tamanvi
ರಾಜ್ಯ ವಾರ್ತೆಸ್ಥಳೀಯ

ಶಾಲಾ ಮಕ್ಕಳ ಬಸ್ಸ್ ಪಂಚರ್ ತೆಗೆದ ಗಸ್ತು ಪೋಲಿಸರು

D_shiva_bhat
ಮಕ್ಕಳನ್ನು ಹೊತ್ತ ಬಸ್ಸು ಹೊರಟು ಅಂತ್ರವಳ್ಳಿ ಬಳಿ 6 ಗಂಟೆ ವೇಳೆಗೆ ಬಸ್ಸಿನ ಹಿಂದಿನ ಚಕ್ರ ಪಂಚರ್ ಆಗಿದ್ದು, ಬಸ್ಸಿನಲ್ಲಿ ಚಾಲಕನನ್ನು ಹೊರತುಪಡಿಸಿ ಬೇರೆ ಗಂಡಸು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುವ ಮಹಿಳಾ ಸಹಾಯಕರಿದ್ದರೂ ಅವರು ಬಸ್ಸಿನ ಚಕ್ರ ಬದಲಿಸುವಷ್ಟು ಶಕ್ತರಾಗಿರಲಿಲ್ಲ. 

ಈ ಸುದ್ದಿಯನ್ನು ಶೇರ್ ಮಾಡಿ

ಸಂಜೆ 5.30ರ ವೇಳೆಗೆ ಕುಮಟಾ ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರದ ಮಕ್ಕಳನ್ನು ಹೊತ್ತು ಕತಗಾಲ ಮಾರ್ಗವಾಗಿ ಬಸ್ಸು ಹೊರಟು ಅಂತ್ರವಳ್ಳಿ ಬಳಿ 6 ಗಂಟೆ ವೇಳೆಗೆ ಬಸ್ಸಿನ ಹಿಂದಿನ ಚಕ್ರ ಪಂಚರ್ ಆಗಿದ್ದು, ಬಸ್ಸಿನಲ್ಲಿ ಚಾಲಕನನ್ನು ಹೊರತುಪಡಿಸಿ ಬೇರೆ ಗಂಡಸು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುವ ಮಹಿಳಾ ಸಹಾಯಕರಿದ್ದರೂ ಅವರು ಬಸ್ಸಿನ ಚಕ್ರ ಬದಲಿಸುವಷ್ಟು ಶಕ್ತರಾಗಿರಲಿಲ್ಲ. 

maithri

ಕತ್ತಲಾಗುವ ಮುನ್ನ ಮನೆ ಸೇರಬೇಕು ಎಂಬ ನಿಟ್ಟಿನಲ್ಲಿ ಮಕ್ಕಳು ಕಳವಳ ವ್ಯಕ್ತಪಡಿಸುತ್ತಿದ್ದರು.

ಅದೇ ಸಮಯಕ್ಕೆ ಶಿರಸಿ ಕುಮಟಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೈವೆ ಪೆಟ್ರೋಲ್‌ ಪೊಲೀಸರು ಚಾಲಕನ ಬಳಿ ಬಸ್ಸಿನ ಸಮಸ್ಯೆ ಆಲಿಸಿದರು. ಪೊಲೀಸ್ ಕಾನ್ಸೆಬಲ್ ಕಿರಣ ನಾಯ್ಕ ಸಮವಸ್ತ್ರದಲ್ಲಿಯೇ ಜಾಕ್ ಏರಿಸಿ, ಪಂಚರ್ ಆದ ಚಕ್ರ ತೆಗೆದರು. ಹೈವೇ ಪೆಟ್ರೋಲ್ ವಾಹನದ ಚಾಲಕ ದೇವಾನಂದ ನಾಯ್ಕ ಸಹ ಇನ್ನೊಂದು ಚಕ್ರ ತಂದು ಬಸ್ಸಿಗೆ ಜೋಡಿಸಿದರು. ಅಂದಾಜು 30 ನಿಮಿಷದ ನಂತರ ಬಸ್ಸು ಅಲ್ಲಿಂದ ಚಲಿಸಿ, ಮಕ್ಕಳನ್ನು ಮನೆಗೆ ಮುಟ್ಟಿಸಿತು. ಆ ಬಸ್ಸಿನಲ್ಲಿ ಅಂದಾಜು 20 ಮಕ್ಕಳಿದ್ದರು. ಹೆಬ್ಬೆಕಿಲ್ ಹಾಗೂ ಕತಗಾಲಗೆ ಅವರು ತೆರಳುವವರಿದ್ದರು. ಬಸ್ ಪಂಚರ್ ಆದ ಪರಿಣಾಮ ಒಂದು ತಾಸು ತಡವಾಗಿ ಮನೆಗೆ ಮುಟ್ಟಿದರು.

ಹೈವೆ ಪೆಟ್ರೋಲಿನವರು ಹಣ ಮಾಡಲು ಮಾತ್ರ ಸೀಮಿತ’ ಎಂದು ಕುಮಟಾ ಶಾಸಕ ದಿನಕರ ವಿಧಾನಸಭಾ ಅಧಿವೇಶನದಲ್ಲಿ ಗುಡುಗಿದ್ದು, ಅದಕ್ಕೆ ವಿರುದ್ಧವಾಗಿ ಮಕ್ಕಳ ಸೇವೆ ಮಾಡುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗಳಿಸಿದರು. `ಮಕ್ಕಳು ಇನ್ನೂ ಮನೆಗೆ ಬರಲಿಲ್ಲ’ ಎಂಬ ಪಾಲಕರ ಆತಂಕವನ್ನು ಪೊಲೀಸರು ದೂರ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ | ಪುತ್ತೂರು ಗೃಹಲಕ್ಷ್ಮೀ ಸಂಭ್ರಮಾಚರಣೆಯಲ್ಲಿ ಉಮಾನಾಥ ಶೆಟ್ಟಿ ಪೆರ್ನೆ

ಪುತ್ತೂರು: ಗೃಹ ಲಕ್ಷ್ಮೀ ಸೇರಿದಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಮಂದಿ ಬದುಕು…

1 of 159