tamanvi
ಶಿಕ್ಷಣ

ಪಿಯುಸಿ ಫಲಿತಾಂಶ: ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದ ಶ್ರೀವಿದ್ಯಾ ಜೆಡ್ಡು ಅವರಿಗೆ ಗೌರವ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದ ಬಂಟ್ವಾಳ ತಾಲೂಕಿನ ಬಸವನಗುಡಿಯ ನಿವಾಸಿ ಶ್ರೀವಿದ್ಯಾ ಜೆಡ್ಡು ಅವರಿಗೆ ಮುಡಿಪು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ಪಟಿಕ್ಕಲ್ ಕೃಷ್ಣಪಸಾದರ ಮಗ ಚಿನ್ಮಯ ರಾಮ ಅವರ ಉಪನಯನ ಸಂದರ್ಭ ಗೌರವಿಸಲಾಯಿತು.

ಶ್ರೀವಿದ್ಯಾ ಜೆಡ್ಡು ಸ್ವರ ಸಿಂಚನ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿ. ಭರತನಾಟ್ಯ ಕಲಾವಿದೆ. ಬಹುಮುಖ ಕಲಾ ಪ್ರತಿಭೆ. ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ.

ಪಟಿಕ್ಕಲ್ ರಾಮಚಂದ್ರ ಭಟ್ ಮತ್ತು ದೇವಕಿ ಅವರು ಶಾಲು ಪೇಟ ತೊಡಿಸಿದರು. ಶಾರದಮ್ಮ ಪೆರ್ನಾಜೆ ಹಾರ ಹಾಕಿದರು. ಗೌರಿ ಜೆಡ್ಡು ಪುಸ್ತಕ, ಸ್ಮರಣಿಕೆ ನೀಡಿದರು. ಕುಮಾರ ಪೆರ್ನಾಜೆ- ಸೌಮ್ಯ ಪೆರ್ನಾಜೆ ದಂಪತಿ ಜೇನುತುಪ್ಪ, ತಾಂಬೂಲ ನೀಡಿ ಶುಭ ಹಾರೈಸಿದರು.

ವಿದ್ಯಾರ್ಥಿನಿಯ ಹೆತ್ತವರು ನ್ಯಾಯವಾದಿ ಪ್ರಕಾಶ್ ನಾರಾಯಣ ಜೆಡ್ಡು, ರಮ್ಯ ಜೆಡ್ಡು ಹಾಗೂ ಕೃಷ್ಣಪ್ರಸಾದ್ ಪಟಿಕ್ಕಲ್, ಸ್ವರ್ಣ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿ ವಿದ್ಯಾರ್ಥಿನಿ ಜಯಪ್ರಭಾ ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ನಿರಂತರ ಯಶಸ್ಸು ದಾಖಲಿಸುತ್ತಿರುವ…

ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ನೂತನ ಸಾರಥ್ಯ! | ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಸಾರಥಿ!

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ…