ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ವತಿಯಿಂದ ದೇವಾಲಯಕ್ಕೆ ಅಕ್ಕಿ ಹಾಗೂ ಇನ್ನಿತರ ಸುವಸ್ತುಗಳನ್ನು ಅನ್ನದಾನಕ್ಕಾಗಿ ಸಮರ್ಪಣೆ ಮಾಡಲಾಯಿತು.
ಪ್ರತಿ ತಿಂಗಳು ಸಮಿತಿ ವತಿಯಿಂದ ಸುಮಾರು 30 ಸಾವಿರ ರೂ.ನ ಸಾಮಾಗ್ರಿಗಳನ್ನು ದೇವಾಲಯಕ್ಕೆ ಸಮರ್ಪಣೆ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ, ರಾಜೇಶ್, ಅಶೋಕ್ ಕುಮಾರ್ ಪುತ್ತಿಲ, ಕೃಷ್ಣ ನಾಯ್ಕ ಕೆನರಾ ಬ್ಯಾಂಕ್, ಜಯರಾಮ ರೈ, ಮೋಹನ್ ಕುಮಾರ್ ತೆಂಕಿಲ, ವಾಸುದೇವ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.























