ಪುತ್ತೂರು: ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಲಿದೆ.
ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಜ್ಯೋತಿಷಿ ಗಣೇಶ್ ಭಟ್ ಕೇಕನಾಜೆ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೆ. ಉದಯ ನಾರಾಯಣ ಕಲ್ಲೂರಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸ್ಥಳ ಶುದ್ಧಿ ಪೂರ್ವಕ ಗಣಪತಿ ಹವನ ನಡೆದು ಭಜನೆ, ಮಧ್ಯಾಹ್ನ ಅಯ್ಯಪ್ಪ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ಕ್ಷೇತ್ರ ರಕ್ಷಕ ಗುಳಿದ ದೈವದ ನರ್ತನ ಸೇವೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಹಾಗೂ ಮಿನಿಪದವು ಶ್ರೀ ಅಯ್ಯಪ್ಪ ಭಕ್ತವೃಂದದ ಪ್ರಕಟಣೆ ತಿಳಿಸಿದೆ.
ಕ್ಷೇತ್ರದ ಬಗ್ಗೆ:
ಸುಮಾರು 47 ವರ್ಷಗಳ ಹಿಂದೆ ಮಿನಿಪದವಿನಲ್ಲಿ ಅಯ್ಯಪ್ಪ ಭಜನಾ ಮಂದಿರವನ್ನು ಅನಂತ ನಾಯ್ಕ ಹಾಗೂ ಊರವರು ಸ್ಥಾಪಿಸಿದರು. ವರ್ಷದಲ್ಲಿ ಒಂದು ಬಾರಿ ಮಕರ ಸಂಕ್ರಮಣದ ಸಂದರ್ಭ ಅಯ್ಯಪ್ಪ ಮಾಲಾಧಾರಿಗಳು 48 ದಿನಗಳ ಕಾಲ ಈ ಮಂದಿರದಲ್ಲಿ ವಾಸ್ತವ್ಯವಿದ್ದು, ಶರಣುಘೋಷ, ಪಡಿಪೂಜೆ ಹಾಗೂ ಶಬರಿಮಲೆಗೆ ಹೋಗುವ ದಿನ ಗಣಪತಿ ಹೋಮ, ಅಯ್ಯಪ್ಪ ಪೂಜೆ, ಪಡಿಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದವು. ಕಾಲಾಂತರದಲ್ಲಿ ಈ ಕಾರ್ಯಕ್ರಮಗಳು ನಿಂತು ಹೋಗುವಂತಾಯಿತು.
ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಗುಡಿಯ ಎದುರು ಭಾಗದ ರಸ್ತೆಯಲ್ಲಿ ಹಾದುಹೋಗುವ ವಾಹನಗಳು ಅಪಘಾತಕ್ಕೆ ಒಳಗಾಗುವುದು ಹೆಚ್ಚತೊಡಗಿತು. ವಾಹನ ಸವಾರರು ಹಾಗೂ ಅಕ್ಕಪಕ್ಕದಲ್ಲಿ ವಾಸ್ತವ್ಯವಿದ್ದ ಮನೆಯವರು ಭಯಬೀತರಾದರು. ಕಾರಣ ಏನೆಂದು ಜ್ಯೋತಿಷ್ಯ ಮುಖೇನ ತಿಳಿದಾಗ, ಮುಂಚಿನಿಂದಲೂ ನಡೆದುಕೊಂಡು ಬರುತ್ತಿದ್ದ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯದಿ ಅನ್ನದಾನ ಸೇವೆಗಳು ನಿಂತು ಹೋಗಿರುವುದೇ ಇದಕ್ಕೆಲ್ಲಾ ಕಾರಣ ಎಂದು ತಿಳಿದು ಬಂತು. ಆ ನಂತರದಲ್ಲಿ ಊರವರನ್ನು ಒಟ್ಟು ಸೇರಿಕೊಂಡು ವರ್ಷಪೂರ್ತಿ ಆಗಾಗ ಪೂಜಾ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ತದನಂತರ ಯಾವುದೇ ಅಪಘಾತಗಳು ಈ ಪರಿಸರದಲ್ಲಿ ಸಂಭವಿಸಿಲ್ಲ.
ಬಳಿಕ ಸ್ಥಳೀಯರು ಸೇರಿಕೊಂಡು ಅಯ್ಯಪ್ಪ ಸೇವಾ ಟ್ರಸ್ಟ್ (ರಿ.) ಮಿನಿಪದವು ಎಂಬ ಹೆಸರಿನಲ್ಲಿ ರಿಜಿಸ್ಟರ್ಡ್ ಬಾಡಿಯನ್ನು ಸ್ಥಾಪಿಸಿ, 2024ರ ಜನವರಿಯಲ್ಲಿ ಜೀರ್ಣೋದ್ಧಾರ ನಡೆಸಲಾಗಿದೆ.
