ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಪದಸ್ವೀಕಾರ ಸಮಾರಂಭ ಮಂಗಳವಾರ ಸುದಾನ ವಸತಿಯುತ ಶಾಲಾ ಆವರಣದಲ್ಲಿರುವ ಎಡ್ವರ್ಡ್ ಹಾಲಿನಲ್ಲಿ ನಡೆಯಿತು.
ಪದಪ್ರದಾನ ನೆರವೇರಿಸಿ ಮಾತನಾಡಿದ 3180 ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಡಾ. ಭಾಸ್ಕರ್ ಎಸ್., ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದೇ ರೋಟರಿ. ನಮಗೆ ಸಿಕ್ಕಿದ ಜವಾಬ್ದಾರಿಯನ್ನು ಉತ್ತಮ ಉದ್ದೇಶಕ್ಕಾಗಿ ನಿಭಾಯಿಸುವುದರಿಂದ, ರೋಟರಿಯ ಉದ್ದೇಶ ಈಡೇರುತ್ತದೆ ಎಂದರು.
ರೋಟರಿ ಎಂದರೆ ವೈವಿಧ್ಯ. ಎಲ್ಲಾ ವೃತ್ತಿಯವರು ಇಲ್ಲಿರುತ್ತಾರೆ. ಇಲ್ಲಿ ಭೇದ ಭಾವವೂ ಇಲ್ಲ. ಎಲ್ಲರೂ ಒಂದೇ. ರೋಟರಿಗೆ ಸೇರ್ಪಡೆಯಾದ ಬಳಿಕ ಪ್ರತಿಯೊಬ್ಬರೂ ಮೌಲ್ಯಯುತ ಸದಸ್ಯರೇ. ಹಣ ಕೊಟ್ಟವನಿಗೆ ಹೆಚ್ಚು ಬೆಲೆ ಎಂದೇನಿಲ್ಲ. ನಾವು ನೀಡುವ ಹಣ ವಿಶ್ವದ ಉತ್ತಮ ಕಾರ್ಯಕ್ಕೆ ವಿನಿಯೋಗ ಆಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಹಾಗೆಯೇ ಇದು ಸದಸ್ಯತ್ವಕ್ಕೆ ಮಾತ್ರವಲ್ಲ. ನಾಯಕತ್ವ ಗುಣ ಬೆಳೆಸಿಕೊಳ್ಳಲು ಬಳಸಿಕೊಳ್ಳಬೇಕು ಎಂದರು.
ಚಂದ್ರಹಾಸ ರೈ ಅವರು ಜೇಸಿಐ ತರಬೇತುದಾರರೂ ಹೌದು. ಆದ್ದರಿಂದ ಕ್ಲಬ್ಬನ್ನು ಉಳಿಸುವುದು, ಬೆಳೆಸುವುದು ಅವರಿಗೆ ಗೊತ್ತಿದೆ. ಇಂದಿನ ಕಾರ್ಯಕ್ರಮ ಇಡೀಯ ವರ್ಷದ ದಿಕ್ಸೂಚಿಯಾಗಿ ಮೂಡಿಬಂದಿದೆ ಎಂದ ಅವರು ರೋಟರಿ ತಂಡಕ್ಕೆ ಶುಭಹಾರೈಸಿದರು.
ಪದ ಸ್ವೀಕಾರ ಮಾಡಿ ಮಾತನಾಡಿದ ಚಂದ್ರಹಾಸ ರೈ, ರೋಟರಿ ವರ್ಷವನ್ನು ಆನಂದಿಸಬೇಕು ಎನ್ನುವ ಆಶಯ ನನ್ನದು. ಇದಕ್ಕೆ ಪೂರಕವಾಗಿದೆ ಇಂದಿನ ಪದಸ್ವೀಕಾರ ಸಮಾರಂಭ ಆಯೋಜನೆಗೊಂಡಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಂತೆಯೇ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಅವರಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದ್ದರಿಂದ ತಾನು ಯಾವುದೇ ವಿಷಯಕ್ಕೂ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಬಂದಿಲ್ಲ. ಈ ಅಚ್ಚುಕಟ್ಟಿನ ಕಾರ್ಯಕ್ರಮಕ್ಕೆ ಕ್ಲಬ್ ಪದಾಧಿಕಾರಿ , ಸದಸ್ಯರೇ ಕಾರಣರು. ಇಡೀ ರೋಟರಿ ವರ್ಷವನ್ನು ಇದೇ ರೀತಿಯ ಒಗ್ಗಟ್ಟಿನಿಂದ ನಡೆಸಿಕೊಂಡು ಬರುತ್ತೇವೆ ಎಂದರು.
ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿದ ಝೋನ್ 5ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ಪಿ. ರೋಟರಿಯ ಸೇವಾ ಭಾವನೆಯನ್ನು ಸದಸ್ಯರಿಗೆ ತಿಳಿಹೇಳಿ ಹೊಸಬರನ್ನು ಸೇರಿಸಿಕೊಳ್ಳಿ ಎಂದ ಅವರು, ಚಂದ್ರಹಾಸ ರೈ ಅವರು ಕಂಡ ಕನಸು ನನಸಾಗಲು ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.
ಝೋನ್ 5ರ ಝೋನಲ್ ಲೆಫ್ಟಿನೆಂಟ್ ಉಮಾನಾಥ್ ಪಿ.ಬಿ., ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಸುಭಾಶ್ ರೈ ಬಿ. ಶುಭಹಾರೈಸಿದರು.
ಸನತ್ ರೈ, ದಿವಾಕರ್ ರೈ, ಡಾ. ರಾಜೇಶ್ ಬೆಜ್ಜಂಗಳ ಅವರು ಕ್ಲಬ್ ಸೇವಾ ಚಟುವಟಿಕೆಗಳನ್ನು ನಿರ್ವಹಿಸಿದರು. ನಿರ್ಗಮಿತ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಅವರನ್ನು ಸನ್ಮಾನಿಸಲಾಯಿತು.
ದೀಪಿಕಾ ವಸಂತ್ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಮುಕ್ವೆ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ವಸಂತ್ ಶಂಕರ್ ವರದಿ ವಾಚಿಸಿದರು. ಪದಪ್ರದಾನ ಅಧಿಕಾರಿಯವರ ಪರಿಚಯವನ್ನು ಡಾ. ರಾಜೇಶ್ ಬೆಜ್ಜಂಗಳ ಮುಖ್ಯ ಅತಿಥಿಗಳ ಪರಿಚಯವನ್ನು ಭಾರತಿ ಎಸ್. ಹಾಗೂ ಶಿವರಾಮ ಎಂ.ಎಸ್. ಸಭೆಯ ಮುಂದಿಟ್ಟರು. ಕ್ಲಬ್ ಗೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಪದ್ಮನಾಭ ಶೆಟ್ಟಿ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಜಯಪ್ರಕಾಶ್ ಎ.ಎಲ್. ವಂದಿಸಿದರು. ಡಾ. ರಾಮಚಂದ್ರ ಹಾಗೂ ಭಾರತಿ ಎಸ್. ರೈ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾಗಿ ಪದಸ್ವೀಕಾರ ಮಾಡಿದ ಚಂದ್ರಹಾಸ ರೈ | ರೋಟರಿಯ ಉದ್ದೇಶ ಈಡೇರಲು ಕಾರ್ಯತತ್ಪರರಾಗಿ: ಡಾ. ಭಾಸ್ಕರ್ ಎಸ್.
What's your reaction?
- 794c
- 794cc
- 7ai technology
- 7ajjavara
- 7alwas
- 7apology
- 7artificial intelegence
- 6avg
- 6bihar minister
- 6bjp
- 6bjp leader
- 6bjp national president
- 6bt ranjan
- 6co-operative
- 6coastal
- 6crime
- 6crime news
- 5cyclothon
- 5darmasthala
- 5death news
- 5dust bin
- 5education
- 5fraud
- 5gl
- 5gods own country
- 5gold
- 4google for education
- 4independence
- 4jewel
- 4jewellers
- 4jnana vikasa
- 4karnataka state
- 4kerala village
- 4kukke - kollur temple
- 4lokayuktha
- 3lokayuktha raid
- 3manipal
- 3minister krishna bairegowda
- 3mla ashok rai
- 3mohan alwa
- 3mudubidre
- 3nidana news
- 3nirvathu mukku
- 3nitin nabin
- 2police
- 2ptr tahasildar
- 2puttur
- 2puttur news
- 2puttur tahasildar
- 2republic
- 2revenue
- 2revenue department
- 2revenue minister
- 1school
- 1senior citizen
- 1silver
- 1society
- 1sowmya
- 1students
- 1tahasildar
- 1tahasildar absconded
- 1teachers
- 0tour
- 0trending
- 0udupi
- 0wastage
Related Posts
ರಂಜಾನ್ ಹಿನ್ನೆಲೆ: ಪುತ್ತೂರಿನಲ್ಲಿ ಶಾಂತಿ ಸಭೆ | ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!! ದೇವಳ ಮುಂಭಾಗ ಭಿಕ್ಷುಕರ ಹಾವಳಿ!!
