ಕರಾವಳಿ

ಏಳು ರಸ್ತೆಗಳ ಮರುಡಾಮರೀಕರಣಕ್ಕೆ ಶಾಸಕರ ಸೂಚನೆ

Avg

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ನಗರ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಳು ರಸ್ತೆಗಳನ್ನು ಮರುಡಾಮರಿಕರಣ ಮಾಡುವಂತೆ ಶಾಸಕರಾದ ಅಶೋಕ್ ರೈ ಅವರು ಸೂನೆ ನೀಡಿದ್ದಾರೆ, ಅದರಂತೆ ಶೀಘ್ರವೇ ಈ ಏಳು ರಸ್ತೆಗಳು ಮರುಡಾಮರೀಕರಣವಾಗಲಿದೆ.

maithri

ಯಾವೆಲ್ಲಾ ರಸ್ತೆಗಳು?

ಅರ್ಕದಿಂದ ಹಣಿಯಾರು ರಸ್ತೆ, ಪಾಟ್ರಿಕೋಡಿ- ಆನಡ್ಕ ರಸ್ತೆ, ಸಾಜದಿಂದ ಬುಳೇರಿಕಟ್ಟೆ ರಸ್ತೆ, ಅಳಕೆಮಜಲಿನಿಂದ ವಡ್ಯರ್ಪೆ ರಸ್ತೆ, ವಿನಾಯಕನಗರ ಮಠಂಂತಬೆಟ್ಟು- ದೋರ್ಮ ರಸ್ತೆ, ಪದಡ್ಕದಿಂದ ಮೈಂದನಡ್ಕ ರಸ್ತೆ ಹಾಗೂ ಪುತ್ತೂರು ಬೋಳಂತಾಯದಿಂದ ದರ್ಬೆ ತನದ ರಸ್ತೆಗಳು ಮರುಡಾಮರೀಕರಣವಾಗಲಿದೆ. ಕಳೆದ ಮಳೆಗಾಲದಲ್ಲಿ ಈ ರಸ್ತೆಗಳು ಸಂಪೂರ್ಣ ಹಾನಿಗೊಳಗಾಗಿದ್ದು ಎಲ್ಲಾ ರಸ್ತೆಗಳನ್ನು ಮರುಡಾಮರೀಕರಣ ಮಾಡುವಂತೆ ಶಾಸಕರು ಸೂಚನೆ ನೀಡಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ.

ಈ ಬಾರಿ ಮಳೆ ಹೆಚ್ಚಿರುವ ಕಾರಣ ರಸ್ತೆಗಳು ಹೊಂಡ ಬಿದ್ದಿದೆ, ಹೆಚ್ಚಾಗಿ ಹೊಂಡಗಳು ಬಿದ್ದಿರುವ ಏಳು ರಸ್ತೆಗಳನ್ನು ಮರುಡಾಮರೀಕರಣಕ್ಕೆ ಆದೇಶಿಸಲಾಗಿದೆ. ಮಾಣಿ- ಸಮಪಾಜೆ ರಾ. ಹೆದ್ದಾರಿ ೨೭೫ ರ ತೇಪೆ ಕಾಮಗಾರಿಗೂ ಸೂಚನೆ ನೀಡಲಾಗಿದ್ದು ಕಾಮಗಾರಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿ ಕೆಲಸಗಳು ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿ!! ರಕ್ಷಣಾ ಕಾರ್ಯಾಚರಣೆ ನಡೆಸಿದ ಈಶ್ವರ್ ಮಲ್ಪೆ, ಅಗ್ನಿಶಾಮಕ ಸಿಬ್ಬಂದಿ!

ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯನ್ನು ರಕ್ಷಿಸಿದ ಘಟನೆ ಇಂದು ಬೆಳಗ್ಗೆ ಉಡುಪಿಯ ಕೆಮ್ಮಣ್ಣು…

ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ನಲ್ಲಿ ಜಿಯೋ ಡಿಜಿಟಲ್ ಸಂಪರ್ಕ ಬಲವರ್ಧನೆ: ಜಿಯೋ ಮೊಬೈಲ್ ಟವರ್ ಉದ್ಘಾಟನೆ

ಉಜಿರೆ: ಬೆಳ್ತಂಗಡಿ ಬಳಿ ರೆಂಕೆದಗುತ್ತು ಎಂಬಲ್ಲಿರುವ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್…