Gl harusha
ದೇಶಸ್ಥಳೀಯ

ಮೊದಲ ರಾತ್ರಿಗೆ First night ಬೆಚ್ಚಿ ಬಿದ್ದನೇ ವರ: ಹಾಲು ಹಿಡಿದು ವಧು ಬಂದಾಗ, ನೇಣು ಬಿಗಿದು ನೇತಾಡುತ್ತಿದ್ದ ಪತಿ!!

ಮೊದಲ ರಾತ್ರಿಯ ಕನಸು ಯಾರಿಗಿರಲ್ಲ ಹೇಳಿ? ಪ್ರತಿಯೊಬ್ಬರು ಕನಸು ಕಂಡವರೇ. ಹಾಗೆಂದು ಇದನ್ನು ಒತ್ತಡ ಎಂದು ಭಾವಿಸಿದವರು ಯಾರೂ ಇರಲಾರರು. ಇಂತಹದ್ದೊಂದು ಘಟನೆಗೆ ಉತ್ತರ ಪ್ರದೇಶದ uttar pradesh ಇಟಾವಾ ಜಿಲ್ಲೆ ಸಾಕ್ಷಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮೊದಲ ರಾತ್ರಿಯ first night ಕನಸು ಯಾರಿಗಿರಲ್ಲ ಹೇಳಿ? ಪ್ರತಿಯೊಬ್ಬರು ಕನಸು ಕಂಡವರೇ. ಹಾಗೆಂದು ಇದನ್ನು ಒತ್ತಡ ಎಂದು ಭಾವಿಸಿದವರು ಯಾರೂ ಇರಲಾರರು. ಇಂತಹದ್ದೊಂದು ಘಟನೆಗೆ ಉತ್ತರ ಪ್ರದೇಶದ uttar pradesh ಇಟಾವಾ ಜಿಲ್ಲೆ ಸಾಕ್ಷಿಯಾಗಿದೆ.

srk ladders
Pashupathi
Muliya

ಮದುವೆಯಾಗಿತ್ತು. ಇನ್ನೇನು ಪ್ರಥಮ ರಾತ್ರಿ. first night ಶೃಂಗಾರ, ಸಂಭ್ರಮ ಮುಗಿಲುಮುಟ್ಟಿತ್ತು. ಇನ್ನೇನು ಹಾಲು ಹೀರಿ – ಮಧುವನದ ಸುಖವನ್ನು ಜೋಡಿಯಾಗಿ ಆಸ್ವಾದಿಸಬೇಕು ಎನ್ನುವಷ್ಟರಲ್ಲಿ ನಡೆಯಬಾರದ್ದು ನಡೆದು ಹೋಗಿತ್ತು.

ಕಂಗಳಲ್ಲಿ ನೂರಾರು ಕನಸು ಹೊತ್ತ ವಧು, ಕೈಯಲ್ಲಿ ಹಾಲು ಹಿಡಿದು ವರನಿದ್ದ ಕೋಣೆಗೆ ಪ್ರವೇಶಿಸಿದ್ದಳು. ಅಷ್ಟರಲ್ಲಿ ಆಕೆ ಕಂಡಿದ್ದೇನು?

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪತಿ.

ಉತ್ತರ ಪ್ರದೇಶ ರಾಜ್ಯದ ಇಟಾವಾ ಜಿಲ್ಲೆಯ ರತನ್ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಭ್ರಮದ ಮದುವೆ ತೆರೆ ಎಳೆದದ್ದು ಹೀಗೆ.. ಕುಟುಂಬದ ಗೋಳಾಟ, ಆಕ್ರಂದನ ಮೇರೆ ಮೀರಿದೆ. ವಧುವಿಗೋ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಸತ್ಯೇಂದ್ರ. ಇನ್ನು 24ರ ಹರೆಯ. ವಧುವಿನ ಹೆಸರು ವಿನಿತಾ ಕುಮಾರಿ.

ಅದ್ದೂರಿಯಾಗಿ ಮದುವೆ ನಡೆದು, ದಿಬ್ಬಣ ಮೆರವಣಿಗೆಯೊಂದಿಗೆ ವರನ ಗ್ರಾಮಕ್ಕೆ ಮರಳಿದೆ. ವಧುವಿನ ಸ್ವಾಗತವೂ ಭರ್ಜರಿಯಾಗಿಯೇ ನಡೆದಿತ್ತು. ನಂತರ ನಡೆದ ಹೃದಯ ವಿದ್ರಾವಕ ಘಟನೆ ಮಾತ್ರ ಆಘಾತಕಾರಿ.

ಉಸ್ರಾಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತ್ಯೆಂದ್ರ ಆತ್ಮಹತ್ಯೆ ವಿವರ ಬಹಿರಂಗವಾಗಿಲ್ಲ.

ಮೇಲ್ನೋಟಕ್ಕೆ ಮೊದಲ ರಾತ್ರಿಯ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಸ್ಥಳೀಯರು ಶಂಕಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts