ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಪದಸ್ವೀಕಾರ ಸಮಾರಂಭ ಮಂಗಳವಾರ ಸುದಾನ ವಸತಿಯುತ ಶಾಲಾ ಆವರಣದಲ್ಲಿರುವ ಎಡ್ವರ್ಡ್ ಹಾಲಿನಲ್ಲಿ ನಡೆಯಿತು.
ಪದಪ್ರದಾನ ನೆರವೇರಿಸಿ ಮಾತನಾಡಿದ 3180 ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಡಾ. ಭಾಸ್ಕರ್ ಎಸ್., ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದೇ ರೋಟರಿ. ನಮಗೆ ಸಿಕ್ಕಿದ ಜವಾಬ್ದಾರಿಯನ್ನು ಉತ್ತಮ ಉದ್ದೇಶಕ್ಕಾಗಿ ನಿಭಾಯಿಸುವುದರಿಂದ, ರೋಟರಿಯ ಉದ್ದೇಶ ಈಡೇರುತ್ತದೆ ಎಂದರು.
ರೋಟರಿ ಎಂದರೆ ವೈವಿಧ್ಯ. ಎಲ್ಲಾ ವೃತ್ತಿಯವರು ಇಲ್ಲಿರುತ್ತಾರೆ. ಇಲ್ಲಿ ಭೇದ ಭಾವವೂ ಇಲ್ಲ. ಎಲ್ಲರೂ ಒಂದೇ. ರೋಟರಿಗೆ ಸೇರ್ಪಡೆಯಾದ ಬಳಿಕ ಪ್ರತಿಯೊಬ್ಬರೂ ಮೌಲ್ಯಯುತ ಸದಸ್ಯರೇ. ಹಣ ಕೊಟ್ಟವನಿಗೆ ಹೆಚ್ಚು ಬೆಲೆ ಎಂದೇನಿಲ್ಲ. ನಾವು ನೀಡುವ ಹಣ ವಿಶ್ವದ ಉತ್ತಮ ಕಾರ್ಯಕ್ಕೆ ವಿನಿಯೋಗ ಆಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಹಾಗೆಯೇ ಇದು ಸದಸ್ಯತ್ವಕ್ಕೆ ಮಾತ್ರವಲ್ಲ. ನಾಯಕತ್ವ ಗುಣ ಬೆಳೆಸಿಕೊಳ್ಳಲು ಬಳಸಿಕೊಳ್ಳಬೇಕು ಎಂದರು.
ಚಂದ್ರಹಾಸ ರೈ ಅವರು ಜೇಸಿಐ ತರಬೇತುದಾರರೂ ಹೌದು. ಆದ್ದರಿಂದ ಕ್ಲಬ್ಬನ್ನು ಉಳಿಸುವುದು, ಬೆಳೆಸುವುದು ಅವರಿಗೆ ಗೊತ್ತಿದೆ. ಇಂದಿನ ಕಾರ್ಯಕ್ರಮ ಇಡೀಯ ವರ್ಷದ ದಿಕ್ಸೂಚಿಯಾಗಿ ಮೂಡಿಬಂದಿದೆ ಎಂದ ಅವರು ರೋಟರಿ ತಂಡಕ್ಕೆ ಶುಭಹಾರೈಸಿದರು.
ಪದ ಸ್ವೀಕಾರ ಮಾಡಿ ಮಾತನಾಡಿದ ಚಂದ್ರಹಾಸ ರೈ, ರೋಟರಿ ವರ್ಷವನ್ನು ಆನಂದಿಸಬೇಕು ಎನ್ನುವ ಆಶಯ ನನ್ನದು. ಇದಕ್ಕೆ ಪೂರಕವಾಗಿದೆ ಇಂದಿನ ಪದಸ್ವೀಕಾರ ಸಮಾರಂಭ ಆಯೋಜನೆಗೊಂಡಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಂತೆಯೇ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಅವರಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದ್ದರಿಂದ ತಾನು ಯಾವುದೇ ವಿಷಯಕ್ಕೂ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಬಂದಿಲ್ಲ. ಈ ಅಚ್ಚುಕಟ್ಟಿನ ಕಾರ್ಯಕ್ರಮಕ್ಕೆ ಕ್ಲಬ್ ಪದಾಧಿಕಾರಿ , ಸದಸ್ಯರೇ ಕಾರಣರು. ಇಡೀ ರೋಟರಿ ವರ್ಷವನ್ನು ಇದೇ ರೀತಿಯ ಒಗ್ಗಟ್ಟಿನಿಂದ ನಡೆಸಿಕೊಂಡು ಬರುತ್ತೇವೆ ಎಂದರು.
ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿದ ಝೋನ್ 5ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ಪಿ. ರೋಟರಿಯ ಸೇವಾ ಭಾವನೆಯನ್ನು ಸದಸ್ಯರಿಗೆ ತಿಳಿಹೇಳಿ ಹೊಸಬರನ್ನು ಸೇರಿಸಿಕೊಳ್ಳಿ ಎಂದ ಅವರು, ಚಂದ್ರಹಾಸ ರೈ ಅವರು ಕಂಡ ಕನಸು ನನಸಾಗಲು ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.
ಝೋನ್ 5ರ ಝೋನಲ್ ಲೆಫ್ಟಿನೆಂಟ್ ಉಮಾನಾಥ್ ಪಿ.ಬಿ., ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಸುಭಾಶ್ ರೈ ಬಿ. ಶುಭಹಾರೈಸಿದರು.
ಸನತ್ ರೈ, ದಿವಾಕರ್ ರೈ, ಡಾ. ರಾಜೇಶ್ ಬೆಜ್ಜಂಗಳ ಅವರು ಕ್ಲಬ್ ಸೇವಾ ಚಟುವಟಿಕೆಗಳನ್ನು ನಿರ್ವಹಿಸಿದರು. ನಿರ್ಗಮಿತ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಅವರನ್ನು ಸನ್ಮಾನಿಸಲಾಯಿತು.
ದೀಪಿಕಾ ವಸಂತ್ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಮುಕ್ವೆ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ವಸಂತ್ ಶಂಕರ್ ವರದಿ ವಾಚಿಸಿದರು. ಪದಪ್ರದಾನ ಅಧಿಕಾರಿಯವರ ಪರಿಚಯವನ್ನು ಡಾ. ರಾಜೇಶ್ ಬೆಜ್ಜಂಗಳ ಮುಖ್ಯ ಅತಿಥಿಗಳ ಪರಿಚಯವನ್ನು ಭಾರತಿ ಎಸ್. ಹಾಗೂ ಶಿವರಾಮ ಎಂ.ಎಸ್. ಸಭೆಯ ಮುಂದಿಟ್ಟರು. ಕ್ಲಬ್ ಗೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಪದ್ಮನಾಭ ಶೆಟ್ಟಿ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಜಯಪ್ರಕಾಶ್ ಎ.ಎಲ್. ವಂದಿಸಿದರು. ಡಾ. ರಾಮಚಂದ್ರ ಹಾಗೂ ಭಾರತಿ ಎಸ್. ರೈ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾಗಿ ಪದಸ್ವೀಕಾರ ಮಾಡಿದ ಚಂದ್ರಹಾಸ ರೈ | ರೋಟರಿಯ ಉದ್ದೇಶ ಈಡೇರಲು ಕಾರ್ಯತತ್ಪರರಾಗಿ: ಡಾ. ಭಾಸ್ಕರ್ ಎಸ್.
What's your reaction?
- 494c
- 394cc
- 3ai technology
- 3artificial intelegence
- 3avg
- 3bt ranjan
- 3co-operative
- 3crime news
- 3death news
- 3gl
- 2google for education
- 2independence
- 2jewellers
- 2karnataka state
- 2lokayuktha
- 2lokayuktha raid
- 2manipal
- 2minister krishna bairegowda
- 2mla ashok rai
- 1nidana news
- 1ptr tahasildar
- 1puttur
- 1puttur news
- 1puttur tahasildar
- 1revenue
- 1revenue department
- 1revenue minister
- 1society
- 0sowmya
- 0tahasildar
- 0tahasildar absconded
- 0udupi
Related Posts
ಸಮೀಕ್ಷೆಗೆ ಮಾಹಿತಿ ನೀಡದವರಿಗೆ ಸರಕಾರಿ ಸೌಲಭ್ಯ ಬೇಡ: ಮಹಮ್ಮದ್ ಆಲಿ
