Gl
ಸ್ಥಳೀಯ

ಪುತ್ತೂರು ವಕೀಲರ ಸಂಘದ ವತಿಯಿಂದ ಇ ಕೋರ್ಟ್ ಕಾರ್ಯಾಗಾರ

ಪುತ್ತೂರು: ಇಲ್ಲಿನ ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖೆಯ ಆಶ್ರಯದಲ್ಲಿ ವಕೀಲರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಇ ಕೋರ್ಟ್ ಮಾಹಿತಿ ಕಾರ್ಯಾಗಾರ ಜೂನ್‌ 13ರಂದು ವಕೀಲರ ಪರಾಶರ ಸಭಾಂಗಣದಲ್ಲಿ ಜರುಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖೆಯ ಆಶ್ರಯದಲ್ಲಿ ವಕೀಲರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಇ ಕೋರ್ಟ್ ಮಾಹಿತಿ ಕಾರ್ಯಾಗಾರ ಜೂನ್‌ 13ರಂದು ವಕೀಲರ ಪರಾಶರ ಸಭಾಂಗಣದಲ್ಲಿ ಜರುಗಿತು.

Pashupathi

ಕಾರ್ಯಾಗಾರವನ್ನು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾ ಡಿ ಉದ್ಘಾಟಿಸಿ, ಇ ಕೋರ್ಟ್ ಬಗ್ಗೆ ಮಾಹಿತಿ ಪ್ರತಿಯೊಬ್ಬ ವಕೀಲರಿಗೆ ಅಗತ್ಯವಿದ್ದು ಇದರ ಪ್ರಯೋಜನ ಪಡೆಯಬೇಕು ಎಂದರು.

akshaya college

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಜಿ ಜಗನ್ನಾಥ ರೈ ವಹಿಸಿದ್ದರು.

ವೇದಿಕೆಯಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಮೋನಪ್ಪ‌ ಎಂ, ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ ಎನ್., ಕೋಶಾಧಿಕಾರಿ ಮಹೇಶ್ ಕೆ. ಸವಣೂರು, ಜತೆ ಕಾರ್ಯದರ್ಶಿ ಮಮತ ಸುವರ್ಣ ಬಿ., ಸಂಪನ್ಮೂಲ ವ್ಯಕ್ತಿ ಪ್ರವೀಣ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts