Gl
ಕರಾವಳಿಸ್ಥಳೀಯ

ದಕ್ಷಿಣ ಕನ್ನಡ ನೃತ್ಯ ಕಲಾವಿದರ ಒಕ್ಕೂಟ ಉದ್ಘಾಟನಾ ಸಮಾರಂಭ

ನೃತ್ಯ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ 2024- 2025ರ ಉದ್ಘಾಟನಾ ಸಮಾರಂಭ ಕಲ್ಲಡ್ಕದಲ್ಲಿ ಜರಗಿತು

ಈ ಸುದ್ದಿಯನ್ನು ಶೇರ್ ಮಾಡಿ

ನೃತ್ಯ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ 2024- 2025ರ ಉದ್ಘಾಟನಾ ಸಮಾರಂಭ ಕಲ್ಲಡ್ಕದಲ್ಲಿ ಜರಗಿತು

rachana_rai
Pashupathi
akshaya college

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಯಕ್ಷಬೊಳ್ಳಿ ದಿನೇಶ್ ರೈ ಕಡಬ ಹಾಗೂ ಉದ್ಯಮಿ ಕಿಶೋರ್ ಕುಮಾರ್ ಕಟ್ಟೆಮಾರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ದಿನೇಶ್ ರೈ ಕಡಬ ಮಾತನಾಡಿ, ಎಲ್ಲಾ ಕಲಾವಿದರಿಗೆ ಐಡಿಯ ಸೌಲಭ್ಯ ಸರಕಾರದಿಂದ ಇದೆ. ನೃತ್ಯ ಕಲಾವಿದರಿಗೆ ಇದರ ಸೌಲಭ್ಯ ಸಿಗುವಂತಗಾಲಿ ಎಂದರು. ಕಿಶೋರ್ ಕಟ್ಟೆಮಾರು ಶುಭ ಹಾರೈಸಿದರು.

pashupathi

ಮುಖ್ಯ ಅತಿಥಿ ಅನುದನಿತಾ ಹಿರಿಯ ಪ್ರಾಥಮಿಕ ಶಾಲೆ ಮಾಯಿದೆ ದೆವುಸ್‌ ಮುಖ್ಯೋಪಾಧ್ಯಾಯಿನಿ ಜಾನೆಟ್ ಡಿ ‘ಸೋಜ ನೃತ್ಯ ಕಲಾವಿದರ ಒಕ್ಕೂಟ ನಮ್ಮ ಶಾಲೆಯಿಂದಲೆ ಆರಂಭಗೊಂಡಿದೆ ಎಂದು ಹೇಳೋದಕ್ಕೆ ನಮಗೆ ಹೆಮ್ಮೆಯ ವಿಷಯ.ಈ ಒಕ್ಕೂಟ ಎಲ್ಲ ಕಲಾವಿದರಿಗೂ ತಲುಪುವಂತಾಗಾಲಿ ಎಂದರು.

ಮತ್ತೊರ್ವ ಅಥಿತಿ ಹಾಗೂ ನೃತ್ಯ ಕಲಾವಿದ ಗೌರವಧ್ಯಕ್ಷ ರಾಜೇಶ್ ವಿಟ್ಲ ಒಕ್ಕೂಟಕ್ಕೆ ಎಲ್ಲಾ ಕಲಾವಿದರು ಒಗ್ಗಟ್ಟಾಗಿ ಕೈ ಜೋಡಿಸಬೇಕು ಎಂದರು.ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು ಇದೊಂದು ಉತ್ತಮವಾದ ನೃತ್ಯ ಕಲಾವಿದರ ಒಕ್ಕೂಟ ಇದರ ಸದುಪಯೋಗ ಪಡೆದುಕೊಳ್ಳಿ ಹಾಗೂ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.

ಚಲನಚಿತ್ರ ನಟ ಮನೀಶ್ ಶೆಟ್ಟಿ ಉಪ್ಪಿರ ಮಾತನಾಡಿ ನಾನು ಮೊದಲಾಗಿ ಬೊಂಬೆ ಕಲಾವಿದನಾಗಿ ದುಡಿದಿದ್ದೇನೆ ಅದರ ಕಷ್ಟ ಏನೂ ಎಂದು ಅರಿತವ. ಈ ಒಕ್ಕೂಟದಲ್ಲಿ ಗೊಂಬೆ ಕಲಾವಿದರಿಗೂ ಅವಕಾಶ ಕೊಟ್ಟಿದ್ದಾರೆ ಖಂಡಿತ ಯಶಸ್ವಿಯ ತುತ್ತತುದಿ ತಲುಪುತ್ತದೆ ಎಂದರು.

ಮೇಘ ಕಲಾ ಆರ್ಟ್ಸ್ ಡಾನ್ಸ್ ಸ್ಟುಡಿಯೋ ಇದರ ಶಾರದಾ ದಾಮೋದರ ಅರತ್ತೋಳಿ ಮಾತನಾಡಿ ನೃತ್ಯ ಕಲಾವಿದರ ಒಕ್ಕೂಟ ಮತ್ತು ಗೊಂಬೆ ಕಲಾವಿದರಿಗೆ ಕಲಾವಿದರಾಗಿ ಅವರು ದುಡಿದು ಮನೆಗೆ ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಕಲಾವಿದರ ಕಷ್ಟ ಸರ್ಕಾರಕ್ಕೆ ತಿಳಿದು ಪರಿಹಾರ ದೊರಕುವಂತಾಗಲಿ ಎಂದರು.

ಜಿ ವೀ ರೋಕಾರ್ಸ್‌ ಡಾನ್ಸ್ ಅಕಾಡೆಮಿ ಕಡೇಶಿವಾಲಯ ನೃತ್ಯ ನಿರ್ದೇಶಕ, ಒಕ್ಕೂಟದ ಅಧ್ಯಕ್ಷ ಚಂದ್ರೋದಯ ಕುಲಾಲ್ ಎಲ್ಲರ ಸಹಕಾರದಿಂದ ಈ ಒಂದು ಒಕ್ಕೂಟ ನಿರ್ಮಾಣ ಸಾಧ್ಯವಾಯಿತು ಎಂದರು. ಮಯೂರ ಕಲಾ ಸಂಸ್ಥೆ ನೃತ್ಯ ನಿರ್ದೇಶಕ ಮೋಹನ್ ಅಲಂಕಾರು ಸ್ವಾಗತಿಸಿ,ಚಿಂತಾಮಣಿ ಡಾನ್ಸ್ ಅಕಾಡೆಮಿ ಕಲ್ಲಡ್ಕ, ಕಡೇಶಿವಾಲಯ ನೃತ್ಯ ನಿರ್ದೇಶಕ ಮಹೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

1 of 123