ಪುತ್ತೂರು: ಬೀರಮಲೆ ಪ್ರಜ್ಞಾ ಆಶ್ರಮದಲ್ಲಿ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಆಶ್ರಮದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯದ ಸಂದೇಶವನ್ನು ತಿಳಿಸಲಾಯಿತು. ಬಳಿಕ ಸಿಹಿತಿಂಡಿ ವಿತರಿಸಲಾಯಿತು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಧ್ವಜಾರೋಹಣ ನೆರವೇರಿಸಿದರು. ಐಪಿಪಿ ವಿನೀತ್, ಕೋಶಾಧಿಕಾರಿ ನವೀನ್ಚಂದ್ರ, ಡಿ.ಆರ್.ಎಸ್. ನವೀನ್ ರೈ ಬನ್ನೂರು, ಝಡ್.ಆರ್.ಆರ್. ಎಡ್ವರ್ಡ್ ಡಿಸೋಜಾ, ಉಪಾಧ್ಯಕ್ಷ ಕಿಶೋರ್, ಸಾರ್ಜಂಟ್ ಅಟ್ ಆರ್ಮ್ಸ್ ಆದಿತ್ಯ ರಾವ್, ಪ್ರಜ್ಞಾ ಆಶ್ರಮದ ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.


































