tamanvi
ಕರಾವಳಿ

ಸ.ಹಿ‌.ಪ್ರಾ ಶಾಲೆ ಸಜಂಕಾಡಿಯಲ್ಲಿ “ನಮ್ಮ ನಡಿಗೆ ನಾಟಿ ವೈದ್ಯರ ಮನೆಯ ಕಡೆಗೆ ” ಕಾರ್ಯಕ್ರಮ 

D_shiva_bhat
ದ.ಕ. ಜಿ. ಪಂ ಹಿ ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳಿಗೆ ಪರಂಪರಾಗತ ನಾಟಿ ವೈದ್ಯ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ  'ನಮ್ಮ ನಡಿಗೆ  ನಾಟಿ ವೈದ್ಯರ ಮನೆಯ ಕಡೆಗೆ "ಎಂಬ ವಿಭಿನ್ನ  ಕಾರ್ಯಕ್ರಮವು ಪಡುಮಲೆ ಪೂಜಾರಿ ಮೂಲೆಯ ವಿಶ್ವನಾಥ ಪೂಜಾರಿಯವರ ಮನೆಯಂಗಳದಲ್ಲಿ ನಡೆಯಿ

ಈ ಸುದ್ದಿಯನ್ನು ಶೇರ್ ಮಾಡಿ

ದ.ಕ. ಜಿ. ಪಂ ಹಿ ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳಿಗೆ ಪರಂಪರಾಗತ ನಾಟಿ ವೈದ್ಯ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ  ‘ನಮ್ಮ ನಡಿಗೆ  ನಾಟಿ ವೈದ್ಯರ ಮನೆಯ ಕಡೆಗೆ “ಎಂಬ ವಿಭಿನ್ನ  ಕಾರ್ಯಕ್ರಮವು ಪಡುಮಲೆ ಪೂಜಾರಿ ಮೂಲೆಯ ವಿಶ್ವನಾಥ ಪೂಜಾರಿಯವರ ಮನೆಯಂಗಳದಲ್ಲಿ ನಡೆಯಿತು .ಕೆಂಪು ,ಸರ್ಪಸುತ್ತು ,ಪಕ್ಷವಾತ ,ಅಂಗವಿಕಲರಿಗೆ ಮದ್ದು ,ಕಿಡ್ನಿಸ್ಟೋನ್ ಮುಂತಾದ  ರೋಗಗಳಿಗೆ ಸುಮಾರು 40ವರುಷಗಳಿಂದ ಪರಂಪರೆಯಿಂದ ಬಂದಹ ನಾಟಿ ಔಷಧಿ ನೀಡುತ್ತಿರುವ  ವಿಶ್ವನಾಥ ಪೂಜಾರಿಯವರು  ವಿವಿಧ ಗಿಡಮೂಲಿಕೆಗಳೊಂದಿಗೆ ಮಾಹಿತಿ ನೀಡಿದರು .ಶಾಲಾ ಎಸ್ .ಡಿ.ಎಂ.ಸಿ ಅಧ್ಯಕ್ಷೆ  ಶ್ರೀಮತಿ ಯಶೋಧ ಅಧ್ಯಕ್ಷತೆ ವಹಿಸಿದ್ದರು . ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಕುಮಾರ್ ಕೆ ,ಎಸ್ ಡಿ ಎಂ ಸಿ ಉಪಾಧ್ಯಕ್ಷ ರಝಾಕ್ , ಹಿರಿಯ ಶಿಕ್ಷಕಿ ಶಶಿಕಲಾ ,ಪೋಷಕರಾದ ಬಾಬು,ಅಡುಗೆ ಸಿಬ್ಬಂದಿ ಗಳಾದ ಸ್ಟೆಲ್ಲಾ ಮತ್ತು ಸೀತಾ  ಉಪಸ್ಥಿತರಿದ್ದರು .

maithri

ಶಾಲಾ ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಪ್ರಾಸ್ಥಾವಿಕ ಮಾತುಗಳನ್ನಾಡಿದರು .ಶಿಕ್ಷಕ  ಗಣೇಶ ನಾಯಕ್ ಪುತ್ತೂರು ಕಾರ್ಯನಿರೂಪಿಸಿದರು .

ಸನ್ಮಾನ : ಸುಮಾರು ನಲುವತ್ತು ವರುಷಗಳಿಂದ ವಿವಿಧ ರೋಗಗಳಿಗೆ ಪರಂಪರಾಗತ ನಾಟಿ ಔಷಧಿ ನೀಡುತ್ತಿರುವ ವಿಶ್ವನಾಥ ಪೂಜಾರಿಯವರನ್ನು ಸನ್ಮಾನಿಸಲಾಯಿತು .


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…

ಕಲ್ಲುಗುಂಡಿಯ ಫಾತಿಮತ್ ನಿಶಾನ ಸಾವು ಪ್ರಕರಣ: ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಪುತ್ತೂರು ಕಾಂಗ್ರೆಸ್ ನಿಯೋಗ!

ಕಲ್ಲುಗುಂಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಫಾತಿಮತ್ ನಿಶಾನ ಅವರ ತಾಯಿ ಮನೆಯಾದ ಕುಂಬ್ರದ…