಲ್ಲಿ ಉಬಾರ್ ಮಂಜ ಬೈದ್ಯರ ಪುತ್ಥಳಿ ಸ್ಥಾಪಿಸಿ, ಅವರ ಹೆಸರನ್ನಿಡುವಂತೆ ಗೆಜ್ಜೆಗಿರಿ ಸಮಿತಿ ಮನವಿ

ಉಪ್ಪಿನಂಗಡಿ ಮುಖ್ಯ ರಸ್ತೆಯ ವೃತ್ತಕ್ಕೆ ವೀರ ಉಬಾರ್ ಮಂಜ ಬೈದ್ಯರ ತ್ಯಾಗವನ್ನು ಸಾರುವ ಸಲುವಾಗಿ…

ಅನಾಹುತ, ಮೃತ್ಯು ಕಂಟಕ ಪರಿಹಾರಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಸೂಕ್ತ ಜಪ, ವಿಶೇಷ ಪ್ರಾರ್ಥನೆ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮೃತ್ಯುಂಜಯ…