ಶಿಕ್ಷಣ

ದ್ವಿತೀಯ ಪಿಯು ಫಲಿತಾಂಶ – ವಿವೇಕಾನಂದ ವಸತಿನಿಲಯಕ್ಕೆ ಶೇ. 100 ಫಲಿತಾಂಶ: ಅಭಿನಂದನೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1ರಲ್ಲಿ ವಿವೇಕಾನಂದ ವಸತಿನಿಲಯದಲ್ಲಿ ವಾಸ್ತವ್ಯ ಹೊಂದಿ, ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ನಡೆಸಿದ ವಸತಿ ನಿಲಯದ 102 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

maithri

ಅದೇ ರೀತಿ 73 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು 100% ಫಲಿತಾಂಶವನ್ನು ನೀಡಿರುತ್ತಾರೆ. ಈ ಪೈಕಿ 590 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮನ್ಮಿತಾ – ವಾಣಿಜ್ಯ ವಿಭಾಗ (596 – 99%), ಬಿಂದು ಎಚ್‌ ಆರ್‌ – ವಾಣಿಜ್ಯ ವಿಭಾಗ (596 – 99%), ತೀರ್ಥಾ ಶೆಟ್ಟಿ – ವಿಜ್ಞಾನ ವಿಭಾಗ (595 – 99%), ಪ್ರಾಪ್ತಿ ಆಳ್ವ – ವಿಜ್ಞಾನ ವಿಭಾಗ (593 – 98%), ಗೌರವ್‌ ಎಂ ಕಶ್ಯಪ್‌ – ವಾಣಿಜ್ಯ ವಿಭಾಗ (590 – 98%), ಅದಿತಿ ಯು – ವಿಜ್ಞಾನ ವಿಭಾಗ (590 – 98%), ಅಪೂರ್ವ ಎ ಆರ್‌ – ವಾಣಿಜ್ಯ ವಿಭಾಗ (590 – 98%) ಅವರನ್ನು ಸನ್ಮಾನಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆರಂಭವಾದ ವಿವೇಕಾನಂದ ವಸತಿನಿಲಯಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹವನ್ನು ತುಂಬಿ ಸಮಾಜಮುಖಿ ಜೀವನ ಪದ್ಧತಿಯನ್ನು ತುಂಬುವ ಧ್ಯೇಯವನ್ನು ಹೊಂದಿದೆ.

ಪ್ರೌಢ ಶಿಕ್ಷಣದಿಂದ ಇಂಜಿನಿಯರಿಂಗ್ ಅಥವಾ ವೃತ್ತಿಪರ ಶಿಕ್ಷಣ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 5 ವಿವಿಧ ವಸತಿನಿಲಯಗಳಿರುತ್ತದೆ. ನಮ್ಮ ವಸತಿನಿಲಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶಾಲವಾದ ಕೊಠಡಿಗಳು, ಸಭಾಂಗಣ, ಶುಚಿ-ರುಚಿಯಾದ ಊಟೋಪಚಾರ ಮತ್ತು ಭೋಜನದ ವ್ಯವಸ್ಥೆಯ ಜೊತೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ. 2026-27 ನೇ ಸಾಲಿನ ದಾಖಲಾತಿ ಈಗಾಗಲೇ ಪ್ರಾರಂಭಗೊಂಡಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬಹುದು.

ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹೆತ್ತವರು, ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ವಸತಿ ನಿಲಯದ ಆಡಳಿತಾಧಿಕಾರಿ, ಮುಖ್ಯ ನಿಲಯ ಪಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಹತ್ತನೆಯಲ್ಲಿ 55 ಶೇಕಡ, ಪಿಯು ಫಲಿತಾಂಶದಲ್ಲಿ 94.6 ಶೇಕಡ! ಬಪ್ಪಳಿಗೆಯ ಅಂಬಿಕಾ ಪ.ಪೂ.ವಿದ್ಯಾಲಯದ ನಿಹಾಲ್ ಎನ್ ಅವರಿಂದ ವಿಶಿಷ್ಟ ಸಾಧನೆ

ಪುತ್ತೂರು: ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ಪುತ್ತೂರಿನ ನಟ್ಟೋಜ ಫೌಂಡೇಶನ್…