ಮಿನಿಪದವು: ಮಾ. 23ರಂದು ಶ್ರೀ ಅಯ್ಯಪ್ಪ ಸಾನಿಧ್ಯದಲ್ಲಿ ಗುಳಿಗ ದೈವದ ನೇಮೋತ್ಸವ
What's your reaction?
- 1994c
- 1994cc
- 19ai technology
- 18ajjavara
- 18alwas
- 18apology
- 18artificial intelegence
- 17avg
- 17belthangady-provocative-speech-case-conviction
- 17bihar minister
- 17bjp
- 16bjp leader
- 16bjp national president
- 16bt ranjan
- 15co-operative
- 15coastal
- 15Court convicts accused in provocative speech case
- 15crime
- 14crime news
- 14cyclothon
- 14darmasthala
- 13death news
- 13dust bin
- 13education
- 13fraud
- 12gl
- 12gods own country
- 12gold
- 11google for education
- 11independence
- 11jewel
- 11jewellers
- 10jnana vikasa
- 10karnataka state
- 10kerala village
- 10kukke - kollur temple
- 9lokayuktha
- 9lokayuktha raid
- 9Mangalore
- 8manipal
- 8minister krishna bairegowda
- 8mla ashok rai
- 8mohan alwa
- 7mudubidre
- 7nidana news
- 7nirvathu mukku
- 6nitin nabin
- 6police
- 6ptr tahasildar
- 6puttur
- 5puttur news
- 5puttur tahasildar
- 5republic
- 4revenue
- 4revenue department
- 4revenue minister
- 4school
- 3senior citizen
- 3silver
- 3society
- 3sowmya
- 2students
- 2tahasildar
- 2tahasildar absconded
- 1teachers
- 1tour
- 1trending
- 1udupi
- 0wastage
Related Posts
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ಆದಿ ಸುಬ್ರಹ್ಮಣ್ಯ ದೇವಳಕ್ಕೆ ನುಗ್ಗಿದ ನೆರೆ ನೀರು
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಪರಿಸರ ಹಾಗೂ ಘಟ್ಟ ಪ್ರದೇಶದಲ್ಲಿ ಮಂಗಳವಾರ…
ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷರು ಕುಕ್ಕೆಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ
ಪುತ್ತೂರು: ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರಿಯ ಅಧ್ಯಕ್ಷರಾದ ಅಲೋಕ್ ಕುಮಾರ್ ಅವರು ಗುರುವಾರ…
ಮಹಾಲಿಂಗೇಶ್ವರ ದೇವರಿಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಂದ ಸ್ವರ್ಣ ಸಮರ್ಪಣೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ…
ಆ.24ರಂದು ‘ಶ್ರೀ ಮಾತಾ’ ಪೂಜಾ ಸಾಮಗ್ರಿ ಹಾಗೂ ಸಾವಯವ ಮಳಿಗೆ ಶುಭಾರಂಭ
ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ‘ಶ್ರೀಮಾತಾ’ ಹೆಸರಿನ ಪೂಜಾ ಸಾಮಗ್ರಿ ಹಾಗೂ ಸಾವಯವ ಉತ್ಪನ್ನಗಳ…
ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ…
ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ; ಮಂಜುನಾಥ ಸ್ವಾಮಿಯ ದರ್ಶನ
ಧರ್ಮಸ್ಥಳ: ರಾಕಿಂಗ್ ಸ್ಟಾರ್ ಯಶ್ ಅವರು ಆ.25ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ…
ಪುತ್ತೂರು: (ಸೆ. 4) 28ನೇ ವರ್ಷದ ‘ಶ್ರೀಕೃಷ್ಣ ಲೋಕ’: ಅದ್ಧೂರಿ ಶೋಭಾಯಾತ್ರೆ
ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಹಾಗೂ ವಿವೇಕಾನಂದ ಶಿಶುಮಂದಿರ,…
ಧರ್ಮಸ್ಥಳದಲ್ಲಿ ಇಂದ್ರಿಯ ಆರೋಗ್ಯದ ಅಂತಾರಾಷ್ಟ್ರೀಯ ಸಮಾವೇಶ ‘ಪುನರ್ವಸು’
ಉಜಿರೆ: ಪಂಚೇಂದ್ರಿಯಗಳ ಆರೋಗ್ಯ ಹಾಗೂ ಬಲವರ್ಧನೆಗೆ ಪಾರಂಪರಿಕ ಆಯುರ್ವೇದ ಪದ್ಧತಿ…
ನಾಳೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ ಎಲ್ಲಿ…?
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ…
ಬಲ್ನಾಡು ದಂಡನಾಯಕ ದೈವದ ಸುರಿಯಕ್ಕೆ ಚಿನ್ನದ ಹೊದಿಕೆ
ಪುತ್ತೂರು: ಹಿಂದಿನ ವರ್ಷ ಬಲ್ನಾಡು ಉಳ್ಳಾಲ್ತಿ ದೈವಕ್ಕೆ ಚಿನ್ನದ ಮಲ್ಲಿಗೆ ಹಾರ ಸಮರ್ಪಿಸಿದ್ದು,…























