tamanvi
ಅಪಘಾತ

ಕಾಪು: ಖ್ಯಾತ ಡಿಜೆ, ನಿರೂಪಕ ಮರ್ವಿನ್ ಅಪಘಾತದಲ್ಲಿ ಮೃತ್ಯು!! 

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಕಾಪು : ನಾಯಿಯನ್ನು ತಪ್ಪಿಸಲು ಹೋಗಿ ಬೆಲ್ಮಣ್ ನಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಪಲ್ಟಿಯಾದ ಘಟನೆ ಮೂಳೂರಿನ ಹಳ್ಳಿಮನೆ ಹೋಟೆಲಿನ ಮುಂಭಾಗದಲ್ಲಿ ಇಂದು  (ಆ.23) ಶನಿವಾರ ಮುಂಜಾನೆ ನಡೆದಿದೆ.

ಗಂಭೀರ ಗಾಯಗೊಂಡ ಖ್ಯಾತ ಡಿಜೆ ಮತ್ತು ನಿರೂಪಕ ಮರ್ವಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಬೆಲ್ಮಣ್ ನ ಪ್ರಜ್ವಲ್, ಕಾರ್ಕಳದ ಪ್ರಸಾದ್, ವಿಶ್ಲೇಷ್ ಗಾಯಗೊಂಡಿದ್ದಾರೆ.

ಮೃತ ಮರ್ವಿನ್ ಖ್ಯಾತ ಕಾರ್ಯಕ್ರಮ ನಿರೂಪಕನಾಗಿದ್ದು, ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು.

ಗಾಯಾಳುಗಳನ್ನು ಮೂಳೂರು ಹಾಗೂ ಉಚ್ಚಿಲದ ಆ್ಯಂಬುಲೆನ್ಸ್ ಸಹಾಯದಿಂದ ಜಲಾಲುದ್ದೀನ್ ಯಾನೆ ಜಲ್ಲು, ಹಮೀದ್ ಉಚ್ಚಿಲ, ಕೆ.ಎಂ.ಸಿರಾಜ್, ಅನ್ವರ್ ಕೋಟೇಶ್ವರ ಹಾಗೂ ಪೋಲಿಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರಿನಲ್ಲಿ ಸ್ಕೂಟರ್ ಢಿಕ್ಕಿ: ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕೊಯಿಲ ಸೀತಾರಾಮ ಗೌಡ ಮೃತ್ಯು!!

ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವರು ಬುಧವಾರ ಮಂಗಳೂರಿನ ಕೆಪಿಟಿ ಬಳಿ ಸಂಭವಿಸಿದ…