Gl harusha
ಸ್ಥಳೀಯ

ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆಗೆ “ಸರಸ್ವತಿ ಸಾಧಕ ಸಿರಿ” ರಾಷ್ಟ್ರಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ಕಲಾಕುಂಜ ಸಾಂಸ್ಕೃತಿಕ ಸಂಸ್ಥೆಯು ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆಯವರಿಗೆ ಪ್ರಧಾನ ಮಾಡಲಾಯಿತು.

Pashupathi
akshaya college

ದಾವಣಗೆರೆ ಚನ್ನಗಿರಿ ವಿರೂಪಾಕ್ಷ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಾನದ  ಸಂಸ್ಥಾಪಕ ಗಣೇಶ ಶೆಣೈ ಸಾಲಿಗ್ರಾಮ ಪ್ರಧಾನ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ಬೈರಿ ಮಾತನಾಡಿ, ಸಾಧನೆ ಮಾಡಲು ಬಹಳಷ್ಟು ಶ್ರಮ ತಾಳ್ಮೆ ಶಕ್ತಿ ಬೇಕು. ಅಷ್ಟು ಸುಲಭವಾಗಿ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ. ನಿಮ್ಮಗಳ ಸಾಧನೆ ಇನ್ನೊಬ್ಬರಿಗೆ ಸ್ಪೂರ್ತಿ ಆಗಬೇಕು ನಿಮ್ಮ ಕೆಲಸಕ್ಕೆ ಮತ್ತಷ್ಟು ಜವಾಬ್ದಾರಿಗಳನ್ನು ತರಲಿ ಎಂದ ಅವರು, ಶಿವಮೊಗ್ಗದಲ್ಲಿನ ಕೃಷಿ ಮೇಳದಲ್ಲಿ, ದ.ಕ. ಜಿಲ್ಲೆಯ ಉತ್ತಮ ಕೃಷಿಕ ಪ್ರಶಸ್ತಿ ಗಳಿಸಿದವರು. ಹವ್ಯಕ ರತ್ನ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಲಾ ಪೋಷಕ ಕಲಾ ನಿರ್ದೇಶಕ ಶಿಕ್ಷಣ ಪ್ರೇಮಿಯಾಗಿ ಸಾಮಾಜಿಕವಾಗಿ ಗುರುತಿಸಿಕೊಂಡ ಕುಮಾರ್ ಪೆರ್ನಾಜೆಯವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎಂದರು.

ಸರಸ್ವತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿಗೆ ಸರ್ವರಿಗೂ ಸುಸ್ವಾಗತ ಮಾಡಿ ಕನ್ನಡ ತಿಲಕವನ್ನು  ಇಟ್ಟು  ಕನ್ನಡ ಕಂಕಣ ಕಟ್ಟಿ ಕನ್ನಡ ಆರತಿ ಬೆಳಗಿ ಪುಷ್ಪವೃಷ್ಠಿಯೊಂದಿಗೆ ಗೌರವಿಸಿದರು ತದನಂತರ ಕನ್ನಡ ಸಿರಿ ಪೇಟ ಸನ್ಮಾನ ಪತ್ರ ಫ್ರೇಮ್ ಚಿನ್ನದ ಲೇಪನದ ಪದಕ ಶಾಲು ಹಾರ ಸರಸ್ವತಿ ದೇವಿಯ  ಸ್ಮರಣಿಕೆ ನೀಡಿ ಗೌರವಿಸಿದರು.

ಮುಖ್ಯ ಅತಿಥಿಗಳಾಗಿದ್ದ ನಾಗೇಶ್ ಕಿಣಿ ಅಧ್ಯಕ್ಷರು ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ದಾವಣಗೆರೆ ಡಾ ನ ಗಂಗಾಧರಪ್ಪ ಸಾಮಾಜಿಕ ಸಾಧಕ ರಾಜ್ಯಪಾಲರು ಮೈಸೂರು ನಾಗರತ್ನ ಎಸ್ ಶೆಟ್ಟಿ ಸಾಹಿತಿಗಳು ಕನ್ನಡ ಉಪನ್ಯಾಸಕರು ಲೊಯಿಲ  ಸಂಸ್ಥೆ ಪದವಿಪೂರ್ವ ಕಾಲೇಜ್ ಮುಂಡಗೋಡ ಉತ್ತರ ಕನ್ನಡ ಜಿಲ್ಲೆ, ಸಂಗೀತ ಪ್ರಸನ್ನ ನಾಡಿಗ ಶೈಕ್ಷಣಿಕ ಸಾಧಕಿ ಮೈಸೂರು, ಆಶಾ ಆಡಿಗ ಆಚಾರ್ ಬಹುಮುಖಿ ಪ್ರತಿಭೆ ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಅಮೆರಿಕ ,ಜ್ಯೋತಿ ಗಣೇಶ್ ಶೆಣೈ    ಗೌರವಾಧ್ಯಕ್ಷರು .    ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ, ಹೆಚ್ ಮಂಜುನಾಥ್ ಅಧ್ಯಕ್ಷರು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ, ರಾಘವೇಂದ್ರ ಶೆಣೈ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ಕೆ ಸಿ ಉಮೇಶ್ ಕಾರ್ಯದರ್ಶಿಗಳು ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ, ಹವ್ಯಾಸಿ ವಿಶೇಷ ಬರಹ ಜೇನು ಕೃಷಿ ಗಡ್ಡದ ಸಾಧಕಿ ಸೌಮ್ಯ ಪೆರ್ನಾಜೆ, ಸವಿತಾ ಕೋಡಂದೂರ್ ಸಂಗೀತ ಶಿಕ್ಷಕಿ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…