ಪುತ್ತೂರು: ಮುತ್ತು ಬೆಳೆದ ಪುತ್ತೂರಿನ ಅತೀ ಎತ್ತರದ ಪ್ರದೇಶವಾದ ಬಿರುಮಲೆ ಬೆಟ್ಟದ ಶೃಂಗದಲ್ಲಿ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಬಿರುಮಲೆಯ ಗಾಂಧಿ ಮಂಟಪದಿಂದ ಕಾಲ್ನಡಿಗೆಯ ದಾರಿಯಲ್ಲಿ ಸಾಗಿದರೆ ಬೆಟ್ಟದ ತುದಿ ತಲುಪುತ್ತದೆ. ಈ ತುತ್ತತುದಿಯಲ್ಲಿ ನಿಂತು ಕಣ್ಣಾಡಿಸಿದರೆ, ಪುತ್ತೂರಿನ ನೋಟ ಕಣ್ಸೆರೆ. ಇಲ್ಲಿನ ವಿಹಂಗಮ ನೋಟದ ನಡುವೆ, ಬೆಳಗ್ಗಿನ ಆಹ್ಲಾದಕರ ವಾತಾವರಣದ ನಡುವೆ ಧ್ವಜಾರೋಹಣಗೈದು, ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಂ.ಎಸ್. ಅಮ್ಮಣ್ಣಾಯ ಶುಭಹಾರೈಸಿದರು.
ಬಿರುಮಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗಜ್ಜೀವನ್ ದಾಸ್ ರೈ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜಾ, ಧನ್ವಂತರಿ ಆಸ್ಪತ್ರೆಯ ಡಾ. ರವೀಂದ್ರ, ಬಿರುಮಲೆ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಮುಖರಾದ ಶಿವರಾಮ ಆಳ್ವ, ಮನೋಜ್, ಕೇಶವ್, ಅನಿಲ್ ಬಲ್ಯಾಯ, ಅವಿನಾಶ್, ಅಡ್ವೊಕೇಟ್ ಕೃಷ್ಣಪ್ರಸಾದ್, ವಿವೇಕಾನಂದ ಸಿ.ಬಿ.ಎಸ್.ಇ.ಯ ಸ್ಕೌಟ್ ಹಾಗೂ ಗೈಡ್ಸ್ ತಂಡ, ಬಿರುಮಲೆ ಯುವಕ ಮಂಡಲ ಪದಾಧಿಕಾರಿಗಳು ಹಾಗೂ ಸದಸ್ಯರು, ಬಿರುಮಲೆ ಹಾಸ್ಟೆಲ್ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಬಿರುಮಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಪಾಧ್ಯಕ್ಷ ನಿತಿನ್ ಪಕ್ಕಳ ಸ್ವಾಗತಿಸಿ, ಕಾರ್ಯದರ್ಶಿ ದತ್ತಾತ್ರೇಯ ರಾವ್ ವಂದಿಸಿದರು.
























