ಪುತ್ತೂರು: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ಎಸ್ ಅವರು ಬೆಸ್ಟ್ ಪೇಪರ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಫೆಡರೇಶನ್ ಆಫ್ ಟೀಚರ್ಸ್ ಕೌನ್ಸಿಲ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಇನ್ ಕರ್ನಾಟಕ ಆಯೋಜಿಸಿದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ “ಎಐ ಅಂಡ್ ಕಸ್ಟಮರ್ ಪರ್ಚೇಸ್ ಬಿಹೇವಿಯರ್: ಎ ಸಿಸ್ಟಮ್ಯಾಟಿಕ್ ಲಿಟರೇಚರ್ ರಿವ್ಯೂ ಅಂಡ್ ಬಿಬ್ಲೀಯೋಮೆಟ್ರಿಕ್ ಅನಾಲಿಸಿಸ್” ಎಂಬ ಸಂಶೋಧನಾ ಲೇಖನವನ್ನು ಅವರು ಮಂಡಿಸಿದರು.
ಮೂರು ಪ್ರತ್ಯೇಕ ವಿಭಾಗಗಳಲ್ಲಿ ಆಯೋಜನೆಗೊಂಡ ಸಂಶೋಧನಾ ಲೇಖನ ಮಂಡನೆಯಲ್ಲಿ 206 ಸಂಶೋಧನಾ ಲೇಖನಗಳು ಸಲ್ಲಿಕೆಯಾಗಿತ್ತು. ‘ಇಂಡಿಯನ್ ಕಾಮರ್ಸ್ ಅಸೋಸಿಯೇಷನ್ ಬೆಸ್ಟ್ ಪೇಪರ್ ಅವಾರ್ಡ್’ ವಿಭಾಗದಲ್ಲಿ ಇವರಿಗೆ ಪ್ರಶಸ್ತಿ ಲಭಿಸಿದೆ.






















