Gl
ರಾಜ್ಯ ವಾರ್ತೆಸ್ಥಳೀಯ

ಶಾಲಾ ಮಕ್ಕಳ ಬಸ್ಸ್ ಪಂಚರ್ ತೆಗೆದ ಗಸ್ತು ಪೋಲಿಸರು

ಮಕ್ಕಳನ್ನು ಹೊತ್ತ ಬಸ್ಸು ಹೊರಟು ಅಂತ್ರವಳ್ಳಿ ಬಳಿ 6 ಗಂಟೆ ವೇಳೆಗೆ ಬಸ್ಸಿನ ಹಿಂದಿನ ಚಕ್ರ ಪಂಚರ್ ಆಗಿದ್ದು, ಬಸ್ಸಿನಲ್ಲಿ ಚಾಲಕನನ್ನು ಹೊರತುಪಡಿಸಿ ಬೇರೆ ಗಂಡಸು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುವ ಮಹಿಳಾ ಸಹಾಯಕರಿದ್ದರೂ ಅವರು ಬಸ್ಸಿನ ಚಕ್ರ ಬದಲಿಸುವಷ್ಟು ಶಕ್ತರಾಗಿರಲಿಲ್ಲ. 

ಈ ಸುದ್ದಿಯನ್ನು ಶೇರ್ ಮಾಡಿ

ಸಂಜೆ 5.30ರ ವೇಳೆಗೆ ಕುಮಟಾ ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರದ ಮಕ್ಕಳನ್ನು ಹೊತ್ತು ಕತಗಾಲ ಮಾರ್ಗವಾಗಿ ಬಸ್ಸು ಹೊರಟು ಅಂತ್ರವಳ್ಳಿ ಬಳಿ 6 ಗಂಟೆ ವೇಳೆಗೆ ಬಸ್ಸಿನ ಹಿಂದಿನ ಚಕ್ರ ಪಂಚರ್ ಆಗಿದ್ದು, ಬಸ್ಸಿನಲ್ಲಿ ಚಾಲಕನನ್ನು ಹೊರತುಪಡಿಸಿ ಬೇರೆ ಗಂಡಸು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುವ ಮಹಿಳಾ ಸಹಾಯಕರಿದ್ದರೂ ಅವರು ಬಸ್ಸಿನ ಚಕ್ರ ಬದಲಿಸುವಷ್ಟು ಶಕ್ತರಾಗಿರಲಿಲ್ಲ. 

rachana_rai
Pashupathi
akshaya college
Balakrishna-gowda

ಕತ್ತಲಾಗುವ ಮುನ್ನ ಮನೆ ಸೇರಬೇಕು ಎಂಬ ನಿಟ್ಟಿನಲ್ಲಿ ಮಕ್ಕಳು ಕಳವಳ ವ್ಯಕ್ತಪಡಿಸುತ್ತಿದ್ದರು.

pashupathi

ಅದೇ ಸಮಯಕ್ಕೆ ಶಿರಸಿ ಕುಮಟಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೈವೆ ಪೆಟ್ರೋಲ್‌ ಪೊಲೀಸರು ಚಾಲಕನ ಬಳಿ ಬಸ್ಸಿನ ಸಮಸ್ಯೆ ಆಲಿಸಿದರು. ಪೊಲೀಸ್ ಕಾನ್ಸೆಬಲ್ ಕಿರಣ ನಾಯ್ಕ ಸಮವಸ್ತ್ರದಲ್ಲಿಯೇ ಜಾಕ್ ಏರಿಸಿ, ಪಂಚರ್ ಆದ ಚಕ್ರ ತೆಗೆದರು. ಹೈವೇ ಪೆಟ್ರೋಲ್ ವಾಹನದ ಚಾಲಕ ದೇವಾನಂದ ನಾಯ್ಕ ಸಹ ಇನ್ನೊಂದು ಚಕ್ರ ತಂದು ಬಸ್ಸಿಗೆ ಜೋಡಿಸಿದರು. ಅಂದಾಜು 30 ನಿಮಿಷದ ನಂತರ ಬಸ್ಸು ಅಲ್ಲಿಂದ ಚಲಿಸಿ, ಮಕ್ಕಳನ್ನು ಮನೆಗೆ ಮುಟ್ಟಿಸಿತು. ಆ ಬಸ್ಸಿನಲ್ಲಿ ಅಂದಾಜು 20 ಮಕ್ಕಳಿದ್ದರು. ಹೆಬ್ಬೆಕಿಲ್ ಹಾಗೂ ಕತಗಾಲಗೆ ಅವರು ತೆರಳುವವರಿದ್ದರು. ಬಸ್ ಪಂಚರ್ ಆದ ಪರಿಣಾಮ ಒಂದು ತಾಸು ತಡವಾಗಿ ಮನೆಗೆ ಮುಟ್ಟಿದರು.

ಹೈವೆ ಪೆಟ್ರೋಲಿನವರು ಹಣ ಮಾಡಲು ಮಾತ್ರ ಸೀಮಿತ’ ಎಂದು ಕುಮಟಾ ಶಾಸಕ ದಿನಕರ ವಿಧಾನಸಭಾ ಅಧಿವೇಶನದಲ್ಲಿ ಗುಡುಗಿದ್ದು, ಅದಕ್ಕೆ ವಿರುದ್ಧವಾಗಿ ಮಕ್ಕಳ ಸೇವೆ ಮಾಡುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗಳಿಸಿದರು. `ಮಕ್ಕಳು ಇನ್ನೂ ಮನೆಗೆ ಬರಲಿಲ್ಲ’ ಎಂಬ ಪಾಲಕರ ಆತಂಕವನ್ನು ಪೊಲೀಸರು ದೂರ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಬೀದಿನಾಯಿಗಳಿಗೂ ಬಾಡೂಟದ ಭಾಗ್ಯ! ಬೀದಿನಾಯಿಗಳಿಗೆ ಕಾಳಜಿ ವ್ಯಕ್ತಪಡಿಸಿದ ಟೆಂಡರ್ ಕರೆದ ರಾಜ್ಯ ಸರಕಾರ!!

ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ಸ್ಥಳೀಯ ಸಂಸ್ಥೆಯಿಂದ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್‌ ಪಾಟೀಲ್‌ ಅವರಿಗೆ ಪುತ್ತೂರು ವಕೀಲ ಸಂಘದಿಂದ ಸ್ವಾಗತ, ಅಭಿನಂದನೆ

ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಪಾಟೀಲ್‌ ಅವರು ಜೂನ್‌ 26…

1 of 121