ಪುತ್ತೂರು: ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಲಿದೆ.
ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಜ್ಯೋತಿಷಿ ಗಣೇಶ್ ಭಟ್ ಕೇಕನಾಜೆ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೆ. ಉದಯ ನಾರಾಯಣ ಕಲ್ಲೂರಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸ್ಥಳ ಶುದ್ಧಿ ಪೂರ್ವಕ ಗಣಪತಿ ಹವನ ನಡೆದು ಭಜನೆ, ಮಧ್ಯಾಹ್ನ ಅಯ್ಯಪ್ಪ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ಕ್ಷೇತ್ರ ರಕ್ಷಕ ಗುಳಿದ ದೈವದ ನರ್ತನ ಸೇವೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಹಾಗೂ ಮಿನಿಪದವು ಶ್ರೀ ಅಯ್ಯಪ್ಪ ಭಕ್ತವೃಂದದ ಪ್ರಕಟಣೆ ತಿಳಿಸಿದೆ.
ಕ್ಷೇತ್ರದ ಬಗ್ಗೆ:
ಸುಮಾರು 47 ವರ್ಷಗಳ ಹಿಂದೆ ಮಿನಿಪದವಿನಲ್ಲಿ ಅಯ್ಯಪ್ಪ ಭಜನಾ ಮಂದಿರವನ್ನು ಅನಂತ ನಾಯ್ಕ ಹಾಗೂ ಊರವರು ಸ್ಥಾಪಿಸಿದರು. ವರ್ಷದಲ್ಲಿ ಒಂದು ಬಾರಿ ಮಕರ ಸಂಕ್ರಮಣದ ಸಂದರ್ಭ ಅಯ್ಯಪ್ಪ ಮಾಲಾಧಾರಿಗಳು 48 ದಿನಗಳ ಕಾಲ ಈ ಮಂದಿರದಲ್ಲಿ ವಾಸ್ತವ್ಯವಿದ್ದು, ಶರಣುಘೋಷ, ಪಡಿಪೂಜೆ ಹಾಗೂ ಶಬರಿಮಲೆಗೆ ಹೋಗುವ ದಿನ ಗಣಪತಿ ಹೋಮ, ಅಯ್ಯಪ್ಪ ಪೂಜೆ, ಪಡಿಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದವು. ಕಾಲಾಂತರದಲ್ಲಿ ಈ ಕಾರ್ಯಕ್ರಮಗಳು ನಿಂತು ಹೋಗುವಂತಾಯಿತು.
ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಗುಡಿಯ ಎದುರು ಭಾಗದ ರಸ್ತೆಯಲ್ಲಿ ಹಾದುಹೋಗುವ ವಾಹನಗಳು ಅಪಘಾತಕ್ಕೆ ಒಳಗಾಗುವುದು ಹೆಚ್ಚತೊಡಗಿತು. ವಾಹನ ಸವಾರರು ಹಾಗೂ ಅಕ್ಕಪಕ್ಕದಲ್ಲಿ ವಾಸ್ತವ್ಯವಿದ್ದ ಮನೆಯವರು ಭಯಬೀತರಾದರು. ಕಾರಣ ಏನೆಂದು ಜ್ಯೋತಿಷ್ಯ ಮುಖೇನ ತಿಳಿದಾಗ, ಮುಂಚಿನಿಂದಲೂ ನಡೆದುಕೊಂಡು ಬರುತ್ತಿದ್ದ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯದಿ ಅನ್ನದಾನ ಸೇವೆಗಳು ನಿಂತು ಹೋಗಿರುವುದೇ ಇದಕ್ಕೆಲ್ಲಾ ಕಾರಣ ಎಂದು ತಿಳಿದು ಬಂತು. ಆ ನಂತರದಲ್ಲಿ ಊರವರನ್ನು ಒಟ್ಟು ಸೇರಿಕೊಂಡು ವರ್ಷಪೂರ್ತಿ ಆಗಾಗ ಪೂಜಾ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ತದನಂತರ ಯಾವುದೇ ಅಪಘಾತಗಳು ಈ ಪರಿಸರದಲ್ಲಿ ಸಂಭವಿಸಿಲ್ಲ.
