tamanvi
ಕರಾವಳಿ

ಏಳು ರಸ್ತೆಗಳ ಮರುಡಾಮರೀಕರಣಕ್ಕೆ ಶಾಸಕರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ನಗರ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಳು ರಸ್ತೆಗಳನ್ನು ಮರುಡಾಮರಿಕರಣ ಮಾಡುವಂತೆ ಶಾಸಕರಾದ ಅಶೋಕ್ ರೈ ಅವರು ಸೂನೆ ನೀಡಿದ್ದಾರೆ, ಅದರಂತೆ ಶೀಘ್ರವೇ ಈ ಏಳು ರಸ್ತೆಗಳು ಮರುಡಾಮರೀಕರಣವಾಗಲಿದೆ.

ಯಾವೆಲ್ಲಾ ರಸ್ತೆಗಳು?

ಅರ್ಕದಿಂದ ಹಣಿಯಾರು ರಸ್ತೆ, ಪಾಟ್ರಿಕೋಡಿ- ಆನಡ್ಕ ರಸ್ತೆ, ಸಾಜದಿಂದ ಬುಳೇರಿಕಟ್ಟೆ ರಸ್ತೆ, ಅಳಕೆಮಜಲಿನಿಂದ ವಡ್ಯರ್ಪೆ ರಸ್ತೆ, ವಿನಾಯಕನಗರ ಮಠಂಂತಬೆಟ್ಟು- ದೋರ್ಮ ರಸ್ತೆ, ಪದಡ್ಕದಿಂದ ಮೈಂದನಡ್ಕ ರಸ್ತೆ ಹಾಗೂ ಪುತ್ತೂರು ಬೋಳಂತಾಯದಿಂದ ದರ್ಬೆ ತನದ ರಸ್ತೆಗಳು ಮರುಡಾಮರೀಕರಣವಾಗಲಿದೆ. ಕಳೆದ ಮಳೆಗಾಲದಲ್ಲಿ ಈ ರಸ್ತೆಗಳು ಸಂಪೂರ್ಣ ಹಾನಿಗೊಳಗಾಗಿದ್ದು ಎಲ್ಲಾ ರಸ್ತೆಗಳನ್ನು ಮರುಡಾಮರೀಕರಣ ಮಾಡುವಂತೆ ಶಾಸಕರು ಸೂಚನೆ ನೀಡಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ.

ಈ ಬಾರಿ ಮಳೆ ಹೆಚ್ಚಿರುವ ಕಾರಣ ರಸ್ತೆಗಳು ಹೊಂಡ ಬಿದ್ದಿದೆ, ಹೆಚ್ಚಾಗಿ ಹೊಂಡಗಳು ಬಿದ್ದಿರುವ ಏಳು ರಸ್ತೆಗಳನ್ನು ಮರುಡಾಮರೀಕರಣಕ್ಕೆ ಆದೇಶಿಸಲಾಗಿದೆ. ಮಾಣಿ- ಸಮಪಾಜೆ ರಾ. ಹೆದ್ದಾರಿ ೨೭೫ ರ ತೇಪೆ ಕಾಮಗಾರಿಗೂ ಸೂಚನೆ ನೀಡಲಾಗಿದ್ದು ಕಾಮಗಾರಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿ ಕೆಲಸಗಳು ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಕಾಳುಮೆಣಸು ಬೆಳೆಗಾರರಿಗೆ ಗುಡ್‌ನ್ಯೂಸ್; ವಿವಿಧ ಯೋಜನೆಗಳಡಿ ಆರ್ಥಿಕ ನೆರವು: ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ವಿವಿಧ ಸರ್ಕಾರಿ ಯೋಜನೆಗಳಡಿ ಆರ್ಥಿಕ ನೆರವು…

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…