ಪುತ್ತೂರು: ಪೊಲೀಸರು ಇರುವುದು ನಮ್ಮ ರಕ್ಷಣೆಗೆ ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು. ಕಾನೂನು…
ರೋಹಿಣಿ ನೆಹರುನಗರ ಅವರಿಗೆ ಶಿವಶರಣೆ ಗಂಗಾಬಿಕೆ ಪುರಸ್ಕಾರ
ಪುತ್ತೂರು: ಎಂ.ಪಿ. ರೋಹಿಣಿ ರಾಘವ ಆಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಶಿವ ಶರಣೆ ಗಂಗಾಬಿಕೆ…
ಪುತ್ತೂರು: ನಾಳೆ ಇಲ್ಲೆಲ್ಲಾ ಇರಲ್ಲ ಕರೆಂಟ್!!
ಪುತ್ತೂರು: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಫೆ. 26ರಂದು ಪುತ್ತೂರಿನ ಹಲವು ಕಡೆ ವಿದ್ಯುತ್…
ಡಾ. ಯದುರಾಜ್, ಡಾ. ಜೈನಾಬ ಸುನು ಆಲಿ, ಡಾ. ಅಜಯ್ ಅವರಿಗೆ ಸನ್ಮಾನ | ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರಿಂದ ಗೌರವ
ಪುತ್ತೂರು ಹಾಗೂ ಕಡಬ ತಾಲೂಕು ವಿಕಲ ಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ…
ಪುತ್ತೂರು ಜನರಲ್ಲಿ ಆತಂಕ ಹುಟ್ಟಿಸಿದ ಜೆಟ್ ಹಾರಾಟ – ಸಮೀಕ್ಷೆ ಕಾರ್ಯವೆಂದು ಮಾಹಿತಿ
ಪುತ್ತೂರು: ನಗರದ ಆಕಾಶದಲ್ಲಿ ಜೆಟ್ ವಿಮಾನವೊಂದು ಕಡಿಮೆ ಎತ್ತರದಲ್ಲಿ ಹಲವು ಬಾರಿ ಸುತ್ತು ಹಾಕಿ…
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಆನೆ ಕಾರ್ಯಪಡೆ: ಸರ್ಕಾರದ ಮಹತ್ವದ ಆದೇಶ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗಕ್ಕೆ ಪ್ರತ್ಯೇಕ ಆನೆ ಕಾರ್ಯಪಡೆಯನ್ನು…
ಗೃಹಪ್ರವೇಶದಲ್ಲಿ ಜನಪ್ರತಿನಿಧಿಗಳಾದ ಗೀತಾ, ಯತೀಶ್ ದೇವ, ಹರೀಶ್ ನಾಯಕ್ ಅವರಿಗೆ ಸನ್ಮಾನ | ಆರ್ಯಾಪು ಗ್ರಾಪಂ ಅಧ್ಯಕ್ಷ, ಸದಸ್ಯರಾಗಿ ಉತ್ತಮ ಕಾರ್ಯನಿರ್ವಹಣೆಗೆ ಅಭಿನಂದನೆ
ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೀತಾ, ಸದಸ್ಯರಾಗಿದ್ದ ಯತೀಶ್ ದೇವ ಹಾಗೂ…
ಪುತ್ತೂರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ
ಪುತ್ತೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು…
ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ
ಪುತ್ತೂರು: ಪುತ್ತೂರು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕಸವನ್ನು ತುಂಬಿಸುವ…
ಮಹಿಳಾ ಕಾಲೇಜು ಪ್ರಾಂಶುಪಾಲರ ಅಮಾನತು: ಶಾಸಕರ ಸೇಡಿನ ರಾಜಕಾರಣ-ಮಠಂದೂರು
ಪುತ್ತೂರು: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತು ಮಾಡಿರುವ ಕ್ರಮ…