ಬಳಿಕ ಸ್ಥಳೀಯರು ಸೇರಿಕೊಂಡು ಅಯ್ಯಪ್ಪ ಸೇವಾ ಟ್ರಸ್ಟ್ (ರಿ.) ಮಿನಿಪದವು ಎಂಬ ಹೆಸರಿನಲ್ಲಿ ರಿಜಿಸ್ಟರ್ಡ್ ಬಾಡಿಯನ್ನು ಸ್ಥಾಪಿಸಿ, 2024ರ ಜನವರಿಯಲ್ಲಿ ಜೀರ್ಣೋದ್ಧಾರ ನಡೆಸಲಾಗಿದೆ.
ಮಿನಿಪದವು: ಮಾ. 23ರಂದು ಶ್ರೀ ಅಯ್ಯಪ್ಪ ಸಾನಿಧ್ಯದಲ್ಲಿ ಗುಳಿಗ ದೈವದ ನೇಮೋತ್ಸವ
What's your reaction?
- 1894c
- 1894cc
- 18ai technology
- 18ajjavara
- 17alwas
- 17apology
- 17artificial intelegence
- 17avg
- 16bihar minister
- 16bjp
- 16bjp leader
- 15bjp national president
- 15bt ranjan
- 15co-operative
- 15coastal
- 14crime
- 14crime news
- 14cyclothon
- 13darmasthala
- 13death news
- 13dust bin
- 13education
- 12fraud
- 12gl
- 12gods own country
- 11gold
- 11google for education
- 11independence
- 11jewel
- 10jewellers
- 10jnana vikasa
- 10karnataka state
- 10kerala village
- 9kukke - kollur temple
- 9lokayuktha
- 9lokayuktha raid
- 8manipal
- 8minister krishna bairegowda
- 8mla ashok rai
- 8mohan alwa
- 7mudubidre
- 7nidana news
- 7nirvathu mukku
- 6nitin nabin
- 6police
- 6ptr tahasildar
- 6puttur
- 5puttur news
- 5puttur tahasildar
- 5republic
- 4revenue
- 4revenue department
- 4revenue minister
- 4school
- 3senior citizen
- 3silver
- 3society
- 3sowmya
- 2students
- 2tahasildar
- 2tahasildar absconded
- 1teachers
- 1tour
- 1trending
- 1udupi
- 0wastage
Related Posts
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ಶಿಲಾಮಯ ದಾರಂದ
ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಸುತ್ತುಪೌಳಿಯ ಮಹಾದ್ವಾರಕ್ಕೆ…
ಪಿ.ಜಿ ಜಗನ್ನಿವಾಸ್ ರಾವ್ ಪುತ್ತೂರು ದೇವಳದ ಧ್ವಜಾರೋಹಣದಲ್ಲಿ ಭಾಗಿಯಾದರೆ, ಬ್ರಹ್ಮರಥ ಏರಿದರೆ ಕಾನೂನು ಹೋರಾಟ | ದೇವಳದ ಪದಾರ್ಥಿಗಳೇ ಧಾರ್ಮಿಕ ಕಾರ್ಯ ನೆರವೇರಿಸಲು ಆಗ್ರಹಿಸಿದ ಶೈವಕ್ಷೇತ್ರ ಸಂರಕ್ಷಣಾ ವೇದಿಕೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಅನುಮತಿ ಇಲ್ಲದ, ಕ್ರಿಮಿನಲ್ ಆರೋಪಿಯ…
