tamanvi
ಕರಾವಳಿಸ್ಥಳೀಯ

ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ! ಆಸ್ಪತ್ರೆ ಒಳಾಂಗಣಕ್ಕೆ ಆ್ಯಂಬುಲೆನ್ಸ್ ರೀತಿ ನುಗ್ಗಿದ ಬಸ್: ಚಾಲಕ – ನಿರ್ವಾಹಕರಿಗೆ ಶ್ಲಾಘನೆಯ ಮಹಾಪೂರ

D_shiva_bhat
ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ ದೊರಕಿದ ತಕ್ಷಣ, ಬಸ್ ನೇರವಾಗಿ ಆಸ್ಪತ್ರೆ ಒಳಾಂಗಣಕ್ಕೆ ನುಗ್ಗಿ ಚಿಕಿತ್ಸೆ ಕೊಡಿಸಿದ ಘಟನೆ ಮಂಗಳೂರಿನಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ ದೊರಕಿದ ತಕ್ಷಣ, ಬಸ್ ನೇರವಾಗಿ ಆಸ್ಪತ್ರೆ ಒಳಾಂಗಣಕ್ಕೆ ನುಗ್ಗಿ ಚಿಕಿತ್ಸೆ ಕೊಡಿಸಿದ ಘಟನೆ ಮಂಗಳೂರಿನಲ್ಲಿ ನಡೆಯಿತು.

maithri
13 F ರೂಟಿನ ಕೃಷ್ಣ ಪ್ರಸಾದ್ ಬಸ್ ಕೂಳೂರು ಮಾರ್ಗವಾಗಿ ಸಂಚರಿಸುತ್ತಿತ್ತು. ಇದ್ದಕ್ಕಿದ್ದಂತೆ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕಿನ ಸೂಚನೆ ಸಿಕ್ಕಿತು.
ತಕ್ಷಣವೇ ಬಸ್ ಆ್ಯಂಬುಲೆನ್ಸ್ ಅಗಿ ಬದಲಾಯಿತು. ಸುಮಾರು ಆರು ಕಿಲೋ ಮೀಟರ್ ದೂರವನ್ನು ಕೇವಲ ಆರು ನಿಮಿಷದಲ್ಲಿ ಬಸ್ ಕ್ರಮಿಸಿತು. ನೇರವಾಗಿ ಕಂಕನಾಡಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿದ ಬಸ್, ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ತುರ್ತು ಸಂದರ್ಭ ಮತ್ತೊಂದು ಆಲೋಚಿಸದೇ, ಆಸ್ಪತ್ರೆಯ ಅಪ್ಪಣೆಗೆ ಕಾಯದೇ ಮುಂದುವರಿದ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದ‌ರ್ ಹಾಗೂ ಮಹೇಶ್ ಪೂಜಾರಿ, ಸುರೇಶ್ ಅವರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

1 of 174