ಕ್ಯಾಂಪ್ಕೋ ವಿಟ್ಲ ಶಾಖೆಯ ಸದಸ್ಯ ಲೋಹಿತಾಕ್ಷ ಬಿ. ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ವತಿಯಿಂದ ಧನಸಹಾಯವನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಕ್ಯಾಂಪ್ಕೋದ ಸಾಂತ್ವನ (ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ) ಯೋಜನೆಯಡಿ ಲೋಹಿತಾಕ್ಷ ಬಿ. ಅವರಿಗೆ 96355 ರೂ.ವನ್ನು ಬುಧವಾರ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಹಸ್ತಾಂತರ ಮಾಡಿದರು.
ಕ್ಯಾಂಪ್ಕೋದ ಪುತ್ತೂರು ರೀಜನ್ ಚೀಫ್ ಮೆನೇಜರ್ ಪ್ರಕಾಶ್ ಕುಮಾರ್ ಶೆಟ್ಟಿ, ವಿಟ್ಲ ಶಾಖಾಧಿಕಾರಿ ಅಮರೇಶ್ ಪಿ., ಸದಸ್ಯರ ಮನೆಯವರು ಉಪಸ್ಥಿತರಿದ್ದರು.
























