tamanvi
ಪ್ರಚಲಿತ

ಇಬ್ಬರು ಗೆಳತಿಯರ ಜೊತೆ ಮನೆಯಲ್ಲಿದ್ದೆ: ಸುದ್ದಿಗೋಷ್ಠಿಯಲ್ಲಿ ಅರಿವಿಲ್ಲದೇ ಮಾತನಾಡಿದ ಕೆಕೆಆರ್ ಆಟಗಾರ!!

ಈ ಸುದ್ದಿಯನ್ನು ಶೇರ್ ಮಾಡಿ

ಐಪಿಎಲ್ ಟರ‍್ನಮೆಂಟ್ ಶುರುವಾಗುವ ಸಿದ್ಧತೆಯಲ್ಲಿದ್ದಾಗಲೇ ಕೆಕೆಆರ್ ಆಟಗಾರ ಬ್ರಾವೋ ಮಾತು ಇದೀಗ ಭಾರೀ ರ‍್ಚೆಗೆ ಕಾರಣವಾಗಿದೆ. ಸುದ್ದಿಗೋಷ್ಠಿಯಲ್ಲಿ ಕುಳಿತುಕೊಂಡು ಮೈಕ್ ಆನ್ ಇರುವುದನ್ನು ಮರೆತು, ತನ್ನ ಖಾಸಗಿ ಜೀವನದ ವಿಷಯವನ್ನು ಸಹಆಟಗಾರರ ಜೊತೆ ಹಂಚಿಕೊಂಡಿದ್ದಾರೆ.

ಅಜಿಂಕ್ಯ ರಹಾನೆ ಸೂಚನೆ ನೀಡುತ್ತಿದ್ದಂತೆ ಅಯ್ಯೋ ಎಂದು ಬ್ರಾವೋ ಮಾತು ನಿಲ್ಲಿಸಿದ್ದಾರೆ.

ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನ ಮಾತ್ರ ಬಾಕಿ. ಇದರ ನಡುವೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಡ್ವೇನ್ ಬ್ರಾವೋ ಮಾತು ಭಾರಿ ಕೋಲಾಹಲ ಸೃಷ್ಟಿಸಿದೆ.ಕೆಕೆಆರ್ ಸುದ್ದಿಗೋಷ್ಠಿಯಲ್ಲಿ ನಾಯಕ ಅಜಿಂಕ್ಯ ರಹಾನೆ, ಕೋಚ್ ಅಭಿಷೇಕ್ ನಾಯಕರ್, ಅಸಿಸ್ಟೆಂಟ್ ಕೋಚ್ ಶೇನ್ ವ್ಯಾಟ್ಸನ್ ಜೊತೆ ವೇದಿಕೆ ಹಂಚಿಕೊಂಡಿದ್ದ ಬ್ರಾವೋ ಮಾತು ಇದೀಗ ಭಾರಿ ವೈರಲ್ ಆಗಿದೆ.

ಕೆಕೆಆರ್ ಸುದ್ದಿಗೋಷ್ಠಿ ವೇದಿಕೆಯಲ್ಲಿ ಡ್ವೇನ್ ಬ್ರಾವೋ ಮೈಕ್ ಆನ್ ಆಗಿದೆ ಅನ್ನೋದೇ ಮರೆತಿದ್ದಾರೆ. ಶೇನ್ ವ್ಯಾಟ್ಸನ್ ವೇದಿಕೆಗೆ ಆಗಮಿಸಿ ಕುಳಿತುಕೊಳ್ಳುತ್ತಿದಂತೆ ಡಿಜೆ ಬ್ರಾವೋ ಆಡಿದ ಮಾತು ಕೆಲ ಆಕ್ರೋಶಕ್ಕೂ ಕಾರಣವಾಗಿದೆ. ಅಭಿಷೇಕ್ ನಾಯರ್‌ನತ್ತ ಕೈತೋರಿಸಿ ಮಾತನಾಡಿದ ಬ್ರಾವೋ, ಇವರು ಕರೆ ಮಾಡುವಾಗ ನಾನು ಇಬ್ಬರು ಚಿಕ್ಸ್ ( ಗರ್ಲ್‌ಫ್ರೆಂಡ್ಸ್) ಜೊತೆ ಮನೆಯಲ್ಲಿ ಕಾಲ ಕಳೆಯುತ್ತಿದ್ದೆ ಎಂದಿದ್ದಾರೆ. ಮತ್ತೆ ಮಾತು ಮುಂದುವರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲೇ ಡ್ವೇನ್ ಬ್ರಾವೋ ಇಬ್ಬರು ಗೆಳತಿಯರ ಜೊತೆ ಮನೆಯಲ್ಲಿ ಇದ್ದಾಗ ಇವರು ಕರೆ ಮಾಡಿದ್ದಾರೆ ಎಂದು ವ್ಯಾಟ್ಸನ್ ಬಳಿ ಹೇಳಿ ನಕ್ಕಿದ್ದಾರೆ. ಬ್ರಾವೋ ಮಾತು ಕೇಳಿಸಿಕೊಳ್ಳುತ್ತಿದ್ದಂತೆ ಅಜಿಂಕ್ಯ ರಹಾನೆ ಎಚ್ಚೆತ್ತುಕೊಂಡಿದ್ದಾರೆ. ಮೈಕ್ ಆನ್ ಇದೆ, ಮಾತಿನ ಬಗ್ಗೆ ನಿಗಾ ಇರಲಿ ಎಂದು ಎಚ್ಚರಿಸಿದ್ದಾರೆ. ಈ ವೇಳೆ ಅಯ್ಯೋ ಎಂದ ಬ್ರಾವೋ ತಕ್ಷಣ ಮಾತು ನಿಲ್ಲಿಸಿದ್ದಾರೆ.

ರಹಾನೆ ಎಚ್ಚರಿಕೆಯಿಂದ ಬ್ರಾವೋ ಅಲರ್ಟ್ ಆಗಿದ್ದಾರೆ. ರಹಾನೆ ಇಲ್ಲದಿದ್ದರೆ ಬ್ರಾವೋ ಮನೆಯಲ್ಲಿ ಗೆಳೆತಿಯರ ಜೊತೆ ಏನು ಮಾಡುತ್ತಿದ್ದೆ ಅನ್ನೋದು ಹೇಳುತ್ತಿದ್ದರು. ಅಜಿಂಕ್ಯ ರಾಹನೆ ತಕ್ಷಣವೇ ಅಲರ್ಟ್ ನೀಡಿದ ಕಾರಣ ಬ್ರಾವೋ ಮಾನ ಉಳಿದಿದೆ ಎಂದು ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…

ಪುತ್ತೂರು: ₹3 ಲಕ್ಷ ಮೌಲ್ಯದ ಚಿನ್ನ, ಹಣವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ; ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಪರ್ಸ್‌ವೊಂದನ್ನು ಅದರ ವಾರಸುದಾರರನ್ನು…