tamanvi
ಸ್ಥಳೀಯ

ಕಡಬ: ಶಶಿಕಲಾ ಕೆರೆಗೆ ಬಿದ್ದು ಮೃತ್ಯು!

D_shiva_bhat
ಮುಂಜಾನೆ ವೇಳೆ ಹುಲ್ಲು ತರಲೆಂದು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಪೆರಾಬೆ ಗ್ರಾಮದಿಂದ ವರದಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮುಂಜಾನೆ ವೇಳೆ ಹುಲ್ಲು ತರಲೆಂದು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಪೆರಾಬೆ ಗ್ರಾಮದಿಂದ ವರದಿಯಾಗಿದೆ.

ಆಲಂಕಾರಿನ ಪೆರಾಬೆ ಗ್ರಾಮದ ಬಲಂಪೋಡಿಯ ಉಮೇಶ್ ಎಂಬವರ ಪತ್ನಿ ಶಶಿಕಲಾ ಎಂಬವರು ಮೃತಪಟ್ಟ ಮಹಿಳೆ.

ಜುಲೈ 8 ರ ಮುಂಜಾನೆ ಪತಿ –ಪತ್ನಿ ಇಬ್ಬರೂ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡಿ ತೆರಳಿದ್ದು ಬಳಿಕ ಪತ್ನಿಯು ದನಗಳಿಗೆ ಹುಲ್ಲು ತರಲು ತಮ್ಮ ಕೃಷಿ ತೋಟದ ಕಡೆಗೆ ಹೋಗಿದ್ದರು.

ದನಗಳನ್ನು ಸ್ವಚ್ಚ ಮಾಡಿ ಮನೆಯಲ್ಲಿ ಇದ್ದು ಸುಮಾರು 1 ಗಂಟೆಯಾದರು ಪತ್ನಿ ಮನೆಗೆ ಬಾರದೇ ಇರುವುದರಿಂದ ತಮ್ಮ ತೋಟದ ಬಳಿ ಹೋಗಿ ನೋಡಿದಾಗ ಪತ್ನಿಯು ಕಾಣದೇ ಇದ್ದು ನೆರೆಕೆರೆಯವರ ಜೊತೆ ಸೇರಿ ಹುಡುಕಾಟ ಮಾಡಿದಾಗ ಕೆರೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ಕೆರೆಯಿಂದ ಮೇಲಕ್ಕೆ ಎತ್ತಿದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

1 of 132