tamanvi
ಸ್ಥಳೀಯ

SPYSS ಪ್ರಶಿಕ್ಷಣ ಶಿಬಿರದಲ್ಲಿ ವಿಷ್ಣು ಸಹಸ್ರನಾಮ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರಗಳು ಯೋಗ ಜೀವನ ದರ್ಶನ 2025ರ ಅಂಗವಾಗಿ ಪುತ್ತೂರಿನಲ್ಲಿ ನಡೆಯುತ್ತಿರುವ ಪ್ರಶಿಕ್ಷಣ ಶಿಬಿರದ ಎರಡನೇ ದಿನವಾದ ಗುರುವಾರ ಸಂಜೆ ವಿಷ್ಣು ಸಹಸ್ರನಾಮ ಪಠಣ ನಡೆಯಿತು.
ಸುಭದ್ರ ಕಲಾಮಂದಿರದಲ್ಲಿ ಅಗ್ನಿಹೋತ್ರ, ವಿಷ್ಣು ಸಹಸ್ರನಾಮ ಪಠಣವನ್ನು ಅಶ್ವಿನಿ ಮತ್ತು ತಂಡ ನಡೆಸಿಕೊಟ್ಟರು. ಸತ್ಸಂಗವನ್ನು ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಸ್ಕೃತ ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಹಾಗೂ ಭಜನೆಯನ್ನು ಎಸ್.ಪಿ.ವೈ.ಎಸ್.ಎಸ್. ಮಂಗಳೂರಿನ ಧರಣೇಶ್ ನಡೆಸಿಕೊಟ್ಟರು.
ಚೈತ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಲೋಕಕಲ್ಯಾಣ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

maithri

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 127