ಧಾರ್ಮಿಕ

ಜ್ಞಾನ ವಿಕಾಸದಿಂದ ಗ್ರಾಮೀಣ ಮಹಿಳೆಯರ ವಿಕಾಸ: ಶ್ರದ್ದಾ ಅಮಿತ್

GL

ಈ ಸುದ್ದಿಯನ್ನು ಶೇರ್ ಮಾಡಿ

ಗ್ರಾಮೀಣ ಪ್ರದೇಶದ ಮಹಿಳೆಯರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸಬಲೀಕರಣ ಮಾಡುವ ಮೂಲಕ ಜ್ಞಾನ ವಿಕಾಸ ಕಾರ್ಯಕ್ರಮ ಮಹತ್ತರ ಪಾತ್ರವನ್ನು ವಹಿಸಿದೆ ಎಂದು ಬೆಂಗಳೂರು ಕ್ಷೇಮವನ ಕಾರ್ಯನಿರ್ವಹಣಾಧಿಕಾರಿ ಶೃದ್ಧಾ ಅಮಿತ್ ಹೇಳಿದರು.

ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಬಡಕೋಡಿಯಲ್ಲಿ ನಡೆದ ಜ್ಞಾನವಿಕಾಸ ಸದಸ್ಯರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮವು ಪ್ರಮುಖ ಪಾತ್ರವನ್ನು ವಹಿಸಿದೆ. ಈ ಕಾರ್ಯಕ್ರಮದಿಂದಾಗಿ ಮಹಿಳೆಯು ನಾಲ್ಕು ಗೋಡೆಗಳಿಂದ ಹೊರಗಡೆ ಬಂದು ಅನೇಕ ವಿಚಾರಗಳ ಬಗ್ಗೆ ಮಾಹಿತಿ ಪಡೆಯುವಂತಾಗಿದೆ. ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಂಡು ಆರ್ಥಿಕ ನೆರವಿನ ಸದ್ಬಳಕೆಯನ್ನು  ವಿವೇಚನಯುತವಾಗಿ ಬಳಸಿಕೊಂಡು ಕುಟುಂಬದ ಅಭಿವೃದ್ದಿಯನ್ನು ಇಂದು ಕಾಣುವಂತಾಗಿದೆ ಎಂದು ತಿಳಿಸಿದರು.

ಕಾರ್ಯಕಮದಲ್ಲಿ ಪ್ರಬುದ್ದ ಕೇಂದ್ರ ಸದಸ್ಯರಾದ ರಾಜೀವಿ ಮತ್ತು ವಸಂತಿ ಅವರು ಕೇಂದ್ರಕ್ಕೆ ಸೇರಿಕೊಂಡ ನಂತರ ಮನೆಯಲ್ಲಿ ಆದ ಪರಿವರ್ತನೆಯ ಬಗ್ಗೆ ಅನಿಸಿಕೆ ವ್ಯಕಪಡಿಸಿದರು.

ಕಾರ್ಯಕಮದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟಿಗಳಾದ ಸಂಪತ್‌ ಸಾಮ್ರಾಜ್ಯ, ಪ್ರಾದೇಶಿಕ ನಿರ್ದೇಶಕರರಾದ ಆನಂದ ಸುವರ್ಣ, ಗ್ರಾಮ ಪಂಚಾಯತ್ ಅದ್ಯಕ್ಷ ಉದಯ್‌, ಜನಜಾಗೃತಿ ವೇದಿಕೆಯ ಲಕ್ಷ್ಮಣ ಸುವರ್ಣ, ಮಹಾವೀರ ಹೆಗ್ಡೆ, ಮುನಿರಾಜ್‌ ಹೆಗ್ಡೆ, ಪ್ರಮುಖರಾದ ಜಯಂತ ಹೆಗ್ಡೆ, ವೇದ ಕುಮಾರ್‌ ಜೈನ್‌, ವಿಶ್ವನಾಥ ಕೋಟ್ಯಾನ್‌, ನಿರ್ದೇಶಕರು ದಿನೇಶ್‌, ಯೋಜನಾಧಿಕಾರಿ ಧನಂಜಯ್‌, ಜ್ಞಾನವಿಕಾಸ ಸಮಾನ್ವಯಾಧಿಕಾರಿ ವಿದ್ಯಾ, ಶಿರ್ತಾಡಿ ವಲಯದ ಮೇಲ್ವಿಚಾರಕಿ ಪುಷ್ಪ, ಒಕ್ಕೂಟದ ಅದ್ಯಕ್ಷ ಶೇಖರ್‌ ಪೂಜಾರಿ, ರವಿ ಎನ್, ಶೋಭಾ, ಸುಕೇಶ್  ಹಾಗೂ ಜ್ಞಾನವಿಕಾಸದ ಸದಸ್ಯರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಆರ್ ಆರ್ ಸ್ಕ್ರ್ಯಾಪ್ ಮಾಲಕ ಎಸ್.ಎ. ಇಸ್ಮಾಯಿಲ್

ಮಾಣಿ: ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆ ಮದ್ರಸಾ ಹಾಲ್ ನಲ್ಲಿ ನಡೆಯಿತು.…

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಭಾಗವತೆ ಕಾವ್ಯಶ್ರೀ ಅಜೇರು, ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗೆ ಉಮೇಶ್ ಮಿಜಾರು ಆಯ್ಕೆ

ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ…