ಸ್ಥಳೀಯ

ಕಡಬ: ಶಶಿಕಲಾ ಕೆರೆಗೆ ಬಿದ್ದು ಮೃತ್ಯು!

D_shiva_bhat
ಮುಂಜಾನೆ ವೇಳೆ ಹುಲ್ಲು ತರಲೆಂದು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಪೆರಾಬೆ ಗ್ರಾಮದಿಂದ ವರದಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮುಂಜಾನೆ ವೇಳೆ ಹುಲ್ಲು ತರಲೆಂದು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಪೆರಾಬೆ ಗ್ರಾಮದಿಂದ ವರದಿಯಾಗಿದೆ.

maithri

ಆಲಂಕಾರಿನ ಪೆರಾಬೆ ಗ್ರಾಮದ ಬಲಂಪೋಡಿಯ ಉಮೇಶ್ ಎಂಬವರ ಪತ್ನಿ ಶಶಿಕಲಾ ಎಂಬವರು ಮೃತಪಟ್ಟ ಮಹಿಳೆ.

ಜುಲೈ 8 ರ ಮುಂಜಾನೆ ಪತಿ –ಪತ್ನಿ ಇಬ್ಬರೂ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡಿ ತೆರಳಿದ್ದು ಬಳಿಕ ಪತ್ನಿಯು ದನಗಳಿಗೆ ಹುಲ್ಲು ತರಲು ತಮ್ಮ ಕೃಷಿ ತೋಟದ ಕಡೆಗೆ ಹೋಗಿದ್ದರು.

ದನಗಳನ್ನು ಸ್ವಚ್ಚ ಮಾಡಿ ಮನೆಯಲ್ಲಿ ಇದ್ದು ಸುಮಾರು 1 ಗಂಟೆಯಾದರು ಪತ್ನಿ ಮನೆಗೆ ಬಾರದೇ ಇರುವುದರಿಂದ ತಮ್ಮ ತೋಟದ ಬಳಿ ಹೋಗಿ ನೋಡಿದಾಗ ಪತ್ನಿಯು ಕಾಣದೇ ಇದ್ದು ನೆರೆಕೆರೆಯವರ ಜೊತೆ ಸೇರಿ ಹುಡುಕಾಟ ಮಾಡಿದಾಗ ಕೆರೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ಕೆರೆಯಿಂದ ಮೇಲಕ್ಕೆ ಎತ್ತಿದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಮಹಿಳಾ ಪೊಲೀಸ್ ಠಾಣಾ ಹಿಂಭಾಗದಿಂದ ಹಿಂದೂ ರುದ್ರಭೂಮಿವರೆಗೆ ಕಾಂಕ್ರೀಟ್ ರಸ್ತೆ: ಶಾಸಕರಿಂದ ಪರಿಶೀಲನೆ

ಪುತ್ತೂರು: ಒಳಚರಂಡಿ ವ್ಯವಸ್ಥೆ ಇಲ್ಲದೆ ನಗರದ ಅಭಿವೃದ್ಧಿ ಅಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ…

1 of 125