ಸಮರ್ಪಣೆಗೊಂಡ ಗೌಡ ಸಮುದಾಯ ಭವನದ ನೂತನ ಕಟ್ಟೆ
ಪುತ್ತೂರು: ತೆಂಕಿಲ ಗೌಡ ಸಮುದಾಯ ಭವನದ ಮುಂದೆ ನಿರ್ಮಾಣಗೊಂಡಿರುವ ನೂತನ ಕಟ್ಟೆಯನ್ನು ಭಾನುವಾರ…
ಹನುಮನ ಸಮರ್ಪಣಾ ಭಾವ ಪ್ರೇರಣಾದಾಯಕ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ | ಬ್ರಹ್ಮಕಲಶದ ಸಂಭ್ರಮದಲ್ಲಿ ರಾಜ್ಯಪಾಲರಿಂದ ಹನುಮಗಿರಿ ಕ್ಷೇತ್ರದ ಮುಖ್ಯ ಗೋಪುರ, ಉದ್ಯಾನವನ ಲೋಕಾರ್ಪಣೆ
ಹನುಮಂತನಂತೆ ಸೇವೆ. ಕರ್ತವ್ಯ ಮತ್ತು ಸಮರ್ಪಣಾ ಮನೋಭಾವವೇ ಜೀವನದ ನಿಜವಾದ ಮಾರ್ಗವಾಗಿದ್ದು, ಕಷ್ಟ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 9ನೇ ವಾರ್ಷಿಕೋತ್ಸವ | ಚಾರಿಟಿ, ಮನರಂಜನೆಯ ಉದ್ದೇಶದಿಂದ ಫೌಂಡೇಶನ್ ಕಾರ್ಯ: ಪಟ್ಲ ಸತೀಶ್ ಶೆಟ್ಟಿ | ಸಹಸ್ರ ಕವಚ ಮೋಕ್ಷ ಪೌರಾಣಿಕ ಯಕ್ಷಗಾನ
ಪುತ್ತೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 9ನೇ ವಾರ್ಷಿಕೋತ್ಸವ ಹಾಗೂ…
ಧಾರ್ಮಿಕ ಕೇಂದ್ರಗಳು ಎಲ್ಲರನ್ನು ಏಕಸೂತ್ರದಲ್ಲಿ ಬಂಧಿಸುತ್ತದೆ: ಎಡನೀರು ಶ್ರೀ | ಬಾರ್ಯ ದೇವಳದ ಹೊರಾಂಗಣಕ್ಕೆ ಶಾಶ್ವತ ಮೇಲ್ಛಾವಣಿ ಕಾರ್ಯಕ್ಕೆ ಚಾಲನೆ
ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಯಜ್ಞ ಯಾಗಾದಿಗಳು ಆ ಕ್ಷೇತ್ರಕ್ಕೆ ಮಾತ್ರ ಸಂಬಂಧಪಡದೆ ಲೋಕ…
ಗೌಡ ಸಮುದಾಯ ಭವನದಲ್ಲಿ ದೇವರ ನೂತನ ಶಿಲಾಮಯ ಕಟ್ಟೆ | ಏ. 12ರಂದು ದೇವರಿಗೆ ಸಮರ್ಪಣೆ
ಪುತ್ತೂರು: ತೆಂಕಿಲ ಗೌಡ ಸಮುದಾಯ ಭವನದ ಮುಂಭಾಗದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ನೂತನ ಶಿಲಾಮಯ…
ಧರ್ಮ ರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ: ಕಂಚಿ ಶ್ರೀ | ಹನುಮಗಿರಿ ಬ್ರಹ್ಮಕಲಶೋತ್ಸವದಲ್ಲಿ ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಧರ್ಮಸಂದೇಶ
ಪುತ್ತೂರು: ಸನಾತನ ಧರ್ಮದ ರಕ್ಷಣೆ ಮಾಡುವವರನ್ನು ಸದಾ ಬೆಂಬಲಿಸಬೇಕು. ಧರ್ಮ ರಕ್ಷಣೆ ಕಾರ್ಯಕ್ಕೆ…
ಬಲ್ನಾಡು ದಂಡನಾಯಕ ದೈವದ ಸುರಿಯಕ್ಕೆ ಚಿನ್ನದ ಹೊದಿಕೆ
ಪುತ್ತೂರು: ಹಿಂದಿನ ವರ್ಷ ಬಲ್ನಾಡು ಉಳ್ಳಾಲ್ತಿ ದೈವಕ್ಕೆ ಚಿನ್ನದ ಮಲ್ಲಿಗೆ ಹಾರ ಸಮರ್ಪಿಸಿದ್ದು,…
ಏ. 13ರಿಂದ ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ‘ಉಚಿತ ಸಂಸ್ಕೃತ ಕಲಿಕಾ ಶಿಬಿರ’
ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ 'ಉಚಿತ ಸಂಸ್ಕೃತ ಸಂಭಾಷಣಾ…





