ಪುತ್ತೂರು: ಬಿಜೆಪಿಯ ಒತ್ತಾಸೆಗೆ ಬೇಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ…
ನಕಲಿ ಹಿಂದುತ್ವದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ | `ಅಂಬೇಡ್ಕರ್ ವಾದದ ಆಚರಣೆ’ ಪುಸ್ತಕ ಬಿಡುಗಡೆ, ಲೇಖಕರೊಂದಿಗೆ ಸಂವಾದದಲ್ಲಿ ಪ್ರೊ. ಲಕ್ಷ್ಮೀಪತಿ
ಪುತ್ತೂರು: ಬುದ್ಧಿವಂತರ ಜಿಲ್ಲೆಯ ಜನರನ್ನು ದಡ್ಡರನ್ನಾಗಿಸುವ ಕೆಲಸ ನಡೆಯುತ್ತಿದೆ. ದೇಶಾಭಿಮಾನದ…
ಕೃಷ್ಣ – ಕುಚೇಲನಂತಿರಲಿ ಬ್ಯಾಂಕ್ – ಗ್ರಾಹಕನ ಸಂಬಂಧ | ಎಸ್.ಕೆ.ಜಿ.ಐ. ಸೊಸೈಟಿಯ ಪುತ್ತೂರು ಶಾಖಾ ಸದಸ್ಯ ಗ್ರಾಹಕರ ಸಮಾವೇಶದಲ್ಲಿ ಚಿದಾನಂದ ಬೈಲಾಡಿ
ಪುತ್ತೂರು: ಎಸ್.ಕೆ. ಗೋಲ್ಡ್'ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ…
ಲವ್, ಸೆಕ್ಸ್ ಪ್ರಕರಣ: ಕೈಸೇರಿದ ಡಿ.ಎನ್.ಎ. ಟೆಸ್ಟ್!! ಮಗುವಿನ ಅಪ್ಪ ಯಾರೆಂಬ ಸತ್ಯ ಬಯಲಿಗೆ!!
ಪುತ್ತೂರು: ಡಿ.ಎನ್.ಎ. ಟೆಸ್ಟ್ ಕೈಸೇರಿದೆ. ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಉತ್ತರ…
ಮಾದಕ ವ್ಯಸನದ ಕುರಿತು ಗ್ರಾಮಗಳಲ್ಲಿ ಅರಿವು ಮೂಡಿಸಿ | ಯುವಕ ಮಂಡಲಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರ ಶ್ರೀಕಾಂತ್ ಬಿರಾವು ಕರೆ
ಕೆದಂಬಾಡಿ: ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗಿ ಆರೋಗ್ಯ ಸಮಸ್ಯೆ ತರಿಸಿಕೊಳ್ಳುವುದಕ್ಕಿಂತ…
ಸೆ. 27: ಪುತ್ತೂರಿನಲ್ಲಿ ಮೊದಲ ಮಿಂಚು ಬಂಧಕ ಲೋಕಾರ್ಪಣೆ |ಜನತೆಯ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕ
ಪುತ್ತೂರು: ಇನ್ನು ಮಳೆಗಾಲ ಆರಂಭ ಮತ್ತು ಕೊನೇ ದಿನಗಳಲ್ಲಿ ಬರುವ ಸಿಡಿಲಿಗೆ ಪುತ್ತೂರು ಬಿರುಮಲೆ…
ಅ. 15: ಪುತ್ತೂರಿನಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ, ಬೃಹತ್ ಜನಜಾಗೃತಿ ಸಮಾವೇಶ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ…
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಕಿಂಡಿ ಅಣೆಕಟ್ಟಿಗೆ 5.70 ಕೋಟಿ ರೂ ಅನುದಾನ ಮಂಜೂರು
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕು…
ಮುಖ್ಯ ನ್ಯಾಯಧೀಶರಿಗೆ ಶೂ ಎಸೆದ ಪ್ರಕರಣ ಖಂಡನೀಯ: ಕೃಷ್ಣಪ್ಪ ಸುಣ್ಣಾಜೆ
ಪುತ್ತೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ. ಆರ್. ಗವಾಯಿ ಮೇಲೆ ವಕೀಲ ರಾಜೇಶ್ ಕಿಶೋರ್…
ಜಿ.ಎಲ್. ಆಚಾರ್ಯ ಶತಮಾನೋತ್ಸವ – ಆಚಾರ್ಯ ಕವಿಗೋಷ್ಠಿ | ಶಿಕ್ಷಕರು ಸಾಹಿತ್ಯದ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು: ಪ್ರೊ. ವಿ.ಬಿ. ಅರ್ತಿಕಜೆ
ಪುತ್ತೂರು: ಶಿಕ್ಷಕರಲ್ಲಿ ಕನ್ನಡ ಸಾಹಿತ್ಯದ ಬಗೆಗಿನ ಓದುವಿಕೆ ನಿರಂತರವಾಗಿರಬೇಕು. ಮಾತನಾಡುವಾಗ…