tamanvi
ಅಪಘಾತಅಪರಾಧ

ಪೆಟ್ರೋಲ್ ಹಾಕಿ ಯಾಮಾರಿಸಿದ ಆಲ್ಟೋ ಕಾರು ಅಪಘಾತ! ಕಟ್ಟತ್ತಿಲ ನಿವಾಸಿ ಅಬೂಬಕ್ಕರ್’ಗೆ ಗಂಭೀರ ಗಾಯ!

D_shiva_bhat
ಪೆಟ್ರೋಲ್ ಹಾಕಿಸಿ ಹಣ ನೀಡದೇ ಯಾಮಾರಿಸಿ ಪರಾರಿಯಾದ ಆಲ್ಟೋ ಕಾರೊಂದು, ಅಪಘಾತಕ್ಕೀಡಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಸಮೀಪದ ವಾಲ್ತಾಜೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಪೆಟ್ರೋಲ್ ಹಾಕಿಸಿ ಹಣ ನೀಡದೇ ಯಾಮಾರಿಸಿ ಪರಾರಿಯಾದ ಆಲ್ಟೋ ಕಾರೊಂದು, ಅಪಘಾತಕ್ಕೀಡಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಸಮೀಪದ ವಾಲ್ತಾಜೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

maithri

ಆಲ್ಟೋ ಕಾರಲ್ಲಿದ್ದ ಇಬ್ಬರು ಮದ್ಯವ್ಯಸನಿಗಳಾಗಿದ್ದು, ಹಿಂದಿ ಭಾಷೆ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ.

ವಿಟ್ಲದ ಪೆಟ್ರೋಲ್ ಬಂಕಿಗೆ ಆಗಮಿಸಿದ ಆಲ್ಟೋ ಕಾರು, ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರಾರಿಯಾಗಿದೆ. ಮುಂದೆ ಸಾಲೆತ್ತೂರು ಮಾರ್ಗವಾಗಿ ಆಲ್ಟೋ ಕಾರು ಸಾಗಿದ್ದು, ಎದುರಿನಿಂದ ಬರುತ್ತಿದ್ದ ಬೈಕ್’ಗೆ ವಾಲ್ತಾಜೆ ಎಂಬಲ್ಲಿ ಡಿಕ್ಕಿ ಹೊಡೆದಿದೆ.

ಬೈಕ್ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕ್ಕರ್ ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರು ಹಾಗೂ ಮದ್ಯದ ನಶೆಯಲ್ಲಿ ತೆಲಾಡುತ್ತಿದ್ದ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117